ತಿರುಪತಿ, ಜನವರಿ 04: ಆಂಧ್ರಪ್ರದೇಶದ ತಿರುಪತಿ ದೇವಾಲಯದ ತಿರುಪತಿಯಲ್ಲಿ ಶುಕ್ರವಾರ ತಡರಾತ್ರಿ ಮತ್ತಿನಲ್ಲಿ ಯುವಕನೊಬ್ಬ ಶ್ರೀ ಗೋವಿಂದರಾಜಸ್ವಾಮಿ ದೇವಾಲಯದ ಮೇಲೆ ಹತ್ತಿ ಸುಮಾರು 3 ಗಂಟೆಗಳ ಕಾಲ ಅಲ್ಲೇ ಕುಳಿತು ಮದ್ಯಕ್ಕೆ ಬೇಡಿಕೆ ಇಟ್ಟಿರುವ ಘಟನೆ ನಡೆದಿದೆ.
ವಿಪರ್ಯಾಸವೆಂದರೆ ಆ ಕುಡುಕನ ಹೆಸರು ಕೂಡ ತಿರುಪತಿ. ಅಧಿಕಾರಿಗಳು ಮತ್ತು ಆತನನ್ನು ಕೆಳಗೆ ಇಳಿಸಲು ಹರಹಸ ಪಟ್ಟರು. ದೇವಾಲಯ ಮುಚ್ಚಿದ ಸ್ವಲ್ಪ ಸಮಯದ ನಂತರ ಈ ಘಟನೆ ಸಂಭವಿಸಿದೆ, ಹೇಗೋ ದೇವಸ್ಥಾನದ ಗೋಡೆಯನ್ನು ಹಾರಿ ಆವರಣಕ್ಕೆ ಪ್ರವೇಶಿಸಿದೆ ಎಂದು ಹೇಳಲಾಗಿದೆ. ಅವನು ಮದ್ಯದ ಅಮಲಿನಲ್ಲಿದ್ದ ಎಂದು ವರದಿಯಾಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