Headlines

ದೈವವನ್ನು ದೆವ್ವ ಎಂದ ಬಾಲಿವುಡ್ ಸ್ಟಾರ್: ರಿಷಬ್ ಮುಂದೆಯೇ ಅವಮಾನ

ದೈವವನ್ನು ದೆವ್ವ ಎಂದ ಬಾಲಿವುಡ್ ಸ್ಟಾರ್: ರಿಷಬ್ ಮುಂದೆಯೇ ಅವಮಾನ


‘ಕಾಂತಾರ: ಚಾಪ್ಟರ್ 1’ (ಕಾಂತಾರ ಅಧ್ಯಾಯ 1) ಸಿನಿಮಾ ಬಿಡುಗಡೆ ಆಗಿ ಭರ್ಜರಿ ಕಲೆಕ್ಷನ್ ಮಾಡಿದೆ. ಸಿನಿಮಾ ದೈವಗಳ ಕುರಿತಾದದ್ದಾಗಿದ್ದು ಕನ್ನಡ ಸಿನಿಮಾಗೆ ಸಿನಿಮಾದ ಬಗ್ಗೆ, ಸಿನಿಮಾದಲ್ಲಿ ಹೇಳಲಾದ ದೈವಗಳ ಕತೆಯ ಬಗ್ಗೆ ಭಕ್ತಿ ಮತ್ತು ಗೌರವಗಳು ಇವೆ. ರಿಷಬ್ ಶೆಟ್ಟಿ ಅವರು ‘ಕಾಂತಾರ’ ಸಿನಿಮಾದ ಬಗ್ಗೆ ಗೌರವಯುತವಾಗಿ ನಡೆದುಕೊಳ್ಳಬೇಕು, ದೈವಗಳಿಗೆ ಅಪಮಾನ ಆಗುವಂತೆ ನಡೆದುಕೊಳ್ಳುವುದು, ಮಾತನಾಡುವುದು ಬೇಡವೆಂದು ಹಲವಾರು ಬಾರಿ ಹೇಳಿದ್ದಾರೆ. ಆದರೆ ಇದೀಗ ರಿಷಬ್ ಶೆಟ್ಟಿಯ ಎದುರೇ, ಅಂತರಾಷ್ಟ್ರೀಯ ವೇದಿಕೆಯಲ್ಲಿ ದೈವದ ಬಗ್ಗೆ ಅವಮಾನಕರ ರೀತಿಯಲ್ಲಿ ಮಾತನಾಡಿದ್ದಾರೆ.

ಗೋವಾ ಅಂತರಾಷ್ಟ್ರೀಯ ಸಿನಿಮಾೋತ್ಸವದ ಸಮಾರೋಪ ಸಮಾರಂಭದ ಅತಿಥಿಯಾಗಿ ರಣವೀರ್ ಸಿಂಗ್ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ರಜನೀಕಾಂತ್ ಅವರ 50 ವರ್ಷದ ಸಿನಿಮಾ ಸೇವೆಗಾಗಿ ಅವರನ್ನು ಗೌರವಿಸಲಾಯ್ತು. ಅದೇ ಸಮಾರಂಭದಲ್ಲಿ ಕನ್ನಡದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಸಹ ನಿರ್ಮಾಣ. ಮುಂಬಾಗ, ಮುಂದಿನ ಸಾಲಿನಲ್ಲಿಯೇ ಕುಳಿತಿದ್ದರು. ರಿಷಬ್ ಉದ್ದೇಶಿಸಿ, ‘ಕಾಂತಾರ: ಅಧ್ಯಾಯ 1’ ಸಿನಿಮಾದ ಬಗ್ಗೆ ಮಾತನಾಡುತ್ತಾ, ದೈವವನ್ನು ದೇವ್ ಸಂಸ್ಥೆ ರಣವೀರ್ ಸಿಂಗ್.

