ರಿಷಬ್​ ಶೆಟ್ಟಿ ಜೊತೆ ಸೆಲ್ಫಿಗೆ ಹೋದ್ರೆ ಹೀರೋನೇ ಮಾಡ್ಬಿಟ್ರು! 'ದಡ್ಡ ಪ್ರವೀಣ'ನ ರೋಚಕ ಸ್ಟೋರಿ ಕೇಳಿ

ರಿಷಬ್​ ಶೆಟ್ಟಿ ಜೊತೆ ಸೆಲ್ಫಿಗೆ ಹೋದ್ರೆ ಹೀರೋನೇ ಮಾಡ್ಬಿಟ್ರು! 'ದಡ್ಡ ಪ್ರವೀಣ'ನ ರೋಚಕ ಸ್ಟೋರಿ ಕೇಳಿ



ರಿಷಬ್​ ಶೆಟ್ಟಿ ಜೊತೆ ಸೆಲ್ಫಿಗೆ ಹೋದ್ರೆ ಹೀರೋನೇ ಮಾಡ್ಬಿಟ್ರು! 'ದಡ್ಡ ಪ್ರವೀಣ'ನ ರೋಚಕ ಸ್ಟೋರಿ ಕೇಳಿ
<p>ರಿಷಬ್ ಶೆಟ್ಟಿ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದ ರಂಜನ್, ಅನಿರೀಕ್ಷಿತವಾಗಿ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರದ ನಾಯಕನಾದರು. ನಟನೆಯಲ್ಲಿ ಆಸಕ್ತಿ ಇಲ್ಲದಿದ್ದರೂ, ಒಂದು ಸೆಲ್ಫಿ &nbsp;ಅದೃಷ್ಟವನ್ನೇ ಬದಲಿಸಿ, ‘ದಡ್ಡ ಪ್ರವೀಣ’ ಪಾತ್ರದ ಮೂಲಕ ಸಿನಿಮಾ ಹೀರೋ ಆಗಿ ರೂಪಿಸಿತು.</p><img><p>ಕೆಲವೊಮ್ಮೆ ಅದೃಷ್ಟ ಯಾವ ರೀತಿ, ಯಾವ ಕಡೆಯಿಂದ ಬರುತ್ತದೆಯೋ ತಿಳಿಯುವುದೇ ಕಷ್ಟ. ಸಿನಿಮಾ ನಟರಾಗಬೇಕು ಎಂದು ಜೀವನಪೂರ್ತಿ ಹಂಬಲಿಸಿ, ಎಷ್ಟೆಲ್ಲಾ ಪರದಾಟ ಮಾಡಿ, ಏನೇನೋ ಸರ್ಕಸ್​ ಮಾಡಿ, ಇದ್ದಬಿದ್ದ ದುಡ್ಡು ಕಳೆದುಕೊಂಡು, ಏನೇನೋ ಅನಾಹುತ ಮಾಡಿಕೊಂಡರೂ ಸೈಡ್​ ರೋಲ್​ ಕೂಡ ಸಿಗದವರು ಎಷ್ಟೋ ಮಂದಿ ಇದ್ದಾರೆ. ಆದರೆ ಒಂದು ಸೆಲ್ಫಿಗಾಗಿ ಮಾತ್ರ ಹೋಗಿ ಇಲ್ಲೊಬ್ಬ, ಸಿನಿಮಾ ಹೀರೋನೇ ಆಗಿಬಿಟ್ಟಿದ್ದಾರೆ. ಅವರೇ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾದ ದಡ್ಡ ಪ್ರವೀಣ ಅಲಿಯಾಸ್​ ರಂಜನ್​.</p><img><p>ಅವರೀಗ ಗೌರೀಶ್​ ಅಕ್ಕಿ ಸ್ಟುಡಿಯೋದಲ್ಲಿ ತಮ್ಮ ರೋಚಕ ಅನುಭವವನ್ನು ಹಂಚಿಕೊಂಡಿದ್ದಾರೆ. ನನಗೆ ನಟನೆಯೂ ಬರಲ್ಲ, ಅದರಲ್ಲಿ ಆಸಕ್ತಿಯೂ ಇರಲಿಲ್ಲ. ಆದರೆ ಕಿರಿಕ್​ ಪಾರ್ಟಿ ಸಿನಿಮಾ ಆಡಿಷನ್​ ನಡೆಯುತ್ತಿತ್ತು. ಆ ಸಮಯದಲ್ಲಿ ರಿಷಬ್​ ಶೆಟ್ಟಿ ಅವರು ಬಂದಾಗ, ಅವರ ಜೊತೆ ಒಂದು ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದಷ್ಟೇ. ನನ್ನ ಅದೃಷ್ಟವೇ ಬದಲಾಯಿತು ಎಂದಿದ್ದಾರೆ. ಸಂಜನ್​ ಆಗಿದ್ದವರು ರಂಜನ್​ ಎಂದು ರಿಷಬ್​ ಶೆಟ್ಟಿ ಅವರೇ ನಾಮಕರಣ ಮಾಡಿದ್ದಾರೆ.