
<p>ಗಿಲ್ಲಿ ನಟ ಅವರು ಹೋದಲ್ಲಿ ಬಂದಲ್ಲಿ ಜನರು ಸೇರುತ್ತಿದ್ದಾರೆ. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಈಗ ಅವರು ಬಂಗಾರದ ಅಂಗಡಿ ಉದ್ಘಾಟನೆಗೆ ಆಗಮಿಸಿದ್ದರು. ಆ ವೇಳೆ ಅವರಿಗೆ ಬಂಗಾರದ ಆಭರಣ ಹಾಕಲಾಗಿದೆ.</p><p> </p><img><p>ಬಂಗಾರದ ಆಭರಣಗಳ ಉದ್ಘಾಟನೆಗೆ ಅತಿಥಿಗಳು ಬರುತ್ತಾರೆ. ಆಗ ಅತಿಥಿಗಳ ಕೊರಳಿಗೆ ಬಂಗಾರದ ಆಭರಣ ಹಾಕಲಾಗುವುದು. ಆ ಕಾರ್ಯಕ್ರಮ ಮುಗಿದಕೂಡಲೇ ಆಭರಣವನ್ನು ಮರಳಿ ನೀಡಬೇಕು.</p><img><p>ಗಿಲ್ಲಿ ನಟ ಅವರು ಮಾತನಾಡಿ, “ಟಿ ಎ ಶರವಣ ಅವರು ನನಗೆ ಮೊದಲಿನಿಂದಲೂ ಪರಿಚಯ ಇತ್ತು. ಇಂದು ಎಂಟನೇ ಸ್ಟೋರ್ ಉದ್ಘಾಟನೆಯಾಗಿರೋದು ಖುಷಿಯಾಗಿದೆ. ಬಂಗಾರ ಅಂದರೆ ಎಲ್ಲರಿಗೂ ಇಷ್ಟ, ದುಡ್ಡು ಇದ್ದವರು ಬಂಗಾರ ತಗೊಳ್ತಾರೆ. ದುಡ್ಡು ಇಲ್ಲದವರು ತಗೊಳೋದಿಲ್ಲ” ಎಂದಿದ್ದಾರೆ. </p><img><p>ನಿಮಗೆ ಬಂಗಾರ ಇಷ್ಟವಾ? ಬಂಗಾರ ತಗೋತೀರಾ? ಎಂದು ಪ್ರಶ್ನೆ ಮಾಡಲಾಗಿದೆ. ಆಗ ಗಿಲ್ಲಿ ನಟ ಅವರು ಬಂಗಾರಕ್ಕಿಂತ ಜನರು ಇಷ್ಟ, ಇಲ್ಲಿಗೆ ಬಂದಮೇಲೆ ಜನರನ್ನು ನೋಡಿ ಖುಷಿಯಾಗುತ್ತಿದೆ ಎಂದು ಹೇಳಿದ್ದಾರೆ.</p><img><p>ಗಿಲ್ಲಿಗಿಂತ ದೊಡ್ಡದು ಯಾವುದೂ ಇಲ್ಲ. ಗಿಲ್ಲಿಯೇ ಬಂಗಾರ. ಗಿಲ್ಲಿ ಹೇಳಿದ ಹಾಗೆ ಎಂದು ಶರವಣ ಹೇಳಿದ್ದಾರೆ. ಒಟ್ಟಿನಲ್ಲಿ ಗಿಲ್ಲಿ ನಟನ ಕ್ರೇಜ್ಗೆ ಸಾಟಿಯೇ ಇಲ್ಲ ಎಂದು ಹೇಳಬಹುದು.</p><img><p>ಟಿ ಎಸ್ ಶರವಣ ಅವರೇ ಗಿಲ್ಲಿ ನಟನಿಗೆ ದೊಡ್ಡದಾದ ಸರವನ್ನು ತಮ್ಮ ಕೈಯಾರೆ ಹಾಕಿದ್ದಾರೆ. ಬಹುಶಃ ಅರ್ಧ ಕೆಜಿಯಷ್ಟು ಬಂಗಾರದ ಸರವನ್ನು ಗಿಲ್ಲಿ ಕೊರಳಿಗೆ ಹಾಕಿದ್ದಾರೆ. ರುಕ್ಮಿಣಿ ವಸಂತ್ ಸೇರಿ ಅನೇಕ ಬಿಗ್ ಬಾಸ್ ಸ್ಪರ್ಧಿಗಳು ಈ ಕಾರ್ಯಕ್ರಮಕ್ಕೆ ಬಂದಿದ್ದರು. ಆಗ ಶರವಣ ಅವರು ಬಂಗಾರದ ಸರವನ್ನು ಕೊಟ್ಟರೂ ಕೂಡ ಅದನ್ನು ಮರಳಿ ನೀಡಬೇಕು.</p>
Source link
ಗಿಲ್ಲಿ ನಟನಿಗಿಂತ ದೊಡ್ಡದು ಯಾವುದೂ ಇಲ್ಲ ಎಂದು ಕೊರಳಿಗೆ ಕೆಜಿಗಟ್ಟಲೇ ಬಂಗಾರ ಹಾಕಿದ ಶರವಣ!