Headlines

ಚುಮುಚುಮು ಚಳಿಯಲಿ ನವಜೋಡಿ… ವಯನಾಡಿನಲ್ಲಿ ಪತಿ ಜೊತೆ ಗಾಯಕಿ ಸುಹಾನ

ಚುಮುಚುಮು ಚಳಿಯಲಿ ನವಜೋಡಿ… ವಯನಾಡಿನಲ್ಲಿ ಪತಿ ಜೊತೆ ಗಾಯಕಿ ಸುಹಾನ



ಚುಮುಚುಮು ಚಳಿಯಲಿ ನವಜೋಡಿ… ವಯನಾಡಿನಲ್ಲಿ ಪತಿ ಜೊತೆ ಗಾಯಕಿ ಸುಹಾನ
<p>Singer Suhana Syed: ‘ಸರಿಗಮಪ ಸೀಸನ್ 13′ ರ ಮೂಲಕ ಜನಪ್ರಿಯತೆ ಪಡೆದ ಗಾಯಕಿ ಸುಹಾನ ಸೈಯದ್ ಇತ್ತೀಚೆಗೆ ತಮ್ಮ ಬಹುಕಾಲದ ಗೆಳೆಯ ರಂಗಭೂಮಿ ಕಲಾವಿದ ನಿತಿನ್ ಶಿವಾಂಶ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಇದೀಗ ನವಜೋಡಿ ವಯನಾಡಲ್ಲಿ ಹನಿಮೂನ್ ಎಂಜಾಯ್ ಮಾಡುತ್ತಿದ್ದಾರೆ.</p><p>&nbsp;</p><img><p>‘ಸರಿಗಮಪ ಸೀಸನ್ 13′ ರ ಮೂಲಕ ಜನಪ್ರಿಯತೆ ಪಡೆದ ಗಾಯಕಿ ಸುಹಾನಾ ಸೈಯದ್ ಅವರು ಇತ್ತೀಚೆಗೆ ತಮ್ಮ ಬಹು ಕಾಲದ ಗೆಳೆಯ ರಂಗಭೂಮಿ ಕಲಾವಿದ ನಿತಿನ್ ಶಿವಾಂಶ್ ಜೊತೆ ಕುವೆಂಪುರವರ ಮಂತ್ರ ಮಾಂಗಲ್ಯ ವಿಧಾನದ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಸುದ್ದಿಯಾಗಿದ್ದರು.</p><img><p>’ಪ್ರೀತಿ ವಿಶ್ವದ ಭಾಷೆ. ಹೃದಯದಿಂದ ಹೊರಹೊಮ್ಮಿದ ಈ ಪ್ರೇಮ ಕಾವ್ಯ. ದೇವರ ವಿರಚಿತ. ಶ್ರ ಕುವೆಂಪುರವರ ಮಂತ್ರ ಮಾಂಗಲ್ಯದ ಆಶಯದಂತೆ ಜೊತೆಯಾಗಲಿರುವ ಸುಹಾನ ಮತ್ತು ನಿತಿನ್. ನಮ್ಮ ನಡೆ ವಿಶ್ವಮಾನವತ್ವದೆಡೆ ಸಹೃದಯಿಗಳೇ, ಬನ್ನಿ, ಹರಸಿ, ಆಶೀರ್ವದಿಸಿ’ ಎನ್ನುತ್ತಾ ಕೊಪ್ಪಳದಲ್ಲಿ ಸರಳವಾಗಿ ಕುವೆಂಪುರವರ ಮಂತ್ರ ಮಾಂಗಲ್ಯ ಆಶಯದಂತೆ ಮದುವೆಯಾಗಿದ್ದರು.</p><img><p>ಸುಹಾನ ಮತ್ತು ನಿತಿನ್ ಅವರದ್ದು ಹದಿನಾರು ವರ್ಷಗಳ ಪ್ರೀತಿಯಾಗಿದ್ದು, ಈ ಜೋಡಿ ಸರಳವಾದ ಕಾರ್ಯಕ್ರಮವೊಂದರಲ್ಲಿ ಅಕ್ಟೋಬರ್ 17ರಂದು ಅಂತರ್ ಧರ್ಮೀಯ ವಿವಾಹವಾಗಿದ್ದರು. ಇದೀಗ ಈ ಜೋಡಿ ವಯನಾಡಿಗೆ ತೆರಳಿದ್ದು, ಅಲ್ಲಿ ಚುಮು ಚುಮು ಚಳಿಯ ಮಧ್ಯೆ ಏಕಾಂತದ ಸಮಯ ಕಳೆಯುತ್ತಿದ್ದಾರೆ.