ಕೆಲವು ದಿನಗಳ ಹಿಂದಷ್ಟೆ ಗೋವಾ ಸಿನಿಮಾೋತ್ಸವದ ಸಮಾರೋಪ ಕಾರ್ಯಕ್ರಮದಲ್ಲಿ ನಟ ರಿಷಬ್ ಶೆಟ್ಟಿ (ರಿಶಬ್ ಶೆಟ್ಟಿ) ಭಾಗವಹಿಸಿದ್ದರು. ಅದೇ ಕಾರ್ಯಕ್ರಮದಲ್ಲಿ ರಣವೀರ್ ಸಿಂಗ್ ಸಹ ಅತಿಥಿಯಾಗಿ ಭಾಗಿ ಆಗಿದ್ದರು. ಕಾರ್ಯಕ್ರಮದಲ್ಲಿ ರಣ್ವೀರ್ ಸಿಂಗ್ ಅವರು ‘ಕಾಂತಾರ’ ಸಿನಿಮಾ ಬಗ್ಗೆ ಮಾತನಾಡುತ್ತಾ ದೈವದ ಅನುಕರಣೆ ಮಾಡಿದ್ದರು. ‘ದೈವ’ವನ್ನು ದೆವ್ವ ಎಂದು ಕರೆದಿದ್ದರು. ರಣವೀರ್ ಸಿಂಗ್ ಅವರ ಕೆಟ್ಟ ಅನುಕರಣೆಯ ಬಗ್ಗೆ ವಿರೋಧ ವ್ಯಕ್ತವಾಗಿತ್ತು. ದೂರುಗಳು ಸಹ ದಾಖಲಾಗಿವೆ. ಆದರೆ ರಿಷಬ್ ಶೆಟ್ಟಿ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಆದರೆ ಈಗ ಈ ಬಗ್ಗೆ ರಿಷಬ್ ಮಾತನಾಡಿದ್ದಾರೆ.
ಚೆನ್ನೈನಲ್ಲಿ ನಡೆದ ಬಿಹೈಂಡ್ ವುಡ್ಸ್ ಗೋಲ್ಡ್ ಮೆಡಲ್ ಕಾರ್ಯಕ್ರಮದಲ್ಲಿ ಗೋಲ್ಡ್ ಮೆಡಲ್ ಸ್ವೀಕರಿಸಿದ ರಿಷಬ್ ಶೆಟ್ಟಿ, ದೈವದ ಅನುಕರಣೆಯ ಬಗ್ಗೆ ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿರುವ ರಿಷಬ್ ಶೆಟ್ಟಿ, ‘ಕಾಂತಾರ’ ಸಿನಿಮಾದ ಆಚರಣೆ ನಮ್ಮ ಮನೆಗೆ ನಮ್ಮ ಸಮುದಾಯದ, ಪ್ರಾಂತ್ಯಕ್ಕೆ ಸೇರಿದ ಆಚರಣೆ. ನಾನು ನೋಡಿದ್ದು, ಕೇಳಿದ್ದ ಕತೆಗಳನ್ನೇ ನಾನು ಸಿನಿಮಾ ಮಾಡಿದ್ದೇನೆ. ನಾನು ಕಾಣುವ ದೈವವನ್ನು ನಂಬುವವ, ಆಚರಿಸುವವನಲ್ಲ ನನಗೆ ಅದು ಅತ್ಯಂತ ಪವಿತ್ರವಾದುದು.
ಮುಂದುವರೆದು ಮಾತನಾಡಿ, ‘ಪಾಪ್ ಕಲ್ಚರ್ ವೇದಿಕೆಯಲ್ಲಿ ಹೇಗೆ ಬಿಡುತ್ತದೆ ಎಂದರೆ, ಸಿನಿಮಾದಲ್ಲಿ ತೋರಿಸಲಾಗಿದೆ ಎಂದ ಕೂಡಲೇ ಅದನ್ನು ಅನುಕರಣೆ ಮಾಡುವುದು, ಹೋಗುವುದು, ವೇದಿಕೆ ಮೇಲೆ ಪ್ರದರ್ಶನ ಮಾಡುವುದು. ರೀಲ್ಸ್ ಮಾಡುವುದು, ಅನುಕರಣೆ ಮಾಡುವುದು, ಅವಹೇಳನ ಮಾಡುವುದು. ಅದು ನನಗೆ ಬೇಸರ ಮೂಡಿಸುತ್ತದೆ. ಏಕೆಂದರೆ ಅದು ಕೇವಲ ಸಿನಿಮಾ ಆಗಿದೆ, ನಮ್ಮ ನಂಬಿಕೆ ಸಹ’ ಎಂದು ರಿಷಬ್ ಶೆಟ್ಟಿ.
ಇದನ್ನೂ ಓದಿ:ದರ್ಶನ್ ನಟನೆಯ ‘ಡೆವಿಲ್’ ಚಿತ್ರಕ್ಕೆ ಪ್ರೀತಿಯಿಂದ ವಿಶ್ ಮಾಡಿದ ರಿಷಬ್ ಶೆಟ್ಟಿ
‘ನಾವು ಸಿನಿಮಾ ಮಾಡಬೇಕಾದರೂ ಸಹ ಹಿರಿಯರನ್ನು, ದೈವದ ಬಗ್ಗೆ ಜ್ಞಾನಿಗಳನ್ನೂ ಆಹ್ವಾನಿಸಿ, ಅವರ ಪ್ರತಿ ಹೆಜ್ಜೆ ಚರ್ಚಿಸಿ, ದೈವಕ್ಕೆ, ಆಚರಣೆಗೆ, ನಂಬಿಕೆಗೆ ಎಲ್ಲೂ ಮುಕ್ಕಾಗದ ರೀತಿಯಲ್ಲಿ ನೇಮ ಮಾಡಿ ಸಿನಿಮಾ ಮಾಡಿದ್ದೇವೆ. ಇದೇ ಕಾರಣಕ್ಕೆ ನಾನು ಹೋದಲ್ಲೆಲ್ಲ, ದೈವವನ್ನು ಅನುಕರಣೆ ಮಾಡಬೇಡಿ ಎಂದು ಮನವಿ ಮಾಡುತ್ತೇನೆ. ‘ಕಾಂತಾರ’ ಸಿನಿಮಾದ ಎಲ್ಲ ದೃಶ್ಯಗಳೂ ಸಿನಿಮಾ ಎಂಬುದು ನಿಜ ಆದರೆ ದೈವದ ದೃಶ್ಯಗಳು ಕೇವಲ ಸಿನಿಮಾವಾಗಿದೆ, ಅದು ನಮ್ಮ ನಂಬಿಕೆ’ ರಿಷಬ್ ಶೆಟ್ಟಿ.
ರಣ್ವೀರ್ ಸಿಂಗ್ ಅವರ ಹೆಸರು ಹೇಳದೆ ರಿಷಬ್ ಅವರು, ‘ದೈವದ ಅನುಕರಣೆ ಮಾಡುವುದು ತಮಗೆ ಬೇಸರ ಮೂಡಿಸುತ್ತದೆ’. ರಣವೀರ್ ಸಿಂಗ್ ಸಹ ತಮ್ಮ ವರ್ತನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಕೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 5:30 pm, ಭಾನುವಾರ, 14 ಡಿಸೆಂಬರ್ 25