Headlines

10 ಲಕ್ಷ ರೂ.ಭೂಮಿಗೆ 10 ಕೋಟಿ ರೂ: ಸದನದಲ್ಲಿ ಯತ್ನಾಳ್ vs ಡಿಕೆಶಿ ವಾಕ್ಸಮರ

10 ಲಕ್ಷ ರೂ.ಭೂಮಿಗೆ 10 ಕೋಟಿ ರೂ: ಸದನದಲ್ಲಿ ಯತ್ನಾಳ್ vs ಡಿಕೆಶಿ ವಾಕ್ಸಮರ


ಬೆಳಗಾವಿ, (ಡಿಸೆಂಬರ್ 09): ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶದ (ಬೆಳಗಾವಿ ಚಳಿಗಾಲದ ಅಧಿವೇಶನ) ಎರಡನೇ ದಿನವಾದ ಇಂದು(ಡಿಸೆಂಬರ್ 09) ಪ್ರಶ್ನೋತ್ತರ ಕಲಾಪ ವೇಳೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (ಬಸನಗೌಡ ಪಾಟೀಲ್ ಯತ್ನಾಳ್) ಕೃಷ್ಣ ಮೇಲ್ದಂಡೆ ಯೋಜನೆಯ ಬಗ್ಗೆ ಪ್ರಸ್ತಾಪಿಸಿದರು. ಭೂ ಪರಿಹಾರಕ್ಕೆ ಕಾಲಮಿತಿ ಯಾವಾಗ ನಿಗದಿ ಮಾಡುತ್ತೀರಿ. ಆದೇಶ ಆಗಿರುವ ಹಿಂದಿನ ವ್ಯಾಜ್ಯಗಳಿಗೆ ಯಾವಾಗ ಪರಿಹಾರ ಕೊಡುತ್ತೀರಿ ಎಂದು ಪ್ರಶ್ನಿಸಿದ್ದರು.

ಇದಕ್ಕೆ ನೀರಾವರಿ ಸಚಿವ, ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ, ಪರಿಹಾರ ಹತ್ತು ಲಕ್ಷಕ್ಕೆ ಹತ್ತು ಕೋಟಿ ನಿಗದಿ ಮಾಡಿದ್ದಾರೆ. ಇದನ್ನು ನಾನು ಒಪ್ಪಲ್ಲ, ಕಾನೂನಿನ ಮಿತಿಯಲ್ಲಿಯೇ ಪರಿಹಾರ ಕೊಡುತ್ತೇವೆ ಎಂದು ಉತ್ತರಿಸಿದರು. ಇದರಿಂದ ಆಕ್ರೋಶಗೊಂಡ ಯತ್ನಾಳ್, ಇದು ರೈತರು ಮತ್ತು ನ್ಯಾಯಾಂಗಕ್ಕೆ ಮಾಡಿದ ಅಪಮಾನ ಎಂದು ಸಭಾತ್ಯಾಗ ಮಾಡಿದರು.



Source link

Leave a Reply

Your email address will not be published. Required fields are marked *