
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯಕ್ಕೆ ಚಿನ್ನಸ್ವಾಮಿ ಸ್ಟೇಡಿಯಂ ಸಿದ್ಧವಾಗುತ್ತಿದೆ. ಈ ಪಂದ್ಯ ನೋಡಲು ಅಭಿಮಾನಿಗಳು ಕಾದಿದ್ದಾರೆ. ಧೋನಿ ಅವರು ಸ್ನಾಯು ಸೆಳೆತದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರಿಗೆ ಎರಡು ವಾರ ರೆಸ್ಟ್ ಸೂಚಿಸಲಾಗಿದೆ. ಆದರೆ, ಅವರು ಈಗ ಆರ್ ಸಿಬಿ ವಿರುದ್ಧ ಪಂದ್ಯಕ್ಕೆ ಲಭ್ಯರಾಗುತ್ತಾರಾ ಎಂಬ ಕುತೂಹಲ ಮೂಡಿದೆ.
ರಾಜಸ್ಥಾನ ರಾಯಲ್ಸ್ ವಿರುದ್ಧ ದುಬಾರಿ ಬೆಲೆಯ ಹೀನಾಯವಾಗಿ ಸೋತಿತು. ಇಂದು (ಏಪ್ರಿಲ್ 3) ಚೆನ್ನೈ ತಂಡ ಪಂಜಾಬ್ ಅನ್ನು ಎದುರಿಸಲಿದೆ. ಈ ಶೋಧ ಲಯಕ್ಕೆ ಮರಳುವ ತವಕದಲ್ಲಿ ಸಿಎಸ್ಕೆ ಇದೆ. ಧೋನಿ ಇದ್ದಿದ್ದರೆ ಒಂದಷ್ಟು ಮಾರ್ಗದರ್ಶನ ಸಿಗುತ್ತಿತ್ತು. ಆದರೆ, ಅವರು ಇಂದಿನ ಪಂದ್ಯಕ್ಕೆ ಲಭ್ಯವಾಗೋದು ಅನುಮಾನ.
ಎಂಎಸ್ ಧೋನಿ ನೆಟ್ಸ್ ನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ
ಆದಾಗ್ಯೂ, ಅವರು ಇನ್ನೂ ಆಟಕ್ಕೆ ಸಾಕಾಗುವುದಿಲ್ಲ.
— ಮುತ್ತುವೆಲ್ ಟ್ವೀಟ್ಗಳು (@Muthuvelpandiy) ಏಪ್ರಿಲ್ 2, 2026
ಧೋನಿ ಅವರು ಇತ್ತೀಚೆಗೆ ಪ್ರಾಕ್ಟಿಸ್ ಸೆಷನ್ ಅಲ್ಲಿ ಭಾಗಿ ಆಗಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಖುಷಿ ಸುದ್ದಿ ಸಿಕ್ಕಿದೆ. ಇಂದು ಕೂಡ ಚೆನ್ನೈ ಸೂಪರ್ ಕಿಂಗ್ಸ್ ಪಾರ್ಫಾರ್ಮೆನ್ಸ್ ಕಳಪೆ ಆಗಿದ್ದರೆ ತಂಡವನ್ನು ಉಳಿಸಲು ಧೋನಿ ಅವರು ಎಂಟ್ರಿ ಆಗಬಹುದು ಎಂದು ಹೇಳಬಹುದು. ಹಾಗಾಗ ಬೆಂಗಳೂರಿನಲ್ಲಿ ನಡೆಯುವ ಪಂದ್ಯಕ್ಕೆ ಧೋನಿ ಇರಲಿದ್ದಾರೆ.
ಇದನ್ನೂ ಓದಿ: ಆರ್ ಸಿಬಿ ಮಾರಾಟದ ವಿಜಯ್ ಮಲ್ಯಗೆ ಸಿಕ್ಕ ಹಣ ಎಷ್ಟು?
ಆರ್ಸಿಬಿ ಮತ್ತು ಸಿಎಸ್ಕೆ ಮ್ಯಾಚ್ ಆದರೆ ಅಭಿಮಾನಿಗಳು ಇದನ್ನು ಬದ್ಧ ವೈರಿಗಳ ಮ್ಯಾಚ್ ಎಂಬ ರೀತಿಯಲ್ಲಿ ಪರಿಗಣಿಸುತ್ತಾರೆ. ಕಳೆದ ಸೀಸನ್ ಅಲ್ಲಿ ಎರಡು ಪಂದ್ಯಗಳನ್ನು ಆರ್ಸಿಬಿ ವಿರುದ್ಧ ಚೆನ್ನೈ ಸೋತಿದೆ. ಈ ಬಾರಿಯೂ ಅದೇ ಫಾರ್ಮ್ ಉಳಿಸಿಕೊಳ್ಳುವ ಆಲೋಚನೆಯಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.


