ದೆಹಲಿ, ಜ.26: ಇಂದು ದೇಶದಲ್ಲಿ 77ನೇ ಗಣರಾಜ್ಯೋತ್ಸವ ದಿನವನ್ನು (ಗಣರಾಜ್ಯೋತ್ಸವ) ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ, ಜಿಲ್ಲಾಧಿಕಾರಿ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಹಾಗೂ ಜಿಲ್ಲಾಧಿಕಾರಿ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಭಾಗವಹಿಸಿದ್ದಾರೆ. ಇದರ ಬಗ್ಗೆ ಲೈವ್ ವಿಡಿಯೋ ಇಲ್ಲಿದೆ ನೋಡಿ. ಈ ಬಾರಿಯ ಪರೇಡ್ನಲ್ಲಿ ಮಹಿಳಾ ಸಬಲೀಕರಣ (ನಾರಿ ಶಕ್ತಿ) ಮತ್ತು ಭಾರತದ ಸಂಸ್ಕೃತಿಯ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಯಿತು. ಕರ್ನಾಟಕದ ಸ್ತಬ್ಧಚಿತ್ರವೂ ಸಹ ಗಮನ ಸೆಳೆಯಿತು. ಈ ಬಾರಿಯ ಗಣರಾಜ್ಯೋತ್ಸವಕ್ಕೆ ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟದ (ASEAN) ನಾಯಕರನ್ನು ಆಹ್ವಾನಿಸಲಾಗಿದೆ. ಭಾರತ ಮತ್ತು ASEAN ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧದ ಸಂಕೇತವಾಗಿ ಈ ಭೇಟಿ ಬಹುಮುಖ್ಯವಾಗಿದೆ. ದಕ್ಷಿಣ ಏಷ್ಯಾದಲ್ಲಿ ಭದ್ರತೆ ಮತ್ತು ಆರ್ಥಿಕ ಸಹಕಾರವನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ. ಹಾಗೂ ಪರೇಡ್ನಲ್ಲಿ ಕರ್ನಾಟಕದ ಸ್ತಬ್ಧಚಿತ್ರವು “ಅನ್ನದಾತನ ಸಾಹಸ ಮತ್ತು ಸಿರಿಧಾನ್ಯಗಳ ಶ್ರೀಮಂತಿಕೆ” ಎಂಬ ವಿಷಯವನ್ನು ಆಧರಿಸಿದೆ. ಸ್ತಬ್ಧಚಿತ್ರದ ಮುಂಭಾಗದಲ್ಲಿ ರೈತ ಮಹಿಳೆಯರು ಸಿರಿಧಾನ್ಯಗಳನ್ನು (ರಾಗಿ) ಸಂಸ್ಕರಿಸುವ ದೃಶ್ಯವನ್ನು ಮನಮೋಹಕವಾಗಿ ಕೆತ್ತಲಾಗಿದೆ. ಜೊತೆಗೆ ಕರ್ನಾಟಕದ ಜಾನಪದ ಕಲೆಗಳಾದ ಡೊಳ್ಳು ಕುಣಿತ ಮತ್ತು ಯಕ್ಷಗಾನದ ಪ್ರದರ್ಶನವು ಸ್ತಬ್ಧಚಿತ್ರದ ಮೆರುಗನ್ನು ಹೆಚ್ಚಿಸಿದೆ.
ಗಣರಾಜ್ಯೋತ್ಸವದ ಮುನ್ನಾದಿನದಂದು ಪದ್ಮ ಪ್ರಶಸ್ತಿಗಳು ಮತ್ತು ಸೇನಾ ಪದಕಗಳನ್ನು ಪ್ರಕಟಿಸಲಾಗಿದೆ. ಈ ಬಾರಿ ಕರ್ನಾಟಕದ ಹಲವು ಗಣ್ಯರು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದವರಿಗೆ ಪದ್ಮ ಪ್ರಶಸ್ತಿಗಳು ಮತ್ತು ಸೇನಾ ಪದಕ ಘೋಷಣೆ ಮಾಡಲಾಯಿತು. ಕಲೆ, ಸಮಾಜ ಸೇವೆ, ಮತ್ತು ಕೃಷಿ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದ ಕರ್ನಾಟಕದ ಗ್ರಾಮೀಣ ಭಾಗದ ಸಾಧಕರಿಗೆ ಈ ಬಾರಿ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ವಿಶಿಷ್ಟ ಸೇವೆಗಾಗಿ ಕರ್ನಾಟಕ ರಾಜ್ಯ ಪೊಲೀಸ್ ಪಡೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ‘ರಾಷ್ಟ್ರಪತಿ ಪೊಲೀಸ್ ಪದಕ’ಕ್ಕೆ ಭಾಜನರಾಗಿದ್ದಾರೆ. ಪ್ರಾಣದ ಹಂಗು ತೊರೆದು ಇತರರನ್ನು ರಕ್ಷಿಸಿ ನಿಂತ ಕರ್ನಾಟಕದ ಧೈರ್ಯಶಾಲಿ ಮಕ್ಕಳಿಗೆ ‘ರಾಷ್ಟ್ರೀಯ ಬಾಲ ಪುರಸ್ಕಾರ’ ನೀಡಿ ಗೌರವಿಸಲಾಗಿದೆ. ಪರೇಡ್ನಲ್ಲಿ ಪ್ರದರ್ಶಿಸಲಾದ ಕಲಾತಂಡಗಳು ಭಾರತವು ತಂತ್ರಜ್ಞಾನ ಮತ್ತು ಸಂಪ್ರದಾಯ ಎರಡರಲ್ಲೂ ಹೇಗೆ ಮುಂಚೂಣಿಯಲ್ಲಿದೆ ಎಂದು ತೋರಿಸಿಕೊಟ್ಟವು.
