Headlines

ಪ್ರತಿಯೊಂದು ಯಶಸ್ಸಿನ ಹಿಂದಿರೋ ದೇಗುಲದ ಸೀಕ್ರೆಟ್​ ರಿವೀಲ್​ ಮಾಡಿದ ನಟಿ Rukmini Vasanth

ಪ್ರತಿಯೊಂದು ಯಶಸ್ಸಿನ ಹಿಂದಿರೋ ದೇಗುಲದ ಸೀಕ್ರೆಟ್​ ರಿವೀಲ್​ ಮಾಡಿದ ನಟಿ Rukmini Vasanth



ಪ್ರತಿಯೊಂದು ಯಶಸ್ಸಿನ ಹಿಂದಿರೋ ದೇಗುಲದ ಸೀಕ್ರೆಟ್​ ರಿವೀಲ್​ ಮಾಡಿದ ನಟಿ Rukmini Vasanth
<p>’ಸಪ್ತ ಸಾಗರದಾಚೆ ಎಲ್ಲೋ’ ಮತ್ತು ‘ಕಾಂತಾರ’ ಚಿತ್ರಗಳ ಮೂಲಕ ಖ್ಯಾತಿ ಗಳಿಸಿದ ನಟಿ ರುಕ್ಮಿಣಿ ವಸಂತ್, ತಮ್ಮ ಯಶಸ್ಸಿನ ಹಿಂದಿನ ರಹಸ್ಯವನ್ನು ಹಂಚಿಕೊಂಡಿದ್ದಾರೆ. ಬೆಂಗಳೂರಿನ ದೇವಸ್ಥಾನವೇ ತಮ್ಮ ವೃತ್ತಿಜೀವನದ ಯಶಸ್ಸಿಗೆ ಕಾರಣ ಎಂದು ಅವರು ಬಹಿರಂಗಪಡಿಸಿದ್ದಾರೆ.</p><img><p>ಕಾಂತಾರಾ ಚಾಪ್ಟರ್​-1 ಮೂಲಕ ಕನಕವತಿಯಾಗಿ ಮಿಂಚಿರುವ ನಟಿ ರುಕ್ಮಿಣಿ ವಸಂತ್​ ಅವರು ಸಕತ್​ ಫೇಮಸ್​ ಆಗಿದ್ದು, ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಎ ಮತ್ತು ಬಿ ಸಿನಿಮಾಗಳ ಮೂಲಕ.</p><img><p>1994ರಲ್ಲಿ ಜನಿಸಿರುವ ನಟಿ ರುಕ್ಮಿಣಿ ಅವರಿಗೆ ಈಗ 32 ವರ್ಷ ವಯಸ್ಸು. ಅಶೋಕ ಚಕ್ರ ಪಡೆದ ಕರ್ನಲ್​ ವಸಂತ್​ ವೇಣುಗೋಪಾಲ ಅವರ ಪುತ್ರಿ ರುಕ್ಮಿಣಿ ಅವರಿಗೆ ಬಣ್ಣದ ಲೋಕ ಕೈಬೀಸಿ ಕರೆದದ್ದು, 2019ರಲ್ಲಿ ಬಿಡುಗಡೆಯಾದ ಬೀರಬಲ್ ಟ್ರೈಲಾಜಿ ಪ್ರಕರಣ 1.</p><img><p>ಆದರೆ ಅವರ ಕೈಹಿಡಿದದ್ದು 2023ರಲ್ಲಿ ಬಿಡುಗಡೆಯಾದ ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಎ ಮತ್ತು ಅದೇ ವರ್ಷ ಬಿಡುಗಡೆಯಾದ ಸೈಡ್​-ಬಿನಲ್ಲಿ ಪ್ರಿಯಾ ಪಾತ್ರದಲ್ಲಿ ಮಿಂಚಿದಾಗ. ಇದೇ ಸಾಲಿನಲ್ಲಿ ಬಾನ ದಾರಿಯಲ್ಲಿ ಅವರು ನಟಿಸಿದ್ದರೂ, ಅವರಿಗೆ ಸಕತ್​ ಹೆಸರು ತಂದುಕೊಟ್ಟಿದ್ದು ಮಾತ್ರ ಸಪ್ತ ಸಾಗರದಾಚೆ ಎಲ್ಲೋ ಚಿತ್ರ.</p><img><p>ಇದಾದ ಬಳಿಕ ಬಘೀರ್​, ಭೈರತಿ ರಣಗಲ್​ನಲ್ಲಿ ನಟಿಸಿದರೂ, ಅವರನ್ನು ಪ್ಯಾನ್​ ಇಂಡಿಯಾ ಮೀರಿದ ನಟಿಯನ್ನಾಗಿಸಿದ್ದು ಕಳೆದ ವರ್ಷ ಬಿಡುಗಡೆಯಾದ ಕಾಂತಾರ ಚಾಪ್ಟರ್​-1 ಕನಕವತಿ ರೋಲ್​.</p><img><p>ತಮ್ಮ ಈ ಎಲ್ಲಾ ಯಶಸ್ಸನ್ನು ಅವರು ಬೆಂಗಳೂರಿನ ದೇವಾಲಯವೊಂದಕ್ಕೆ ಸಮರ್ಪಿಸಿದ್ದಾರೆ. Rapid Rashi ಯುಟ್ಯೂಬ್​ ಚಾನೆಲ್​ ಜೊತೆ ಮಾತನಾಡಿರುವ ರುಕ್ಮಿಣಿ ವಸಂತ್​ ( Rukmini Vasanth) ಅವರು, ತಮ್ಮನ್ನು ಕೈಹಿಡಿದಿರುವ ಎರಡು ದೇವಸ್ಥಾನಗಳ ಪರಿಚಯವನ್ನು ಮಾಡಿಸಿದ್ದಾರೆ.</p><img><p>ಬೆಂಗಳೂರಿನ ಸದಾಶಿವನಗರದಲ್ಲಿ ಇರುವ ಗಣಪತಿ ದೇವಸ್ಥಾನದಲ್ಲಿ ನನಗೆ ತುಂಬಾ ಶಾಂತಿ ಸಿಗುತ್ತದೆ. ಆದರೆ ನನ್ನನ್ನು ಕೈಹಿಡಿದು ನಡೆಸಿದ್ದು, ಮೈಸೂರು ರಸ್ತೆಯಲ್ಲಿ ಇರುವ ಗಾಳಿ ಆಂಜನೇಯ ದೇವಸ್ಥಾನ ಎಂದು ಹೇಳಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಬಹುತೇಕ ಶೂಟಿಂಗ್​ ಇಲ್ಲಿಯೇ ಹತ್ತಿರದಲ್ಲಿ ನಡೆದದ್ದರಿಂದ ತುಂಬಾ ಸಲ ಈ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದೇನೆ. ದಿನವೂ ಬೆಳಿಗ್ಗೆ ಇಲ್ಲಿಂದಲೇ ನನ್ನ ಪಯಣ ಶುರುವಾಗುತ್ತಿತ್ತು. ಈ ದೇವಸ್ಥಾನ ನನಗೆ ತುಂಬಾ ಕೊಟ್ಟಿದೆ ಎಂದು ಯಶಸ್ಸಿನ ಬಗ್ಗೆ ತಿಳಿಸಿದ್ದಾರೆ ನಟಿ.</p>



Source link

Leave a Reply

Your email address will not be published. Required fields are marked *