
<p>Shravani Subramanya serial plot: ಮದುವೆಯಾಗುವಂತೆ ಒತ್ತಡ ಹಾಕುತ್ತಿದ್ದ ಸಾವಿತ್ರಿಯನ್ನು ಕೊಲ್ಲಲು ಮದನ್ ಸಂಚು ರೂಪಿಸುತ್ತಾನೆ. ಆದರೆ, ಎಲೆಕ್ಟ್ರಿಕ್ ಶಾಕ್ ನೀಡಲು ಹೋಗಿ ಆಕಸ್ಮಿಕವಾಗಿ ತನ್ನ ತಾಯಿ ವಿಜಯಾಂಬಿಕೆಗೇ ಶಾಕ್ ತಗುಲುವಂತೆ ಮಾಡುತ್ತಾನೆ. </p><img><p>ಶ್ರಾವಣಿ ಮತ್ತು ಸುಬ್ರಮಣ್ಯ ಡಿವೋರ್ಸ್ಗೆ ಮುಂದಾಗಿರುವ ವಿಷಯ ಪದ್ದುಗೆ ಗೊತ್ತಾಗಿದೆ. ಇತ್ತ ಮನೆಗೆಲಸಕ್ಕೆ ಬಂದಿರುವ ಸಾವಿತ್ರಿಯನ್ನು ಬಳಸಿಕೊಂಡಿದ್ದ ಮದನ್, ಇದೀಗ ಆಕೆಯ ಪ್ರಾಣ ತೆಗೆಯಲು ಮುಂದಾಗಿದ್ದಾನೆ. ಶ್ರಾವಣಿ ಸಿಗದಿದ್ದಕ್ಕೆ ಮದನ್ ಕಣ್ಣು ಸಾವಿತ್ರಿ ಮೇಲೆ ಬಿದ್ದಿತ್ತು.</p><img><p>ಸಾಲಿಗ್ರಾಮದಿಂದ ಬಂದಿರುವ ಸಾವಿತ್ರಿ, ತಾನಾಯ್ತು ತನ್ನ ಕೆಲಸ ಆಯ್ತು ಅಂತಿದ್ದಳು. ಕಾಮುಕ ಮದನ್ ತನ್ನ ಬಣ್ಣದ ಮಾತುಗಳಿಂದ ಸಾವಿತ್ರಿಯನ್ನು ಒಲಿಸಿಕೊಂಡು ಆಕೆಯನ್ನು ಬಳಸಿಕೊಂಡಿದ್ದನು. ತನ್ನದು ಶುದ್ಧವಾದ ಪ್ರೀತಿ ಅಂತಾನೇ ಸಾವಿತ್ರಿಯನ್ನು ಮದನ್ ನಂಬಿಸಿದ್ದಾನೆ. ಇದೇ ಮಾತುಗಳನ್ನು ಸಾವಿತ್ರಿ ಸಹ ನಂಬಿದ್ದಾಳೆ.</p><p><strong>ಇದನ್ನೂ ಓದಿ: </strong><strong> ಶ್ರಾವಣಿ-ಸುಬ್ರಮಣ್ಯ ರಕ್ಷಣೆಗೆ ಮಹಾಶಕ್ತಿ ನಿಂತಾಯ್ತು; ಇನ್ಮುಂದೆ ಎದುರಾಳಿಗಳಿಗೆ ಇಲ್ಲ ಉಳಿಗಾಲ </strong></p><img><p>ಸಾಲಿಗ್ರಾಮಕ್ಕೆ ಹೋದರೆ ಮದುವೆ ಮಾಡಿಸಬಹುದು ಎಂದು ಸಾವಿತ್ರಿ ಊರಿಗೆ ತೆರಳದೇ ವೀರೆಂದ್ರನ ಮನೆಯಲ್ಲಿ ಉಳಿದುಕೊಂಡಿದ್ದಾಳೆ. ಸಾವಿತ್ರಿ ಮನೆಯಲ್ಲಿರೋದು ಮದನ್ಗೆ ಬಿಸಿ ತುಪ್ಪವಾಗಿದೆ. ತಮ್ಮಿಬ್ಬರ ಪ್ರೀತಿ ವಿಷಯ ಎಲ್ಲರಿಗೂ ತಿಳಿಸಿ ಮದುವೆಯಾಗುವಂತೆ ಮದನ್ ಮೇಲೆ ಸಾವಿತ್ರಿ ಒತ್ತಡ ಹಾಕುತ್ತಿದ್ದಾಳೆ.</p><p><strong>ಇದನ್ನೂ ಓದಿ: </strong><strong>Shravani Subramanya ಫಸ್ಟ್ ನೈಟ್ನಲ್ಲಿ ರೊಮಾನ್ಸ್ ಮಾಡುವ ವಿಧಾನವನ್ನು ಸೆಟ್ನಲ್ಲಿ ಹೀಗೆ ಕಲಿಸ್ತಾರೆ ನೋಡಿ! </strong></p><img><p>ಸಾವಿತ್ರಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಮದನ್ ಆಕೆಯ ಪ್ರಾಣ ತೆಗೆಯಲು ಮುಂದಾಗಿದ್ದಾನೆ. ಎಲೆಕ್ಟ್ರಿಕ್ ಶಾಕ್ ನೀಡಿ ಸಾವಿತ್ರಿಯನ್ನು ಕೊಲ್ಲಲು ಮದನ್ ಸಂಚು ರೂಪಿಸಿದ್ದನು. ಆದ್ರೆ ಈ ಶಾಕ್ ವಿಜಯಾಂಬಿಕೆಗೆ ತಗುಲಿದೆ. ತನಗೆ ಗೊತ್ತಿಲ್ಲದೇ ತಾಯಿಯ ಪ್ರಾಣಕ್ಕೆ ಕುತ್ತು ತಂದಿದ್ದಾನೆ. ಈಗಾಲಾದ್ರೂ ಸಾವಿತ್ರಿಗೆ ಸತ್ಯ ಗೊತ್ತಾಗುತ್ತಾ ಅಂತ ನೋಡಬೇಕಿದೆ.</p><p><strong>ಇದನ್ನೂ ಓದಿ: </strong><strong>Shravani Subramanya : ಸುಬ್ಬುಗೆ ಲವ್ ಗುರು ಆದ ಶ್ರೀವಲ್ಲಿ ನೋಡಿ ವೀಕ್ಷಕರು ಖುಷ್… ತ್ಯಾಗಮಯಿ ಈಕೆ</strong></p>
Source link
ಮಗನಿಂದಲೇ ವಿಜಯಾಂಬಿಕೆಗೆ ಶಾಕ್ ಟ್ರೀಟ್ಮೆಂಟ್: ಬದುಕುಳಿದ ಸಾವಿತ್ರಿಗೆ ಸತ್ಯ ದರ್ಶನ ಆಗುತ್ತಾ?