‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ರಜತ್ ಮತ್ತು ಚೈತ್ರಾ ಕುಂದಾಪುರ (ಚೈತ್ರಾ ಕುಂದಾಪುರ) ಅವರು ಇದ್ದರು. ಜಗಳ ಮಾಡಿಕೊಂಡಿದ್ದ ಅವರು ನಂತರ ಆಪ್ತರಾದರು. ಚೈತ್ರಾ ಮದುವೆಯನ್ನು ರಜತ್ ಮುಂದೆ ನಿಂತು ಮಾಡಿಸಿದ್ದರು. ಅಣ್ಣ-ತಂಗಿ ರೀತಿ ಇದ್ದ ಚೈತ್ರಾ ಕುಂದಾಪುರ ಮತ್ತು ರಜತ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ (ಬಿಬಿಕೆ 12) ಶೋಗೆ ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಬಂದಿದ್ದರು. ಈ ಆಟದಲ್ಲಿ ಇಬ್ಬರ ನಡುವೆ ಕಿರಿಕ್ ಆಯಿತು. ರಾಜತ್ ಕುಟುಂಬದ ಬಗ್ಗೆ ಚೈತ್ರಾ ಮಾತಾಡಿದರು. ಇದರಿಂದ ರಜತ್ (ರಜತ್ ಕಿಶನ್) ಗರಂ ಆಗಿದ್ದಾರೆ. ‘ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಬಳಿಕ ಚೈತ್ರಾ ಬಗ್ಗೆ ಮಾತಾಡಲು ನನಗೆ ಇಷ್ಟವಿಲ್ಲ. ನಾವೆಲ್ಲ ಏನು ಮಾಡಿದ್ದೇವೆ ಎಂಬುದು ಅವರಿಗೆ ಗೊತ್ತಿರಬೇಕು. ಅವರು ನನ್ನ ಕುಟುಂಬದ ಬಗ್ಗೆ ಮಾತನಾಡುತ್ತಾರೆ ಅವರ ಬಗ್ಗೆ ನನಗೆ ಏನೂ ಕೇಳಬೇಡಿ, ನಾನು ಅವರ ಬಗ್ಗೆ ಮಾತನಾಡುವುದೂ ಇಲ್ಲ. ನನಗೆ ಅವರು ಯಾರು ಅಂತಲೇ ಗೊತ್ತಿಲ್ಲ. ನಾನು ನನ್ನ ಕುಟುಂಬ ಎಂದುಕೊಂಡಿದ್ದೆ. ಆದರೆ ಅವರು ನನ್ನ ಕುಟುಂಬದ ಬಗ್ಗೆ ಮಾತಾಡಿದ್ದು ನನಗೆ ಇಷ್ಟ ಆಗಲಿಲ್ಲ’ ಎಂದು ರಜತ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.