</p><img><p>ಕೇರಳದ ಸುಂದರವಾದ ತಾಣವಾಗಿರುವ ವಯನಾಡಿಗೆ ಈ ಜೋಡಿ ತೆರಳಿದ್ದು, ಅಲ್ಲಿನ ಸುಂದರ ಪ್ರಕೃತಿಯ ನಡುವೆ ತೆಗೆಸಿಕೊಂಡಂತಹ ಕಪಲ್ಸ್ ಫೋಟೊಗಳನ್ನು ಸುಹಾನ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು Love, calm, and a view we didn’t want to leave ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.</p><img><p>ಸುಹಾನ ಶೇರ್ ಮಾಡಿರುವಂತಹ ಫೋಟೊಗಳಲ್ಲಿ ನವ ಜೋಡಿ, ಕೈ ಕೈಹಿಡಿದು, ವಯನಾಡಿನ ಸುಂದರ ತಾಣಗಳನ್ನು ಎಕ್ಸ್ ಪ್ಲೋರ್ ಮಾಡುವ, ಪ್ರಕೃತಿಯ ಹಿನ್ನೆಲೆಯಲ್ಲಿ ಕಾಫಿ ಸಿಪ್ ಮಾಡುತ್ತಿರುವ ಹಾಗೂ ತುಂಟತನ, ತರಲೆ ಮಾಡುತ್ತಿರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ.</p><img><p>ಅಭಿಮಾನಿಗಳು ಈ ಜೋಡಿಯ ಫೋಟೊಗಳಿಗೆ ಪ್ರೀತಿಯ ಮಳೆ ಸುರಿಸಿದ್ದು, ರಬ್ ನೇ ಬನಾದಿ ಜೋಡಿ, ಇಬ್ಬರ ಜೋಡಿ ಯಾವಾಗ್ಲೂ ಹೀಗೆ ಖುಷಿ ಖುಷಿಯಾಗಿರಲಿ, ಇಬ್ಬರ ಮೇಲೆ ಯಾವ ದೃಷ್ಟಿಯೂ ಬೀಳದೇ ಇರಲಿ ಎಂದು ಹಾರೈಸಿದ್ದಾರೆ.</p><img><p>ಸುಹಾನಾ ಸೈಯದ್ ಅವರು ಮದುವೆಯಾಗಿರುವ ನಿತಿನ್ ಶಿವಾಂಶ್ ಅವರು ವೃತ್ತಿಯಲ್ಲಿ ರಂಗಭೂಮಿ ಕಲಾವಿದರು. ಅವರು ಪ್ರಸಿದ್ಧ ರಂಗ ತರಬೇತಿ ಕೇಂದ್ರವಾದ ನೀನಾಸಂನಲ್ಲಿ ತರಬೇತಿ ಪಡೆದಿದ್ದಾರೆ. ಇಬ್ಬರ ನಡುವಿನ 16 ವರ್ಷಗಳ ಗೆಳೆತನವಿದ್ದು, ಇದೀಗ ಸತಿಪತಿಗಳಾಗಿದ್ದಾರೆ.</p><img><p>ಸುಹಾನ ಮತ್ತು ನಿತಿನ್ ಬೇರೆ ಬೇರೆ ಧರ್ಮದವರಾಗಿರುವುದರಿಂದ ಇಬ್ಬರ ಪ್ರೀತಿಗೆ ಎರಡೂ ಮನೆಯವರು ಒಪ್ಪಿಗೆ ನೀಡಲಿ, ಮನೆಯವರ ಸಮ್ಮುಖದಲ್ಲಿ ಮದುವೆಯಾಗಲಿ ಎಂದು ಪ್ರತಿ ಬಾರಿ ಮಂತ್ರಾಲಯಕ್ಕೆ ಬಂದಾಗ ಕಣ್ಣೀರಿಟ್ಟು ಬೇಡಿಕೊಳ್ಳುತ್ತಿದ್ದಂತೆ, ಹಾಗಾಗಿ ಮದುವೆಯಾದ ಕೆಲವೇ ದಿನಗಳಲ್ಲಿ ಈ ಜೋಡಿ ರಾಯನ ಆಶೀರ್ವಾದವನ್ನು ಜೊತೆಯಾಗಿ ಪಡೆದು ಬಂದಿದ್ದರು.</p>



Source link

Leave a Reply

Your email address will not be published. Required fields are marked *