</p><img><p>ಅವರ ಬಳಿ ಸೆಲ್ಫಿಗಾಗಿ ತುಂಬಾ ಹೊತ್ತು ಕಾದೆ. ಆಡಿಷನ್​ಗೆ ಬಂದವರು ಟೋಕನ್​ ತೆಗೆದುಕೊಳ್ಳಬೇಕು ಎಂದರು. ನಾನೇನು ಆಡಿಷನ್​ಗೆ ಹೋಗಿರಲಿಲ್ಲ. ಬದಲಿಗೆ ಸೆಲ್ಫಿಗಾಗಿ ಹೋಗಿದ್ದೆ. ಆದರೂ ಟೋಕನ್​ ತೆಗೆದುಕೊಂಡೆ. ರಿಷಬ್​ ಶೆಟ್ಟಿ ಅವರ ಬಳಿ ಹೋಗುತ್ತಲೇ ಅವರು, ನನ್ನನ್ನು ನೋಡಿ, ಆ್ಯಕ್ಟಿಂಗ್​ ಬರತ್ತಾ ಕೇಳಿದ್ರು, ಇಲ್ಲ. ನಾನು ಸಿನಿಮಾಕ್ಕೆ ಬಂದಿಲ್ಲ, ಸೆಲ್ಫಿಗೆ ಬಂದಿದ್ದು ಎಂದೆ.</p><img><p>ಏನು ಬರತ್ತೆ ಕೇಳಿದ್ರು. ನಾನು ಹುಲಿವೇಷ ಬರುತ್ತೆ ಎಂದೆ. ಒಂದೆರಡು ಸ್ಟೆಪ್​ ಹಾಕಿ ತೋರಿಸಿದೆ. ಬಳಿಕ ಡೈಲಾಗ್​ ಕೊಟ್ಟರು. ನಾನು ಸರ್​ ನನಗೆ ಆ್ಯಕ್ಟಿಂಗ್​ ಬರಲ್ಲ, ಸೆಲ್ಫಿ ಕೊಡಿ ಅಂದೆ. ಹಾಗೇ ಹೋದೆ. ಆದರೆ ಹತ್ತು ದಿನ ಆದ್ಮೇಲೆ ಕಾಲ್​ ಬಂತು. ಆಡಿಷನ್​ ಇದೆ ಬನ್ನಿ ಅಂತ. ನಾನು ಹೋಗಲಿಲ್ಲ ಎಂದು ಹೇಳಿದ್ದಾರೆ ರಂಜನ್​.</p><img><p>ಕೊನೆಗೆ ತುಂಬಾ ಸಲ ಕಾಲ್​ ಬಂದಾಗ ಆಡಿಷನ್​ಗೆ ಹೋದೆ. ಅಲ್ಲಿ ಬಂದವರೆಲ್ಲಾ ನನ್ನನ್ನು ವಿಚಿತ್ರವಾಗಿ ನೋಡತೊಡಗಿದರು. ಅವರೆಲ್ಲಾ ಸಿನಿಮಾದಲ್ಲಿ ನಟಿಸಲು ಬಂದಿದ್ದರೆ, ನನ್ನನ್ಯಾಕೆ ಇಷ್ಟು ಫೋರ್ಸ್​ ಮಾಡುತ್ತಿದ್ದಾರೆ ಎನ್ನುವುದು ಅವರಿಗೂ ಅರ್ಥವಾಗಲಿಲ್ಲ, ನನಗೂ ಅರ್ಥವಾಗಲಿಲ್ಲ ಎಂದು ಹೇಳಿದ್ದಾರೆ ರಂಜನ್​. ಕೊನೆಗೂ ರಿಷಬ್​ ಶೆಟ್ಟಿ ಅವರು ನನ್ನನ್ನೇ ಸೆಲೆಕ್ಟ್​ ಮಾಡಿಬಿಟ್ಟರು. ಆ ಮೂಲಕ ನಾನು ಹೀರೋ ಆದೆ ಎಂದಿದ್ದಾರೆ. ರಂಜನ್​ ಅವರು ಸಿನಿಮಾ ಹೀರೋ ಆಗಿರೋ ಈ ಸ್ಟೋರಿ ಸಿನಿಮೀಯ ರೀತಿಯಲ್ಲಿಯೇ ಇರುವುದು ರೋಚಕವಾಗಿದೆ.</p><img><p>ಅಂದಹಾಗೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು (Sarkari Hiriya Prathamika shale Kasaragod) ಚಿತ್ರವು, ಗಡಿನಾಡು ಕಾಸರಗೋಡಿನಲ್ಲಿ ಸರ್ಕಾರಿ ಕನ್ನಡ ಶಾಲೆಗಳ ಸ್ಥಿತಿಗತಿಗಳು ಏನಾಗುತ್ತಿದೆ ಅನ್ನೋದನ್ನು ತೋರಿಸಿಕೊಟ್ಟಿದೆ. ಈ ಸಿನಿಮಾದಲ್ಲಿ ಬಾಲ ಪ್ರತಿಭೆಗಳಾಗಿ ಮಿಂಚಿದವರು ದಡ್ಡ ಪ್ರವೀಣ ಮತ್ತು ಪಲ್ಲವಿ.</p><img><p>ನಾಲ್ಕು ವರ್ಷಗಳಿಂದ ಫೇಲ್ ಆಗಿ,ಫೇಲ್ ಆಗಿ ಏಳನೇ ಕ್ಲಾಸಲ್ಲೇ ಬಾಕಿಯಾದ ಚಿಗುರು ಮೀಸೆಯ ಯುವಕ ಪ್ರವೀಣ ಆಲಿಯಾಸ್ ದಡ್ಡ ಪ್ರವೀಣ. ಆಗಷ್ಟೇ ಹದಿಹರೆಯಕ್ಕೆ ಕಾಲಿಟ್ಟ ಹುಡುಗನಿಗೆ ತನ್ನದೇ ಕ್ಲಾಸಿನ ಬ್ರಿಲಿಯಂಟ್ ಹುಡುಗಿ ಪಲ್ಲವಿ ಮೇಲೆ ಕ್ರಶ್. ಶಾಲೆಗಳಲ್ಲಿ ಸಾಮಾನ್ಯವಾಗಿ ನಡೆಯುವಂತಹ ಈ ಸಣ್ಣದಾದ ಆಕರ್ಷಣೆ ಬಗ್ಗೆ ಸಿನಿಮಾದಲ್ಲಿ ಅಮೋಘವಾಗಿ ತೋರಿಸಲಾಗಿತ್ತು. ಈ ಪಾತ್ರಕ್ಕೆ ರಂಜನ್​ ಅವರೇ ಸೂಟ್​ ಎಂದು ರಿಷಬ್​ ಶೆಟ್ಟಿ ಅವರು ಅಂದುಕೊಂಡದ್ದು ಹುಸಿಯಾಗಲಿಲ್ಲ. ಅವರು ಅಷ್ಟು ಅದ್ಭುತವಾಗಿ ನಟಿಸಿದ್ದರು.</p><img><p>ಇದಾದ ಬಳಿಕ, ರಂಜನ್ ಅವರು ರಿಷಭ್ ಶೆಟ್ಟಿ ಅವರ (Rishabh Shetty) ಕಾಂತಾರ ಸಿನಿಮಾದಲ್ಲಿ ಮಿಂಚಿದರು. ಇದೀಗ ಆರಾಟ ಎನ್ನುವ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದು, ಮಂಗಳೂರು ಕರಾವಳಿಯ ಸಂಪ್ರದಾಯ, ಆಚರಣೆಯ ಕಥೆಯನ್ನು ಹೇಳುವ ಈ ಸಿನಿಮಾ ಸದ್ಯ ಭಾರಿ ಸದ್ದು ಮಾಡುತ್ತಿದೆ. ಸಿನಿಮಾದಲ್ಲಿ ರಂಜನ್ ನಾಯಕರಾಗಿದ್ದು, ವೆನ್ಯಾ ರೈ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾಗೆ ಅಪಾರ ಜನಮನ್ನಣೆ ದೊರೆತಿದೆ.</p>



Source link

Leave a Reply

Your email address will not be published. Required fields are marked *