ಇಲ್ಲಿದೆ ನೋಡಿ ಲೈವ್ ವಿಡಿಯೋ (Tv9 kannada)
ಜನವರಿ 26 ರಂದೇ ಏಕೆ ಗಣರಾಜ್ಯೋತ್ಸವ ದಿನವನ್ನು ಆಚರಿಸುವುದಿಲ್ಲ?
ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಮೊದಲು, 1929ರ ಡಿಸೆಂಬರ್ನಲ್ಲಿ ಲಾಹೋರ್ನಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಒಂದು ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಯಿತು. ಬ್ರಿಟಿಷರ ಆಡಳಿತದಿಂದ ನಮಗೆ ಸಂಪೂರ್ಣ ಸ್ವಾತಂತ್ರ್ಯ ಬೇಕು ಎಂದು ನಿರ್ಣಯಿಸಿ, ಅದನ್ನು ‘ಪೂರ್ಣ ಸ್ವರಾಜ್ಯ’ ಎಂದು ಕರೆದರು. ಆ ದಿನದ ನೆನಪಿಗಾಗಿ 1930ರ ಜನವರಿ 26 ರಂದು ಮೊದಲ ಬಾರಿಗೆ “ಸ್ವಾತಂತ್ರ್ಯ ದಿನ”ವನ್ನು ಆಚರಿಸಲಾಯಿತು. ನಮಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು 1947ರ ಆಗಸ್ಟ್ 15 ರಂದು. ಆದರೆ, ಭಾರತಕ್ಕೆ ತನ್ನದೇ ಆದ ಕಾನೂನು ಮತ್ತು ಸಂವಿಧಾನ ಇರಲಿಲ್ಲ. ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನ ರಚನೆಯಾದ ನಂತರ, ಅದನ್ನು ಜಾರಿಗೆ ತರಲು ಒಂದು ವಿಶೇಷ ದಿನ ಬೇಕಿತ್ತು. 1930 ರ ಆ ಐತಿಹಾಸಿಕ ‘ಪೂರ್ಣ ಸ್ವರಾಜ್ಯ’ ಘೋಷಣೆಯ ದಿನಕ್ಕೆ ಗೌರವ ಸಲ್ಲಿಸಲು, ಸಂವಿಧಾನವನ್ನು 1950 ರ ಜನವರಿ 26 ರಂದು ಜಾರಿಗೆ ತರಲಾಯಿತು. ಅಂದಿನಿಂದ ಭಾರತವು ಬ್ರಿಟಿಷ್ ಕಾನೂನುಗಳಿಂದ ಮುಕ್ತವಾಗಿ, ಒಂದು ಸಾರ್ವಭೌಮ ಗಣರಾಜ್ಯವಾಯಿತು.
ಇದನ್ನೂ ಓದಿ: 77ನೇ ಗಣರಾಜ್ಯೋತ್ಸವಕ್ಕೆ ದೇಶದ ಜನತೆಗೆ ಶುಭ ಕೋರಿದ ಪ್ರಧಾನಿ ಮೋದಿ
ಭಾರತವು ಆಗಸ್ಟ್ 15, 1947 ರಂದು ಸ್ವಾತಂತ್ರ್ಯ ಗಳಿಸಿತು, ಆದರೆ ಸಂವಿಧಾನ ಜಾರಿಗೆ ಬಂದ ನಂತರವೇ ಅದು ಪ್ರಜಾಪ್ರಭುತ್ವ ರಾಷ್ಟ್ರವಾಯಿತು. ಭಾರತದ ಸಂವಿಧಾನವನ್ನು ನವೆಂಬರ್ 26, 1949 ರಂದು ರಚಿಸಲಾಯಿತು, ಆದರೆ ಅದು ಜನವರಿ 26, 1950 ರಂದು ಜಾರಿಗೆ ಬಂದಿತು. ಈ ದಿನದಂದು, ಭಾರತವು ತನ್ನನ್ನು ತಾನು ಸಾರ್ವಭೌಮ, ಪ್ರಜಾಪ್ರಭುತ್ವ ಮತ್ತು ಗಣರಾಜ್ಯವೆಂದು ಘೋಷಿಸಿತು. ಈ ದಿನವನ್ನು ಭಾರತದ ಗಣರಾಜ್ಯ ದಿನವೆಂದು ಗುರುತಿಸಲಾಗಿದೆ ಮತ್ತು ಈ ಕಾರಣಕ್ಕಾಗಿಯೇ ಭಾರತವು ಪ್ರತಿ ವರ್ಷ ಜನವರಿ 26 ರಂದು ಗಣರಾಜ್ಯೋತ್ಸವವನ್ನು ಆಚರಿಸುತ್ತದೆ.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 11:03 am, ಸೋಮ, 26 ಜನವರಿ 26