
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ವಿರುದ್ದ ಪಾಕಿಸ್ತಾನ ಮುಗ್ಗರಿಸಿದೆ. ಬರೋಬ್ಬರಿ 61 ರನ್ ಸೋಲು ಕಂಡಿರುವ ಪಾಕಿಸ್ತಾನ ವಿರುದ್ದ ಪಾಕ್ ಅಭಿಮಾನಿಗಳು ಗರಂ ಆಗಿದ್ದಾರೆ. ಇತ್ತ ತಂಡದ ಆಟಗಾರರು ಸೋಲಿನ ನೋವಿನಲ್ಲಿದ್ದಾರೆ. ಆದರೆ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಆಘಾ ಆಲಿಗೆ ಯಾವುದೇ ನೋವಿಲ್ಲ. ಬದಲಾಗಿ ನೆಮ್ಮದಿಯಿದೆ. ಕಾರಣ ಅಭಿಷೇಕ್ ಶರ್ಮಾ ಆಡಬೇಕು ಆಹ್ವಾನಿಸಿದ್ದು ಇದೇ ಸಲ್ಮಾನ್ ಆಘಾ, ಬಳಿಕ ಅಭಿಷೇಕ್ ಶರ್ಮಾರನ್ನು ಶೂನ್ಯಕ್ಕೆ ಔಟ್ ಮಾಡಿಸಿದ ತಮ್ಮ ಮಾತು ಉಳಿಸಿಕೊಂಡಿದ್ದಾರೆ.
ಪಂದ್ಯದ ಹಿಂದಿನ ದಿನ ಅಭಿಷೇಕ್ ಭಾರತ ತಂಡದಲ್ಲಿ ಆಡಬೇಕು ಎಂದು ಹೇಳಿದ್ದ ಪಾಕ್ ನಾಯಕ ಸಲ್ಮಾನ್ ಆಘಾ, ಅವರೇ ಮೊದಲ ಓವರ್ನಲ್ಲಿ ಅಭಿಷೇಕ್ ವಿಕೆಟ್ ಪಡೆದರು.