ಇದನ್ನೂ ಓದಿ: 50 ಲಕ್ಷ ಬಜೆಟ್ ಈ ಸಿನಿಮಾ, ‘ಕಾಂತಾರ’, ‘ಸೈಯ್ಯಾರ’ ಅಂತ ಹಿಂದಿಕ್ಕಿದೆ

ಆಗಿದ್ದಿಷ್ಟು, ವೇದಿಕೆ ಮೇಲಿದ್ದ ರಣವೀರ್ ಸಿಂಗ್, ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಗ್ಗೆ ಮಾತನಾಡುತ್ತಾ, ‘ರಿಷಬ್ ಅವರೇ ‘ಕಾಂತಾರ: ಚಾಪ್ಟರ್ 1’ ಸಿನಿಮಾವನ್ನು ನಾನು ಚಿತ್ರಮಂದಿರದಲ್ಲಿ ನೋಡಿದೆ. ನಿಮ್ಮ ನಟನೆ ಅತ್ಯದ್ಭುತವಾಗಿತ್ತು. ಅದರಲ್ಲೂ ಹೆಣ್ಣು ‘ದೆವ್ವ’ ನಿಮ್ಮ ಮೈ ಸೇರುವ ದೃಶ್ಯದಲ್ಲಿ ನೀವು ಕೊಡುವ ಆ ಲುಕ್ ಮತ್ತು ನಟನೆ ಅದ್ಭುತವಾಗಿತ್ತು’ ಎಂದ ರಣ್ವೀರ್ ಸಿಂಗ್, ಅವರು ನಟಿಸಿ ಸಹ ತೋರಿಸಿದರು. ಆದರೆ ಅವರ ನಟನೆಯೂ ಸಹ ಒಂದು ರೀತಿ ವ್ಯಂಗ್ಯ ಮಾಡುವಂತೆಯೇ ಇತ್ತು. ನಾಲಗೆ ಹೊರಗೆ ಚಾಚಿ ಕೆಟ್ಟದಾಗಿ ಅನುಕರಣೆಯನ್ನು ರಣ್ವೀರ್ ಸಿಂಗ್ ಮಾಡಿದರು. ವೇದಿಕೆಯ ಮೇಲೆ ರಣ್ವೀರ್ ಸಿಂಗ್, ಅನುಕರಣೆ ಮಾಡಿದ್ದರಿಂದ, ರಿಷಬ್ ಶೆಟ್ಟಿ ನಗುತ್ತಾ, ನಾಚಿಕೆಯಿಂದ ಮುಖ ಪಕ್ಕಕ್ಕೆ ತಿರುಗಿಸಿಕೊಂಡರು.

‘ಕಾಂತಾರ’ ಮತ್ತು ‘ಕಾಂತಾರ: ಅಧ್ಯಾಯ 1’ ಸಿನಿಮಾ ಇರುವುದು ದೈವಗಳ ಕುರಿತಾಗಿ. ರಿಷಬ್ ಶೆಟ್ಟಿ ಮೈಮೇಲೆ ದೈವ ಬಂದಾಗಲೂ ಸಹ ಕತೆಯಲ್ಲಿನ ಪಾತ್ರಗಳೇ ಕೈಮುಗಿದು, ದೈವದ ಹೆಸರು ಹೇಳುವ ದೃಶ್ಯವಿದೆ. ಗುಳಿಗ ದೈವದ ಸಹೋದರಿ ಚಾವುಂಡಿ, ರಿಷಬ್ ಪಾತ್ರದ ಮೈಮೇಲೆ ಬಂದಾಗಲೂ ಸಹ ಅದರ ವಿವರ ಹೇಳುವ ಸಂಭಾಷಣೆ ಚಿತ್ರದಲ್ಲಿದೆ. ಅಷ್ಟೆಲ್ಲ ಮಾಹಿತಿ ಒದಗಿಸಿದ್ದರೂ ಸಹ ರಣವೀರ್ ಸಿಂಗ್, ದೈವವನ್ನು ‘ಘೋಸ್ಟ್’ (ದೆವ್ವ) ಎಂದು ಕರೆದಿದ್ದಾರೆ. ಅಷ್ಟು ಸಾಲದೆ, ‘ನಾನು ‘ಕಾಂತಾರ ಚಾಪ್ಟರ್ 3’ ನಟಿಸಬೇಕು ಎಂದು ಸಹ ಹೇಳಿದ್ದಾರೆ.

ಈ ಹಿಂದೆ, ‘ಕಾಂತಾರ’ ಸಿನಿಮಾ ಬಿಡುಗಡೆಯಾದಾಗ ಸಿನಿಮಾದಲ್ಲಿ ರಿಷಬ್ ಪಾತ್ರವನ್ನು ಅನುಕರಣೆ ಮಾಡಿದಕ್ಕೆ, ದೈವಗಳ ಕುರಿತಾಗಿ ತಮಾಷೆ ಮಾಡಿದ್ದಕ್ಕೆ ರಿಷಬ್ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದರು. ಯಾರೂ ಸಹ ದೈವಕ್ಕೆ ಅಪಮಾನ ಆಗುವ ರೀತಿಯಲ್ಲಿ ನಡೆದುಕೊಳ್ಳಬಾರದು ಎಂದು ಮನವಿ ಮಾಡಿದರು. ಆದರೆ ಈಗ ಅವರ ಎದುರೇ ಬಾಲಿವುಡ್‌ನ ನಟ ದೈವವನ್ನು ದೆವ್ವ ಎಂದು ಕರೆದಿದ್ದಾರೆ. ರಿಷಬ್ ಅವರ ನಡೆ ಏನಿದೆ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 8:47 pm, ಶನಿ, 29 ನವೆಂಬರ್ 25





Source link

Leave a Reply

Your email address will not be published. Required fields are marked *