ಬೆಂಗಳೂರು/ಕಲಬುರಗಿ, (ಅಕ್ಟೋಬರ್ 18): ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್ ಎಸ್ ಎಸ್ ಎಸ್ ಕಾರ್ಯಚಟುವಟಿಕೆಗಳಿಗೆ ಬ್ರೇಕ್ ಹಾಕಲು ಸಿಎಂ ಸಿದ್ದರಾಯಯ್ಯಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಇದರ ಬೆನ್ನಲ್ಲೇ ಸರ್ಕಾರ RSS ಸುತ್ತ ವ್ಯೂಹ ರಚಿಸುತ್ತಿದೆ. ಇದರ ಮೊದಲ ಭಾಗವೇ ಸರ್ಕಾರಿ ಸ್ಥಳದಲ್ಲಿ RSS ಚಟುವಟಿಕೆಗೆ ಕಡಿವಾಣ ಹಾಕಿದೆ. ಈ ಎಲ್ಲಾ ಜಟಾಪಟಿ ನಡೆವೆಯೂ ಪ್ರಿಯಾಂಕ್ ಖರ್ಗೆ ತವರು ಕ್ಷೇತ್ರ ಚಿತ್ತಾಪುರದಲ್ಲಿ ಆರ್ ಎಸ್ ಎಸ್ ಪಥಸಂಚಲನ ನಡೆಸಿದ್ದು, ಭಾರೀ ಸಂಚಲನಕ್ಕೆ ಕಾರಣವಾಗಿದೆ. ಇನ್ನು RSS ಪಥ ಸಂಚಲನಕ್ಕಾಗಿ ಚಿತ್ತಾಪುರ ತಹಶೀಲ್ದಾರ್ 11 ಅಂಶಗಳ ವಿವರಣೆ ಕೇಳಿದ್ದಾರೆ.