‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ (ಬಿಬಿಕೆ 12) ರಕ್ಷಿತಾ ಶೆಟ್ಟಿ ಅವರು ತಮ್ಮ ಆಟದ ಮೂಲಕ ಸಾಕಷ್ಟು ಗಮನ ಸೆಳೆಯುತ್ತಿದ್ದಾರೆ. ಯಾರೇ ಅವರ ವಿರುದ್ಧ ತಿರುಗಿ ಬಿದ್ದರೂ ಅದನ್ನು ಲೆಕ್ಕಿಸೋದಿಲ್ಲ. ಅಶ್ವಿನಿ ಗೌಡ ಅವರು ಮಾತನಾಡಲು ನಿಂತರೆ ಸುಮಾರಾಗಿ ಯಾರೂ ಎದುರುತ್ತರ ನೀಡಲು ಬರೋದಿಲ್ಲ. ಆದರೆ, ಗಿಲ್ಲಿ ನಟ ಹಾಗೂ ರಕ್ಷಿತಾ ಶೆಟ್ಟಿ ವಿರುದ್ಧ. ಅಶ್ವಿನಿ ಗೌಡ ಎದುರಿದ್ದಾರೆ ಎಂದರೆ ಅವರು ಖಡಾಖಂಡಿತವಾಗಿ ಉತ್ತರ ನೀಡುತ್ತಿದ್ದಾರೆ. ಇದು ಹಾಗೆಯೇ ಆಗಿದೆ. ಅಶ್ವಿನಿ ಗೌಡ ಅವರಿಗೆ ರಕ್ಷಿತಾ ಟಾಂಗ್ ಕೊಟ್ಟಿದ್ದಾರೆ.
ಬಿಗ್ ಬಾಸ್’ನಲ್ಲಿ ರಕ್ಷಿತಾನ ರಾಶಿಕಾ ಹಾಗೂ ಅಶ್ವಿನಿ ಗೌಡ ಟಾರ್ಗೆಟ್ ಮಾಡಿದ್ದರು. ಆಟ ಆಡುವ ವೇಳೆಯೂ ರಾಶಿಕಾ ಅವರು ರಕ್ಷಿತಾನ ಗಟ್ಟಿಯಾಗಿ ಹಿಡಿದಿದ್ದರು. ಇದೆರಡೂ ವಿಚಾರದಲ್ಲಿ ಗಿಲ್ಲಿಗೆ ಸೇಡು ತೀರಿಸಿಕೊಳ್ಳಲು ಒಂದು ಅವಕಾಶ ಬೇಕಿತ್ತು. ಕೊನೆಗೂ ಆ ಅವಕಾಶ ಸಿಕ್ಕೇ ಬಿಟ್ಟಿತು. ರಾಶಿಕಾ ವಿರುದ್ಧ ಗಿಲ್ಲಿ ಸೇಡು ತೀರಿಸಿಕೊಂಡರು.
ರಾಶಿಕಾ, ಗಿಲ್ಲಿ, ಅಶ್ವಿನಿ ಮೊದಲಾದವರು ಒಂದೇ ತಂಡದಲ್ಲಿ ಇದ್ದಾರೆ ಗಿಲ್ಲಿ ತಂಡ ಟಾಸ್ಕ್ ನಲ್ಲಿ ಗೆದ್ದಿತು. ಈ ಮೂಲಕ ಕ್ಯಾಪ್ಟನ್ ಟಾಸ್ಕ್ ನೋಡಲು ಒಬ್ಬರನ್ನು ಆಯ್ಕೆ ಮಾಡಬೇಕಿತ್ತು. ಈ ವೇಳೆ ತಂಡದಲ್ಲಿರುವ ಆರು ಮಂದಿ ರಾಶಿಕಾ ಹೆಸರು ಹೇಳಿದರೆ ಗಿಲ್ಲಿ ಮಾತ್ರ ಇದಕ್ಕೆ ಸಹಮತ ಸೂಚಿಸುವುದಿಲ್ಲ. ‘ಎಲ್ಲರ ಸಹಮತ ಬೇಕು’ ಎಂದು ಬಿಗ್ ಬಾಸ್ ಎರಡು ಬಾರಿ ಹೇಳಿದರು. ಆದರೆ, ರಾಶಿಕಾ ಹೆಸರನ್ನು ಆಯ್ಕೆ ಮಾಡಲು ಗಿಲ್ಲಿಯ ಸಹಮತ ಸಿಕ್ಕಿಲ್ಲ. ಇದರಿಂದ ಬಿಗ್ ಬಾಸ್ ಈ ಅವಕಾಶವನ್ನು ಹಿಂದೆ ಪಡೆದರು. ಈ ಬಗ್ಗೆ ಘೋಷಣೆ ಕೂಡ ಮಾಡಿದರು.
ಇದನ್ನೂ ಓದಿ
ಇದನ್ನೂ ಓದಿ: ಸೇಡು ತೀರಿಸಿಕೊಳ್ಳಲು ತಂಡದ ರಾಶಿಗೆ ಮಣ್ಣು ಮುಕ್ಕಿಸಿದ ಗಿಲ್ಲಿ ನಟ
ಎಲ್ಲರೂ ರಾಶಿಗಳಿಗೆ ಕ್ಯಾಪ್ಟನ್ಸಿ ರೇಸ್ನಲ್ಲಿ ನಿಲ್ಲೋ ಅವಕಾಶ ಸಿಗುತ್ತದೆ ಎಂದು ಭಾವಿಸಿದ್ದರು. ಆದರೆ, ಹಾಗಾಗಲೇ ಇಲ್ಲ. ಬಿಗ್ ಬಾಸ್ ಆದೇಶ ಕೇಳಿ ರಾಶಿಕಾ ಹಾಗೂ ಅಶ್ವಿನಿ ಗೌಡಗೆ ಶಾಕ್ ಆಯ್ತು. ಆಗ ರಕ್ಷಿತಾ ಶೆಟ್ಟಿ ಅವರು ಎದ್ದು ನಿಂತು, ‘ಹೇ..’ ಎಂದು ಕೂಗಿ, ‘ಥ್ಯಾಂಕ್ ಯೂ ಬಿಗ್ ಬಾಸ್’ ಎಂದರು. ಅವಕಾಶ ತಪ್ಪಿ ಹೋಗಿರುವುದನ್ನು ನೋಡಿ ಮೊದಲೇ ಉರಿದುಕೊಳ್ಳುತ್ತಿದ್ದ ಅಶ್ವಿನಿ, ರಕ್ಷಿತಾ ಮಾತಿನಿಂದ ಸಿಟ್ಟಾದರು. ಅವರು ರಕ್ಷಿತಾನ ಹೆದರಿಸೋಕೆ ಹೋದರು. ಆಗ ರಕ್ಷಿತಾ ಅವರು ಬೇರೆಯವರನ್ನು ನೋಡುತ್ತಾ, ‘ನಾನು ಬಿಗ್ ಬಾಸ್ ಜೊತೆ ಮಾತಾಡ್ತಾ ಇರೋದು. ನನ್ನ ಹಾಗೂ ಬಿಗ್ ಬಾಸ್ ಮಧ್ಯೆ ಯಾರೂ ಬರಬೇಡಿ’ ಎಂದು ನೇರ ಮಾತುಗಳಲ್ಲಿ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 7:26 am, ಗುರು, 30 ಅಕ್ಟೋಬರ್ 25