ಹೊಯ್ಸಳೇಶ್ವರ ದೇವಾಲಯದ ಶಿಲ್ಪಗಳ ವಿಶೇಷತೆಚಿತ್ರ ಕ್ರೆಡಿಟ್ ಮೂಲ: ಫೇಸ್ಬುಕ್
ನಮ್ಮ ದೇಶದ ಪುರಾತನವಾದ ದೇವಾಲಯಗಳು (ಐತಿಹಾಸಿಕ ದೇವಾಲಯ) ಸಾಕಷ್ಟು ಇವೆ. ಆ ಕಾಲದಲ್ಲಿ ನಿರ್ಮಾಣವಾಗುತ್ತಿರುವ ಕೋಟೆಗಳು ಸೇರಿದಂತೆ ದೇವಾಲಯಗಳೆಲ್ಲ ವಿಶೇಷತೆಯಿಂದ ಕೂಡಿದ್ದವು. ಇದಕ್ಕೆ ಸಾಕ್ಷಿಯಾಗಿದೆ ಶಿವನಿಗೆ ಸಮರ್ಪಿತವಾಗಿರುವ ಈ ಹೊಯ್ಸಳೇಶ್ವರ ದೇವಾಲಯ (ಹೊಯ್ಸಳೇಶ್ವರ ದೇವಸ್ಥಾನ) ಟೂರಿಸ್ಟ್ ಗೈಡ್ ಒಬ್ಬರು ಈ ಐತಿಹಾಸಿಕ ತಾಣಕ್ಕೆ ಭೇಟಿ ನೀಡಿದರು. ಇಂದಿನ ಶಿಲ್ಪಗಳು ಅಮೋಘವಾದುದು. ದೇವಾಲಯವನ್ನು ಬಳಪದ ಕಲ್ಲುಗಳ ಬಳಕೆಯಿಂದ ನಿರ್ಮಾಣ ಮಾಡಲಾಗಿದೆ. ಕಲ್ಲಿನ ಈ ವಿಶೇಷ ಗುಣದಿಂದಲೇ ಹೊಯ್ಸಳರ ದೇವಾಲಯಗಳಲ್ಲಿ ಸೂಕ್ಷ್ಮ ಕಸೂರಿ ಕೆತ್ತನೆಯು ಬಹಳ ಆಕರ್ಷಕ ಸುಂದರ. ಈ ಪುರಾಣದ ಕಥೆಗಳು ಹಾಗೂ ಇತಿಹಾಸವನ್ನು ತೆರೆದಿಡುವ ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಡಾ. ಆಯುರ್ ಹರೀಶ್ ಎಎಲ್ ಅವರ ಸೃಜನಶೀಲತೆಯ ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಟೂರಿಸ್ಟ್ ಗೈಡ್ ಒಬ್ಬರು, ಹೊಯ್ಸಳೇಶ್ವರ ದೇವಾಲಯದ ಶಿಲ್ಪ ಕಲೆಗಳು ಮತ್ತು ಕೆತ್ತನೆಯನ್ನು ಬಹಳ ಸೊಗಸಾಗಿ ವಿವರಿಸಲಾಗಿದೆ. ಈ ವಿಡಿಯೋದಲ್ಲಿ ಪ್ರತಿಯೊಂದು ಕೆತ್ತನೆಯ ಹಿಂದಿನ ವಿಶೇಷತೆ, ಸೂಕ್ಷ್ಮವಾದ ಕಸೂರಿಗೆ ಒತ್ತು ನೀಡಲಾದ ರೀತಿ, ಆಭರಣಗಳ ವಿನ್ಯಾಸದಲ್ಲಿ ಕಲಾತ್ಮಕತೆ, ಹಿಂದೂ ಸಂಬಂಧಿತ ದಂತಕಥೆಗಳನ್ನು ಚಿತ್ರಿಸಲಾಗಿದೆ. ರಾಮಾಯಣ, ಮಹಾಭಾರತ ಸೇರಿದಂತೆ ಪುರಾಣ ಪ್ರಸಿದ್ಧ ಕಥೆಗಳನ್ನು ಹೇಳುವ ಶಿಲ್ಪಗಳ ಆಕರ್ಷಕ ಕೆತ್ತನೆಗಳನ್ನು ನೀವಿಲ್ಲಿ ನೋಡಲಾಗುವುದಿಲ್ಲ. ದೇವಾಲಯದ ಮುಂದೆ ದೊಡ್ಡ ನಂದಿ ಮೂರ್ತಿಯುಳ್ಳ ನಂದಿಮಂಟಪ ಮತ್ತು ಅದರ ಅಲಂಕಾರವನ್ನು ಸೂಕ್ಷ್ಮವಾಗಿ ವಿವರಿಸಬಹುದು.
ವಿಡಿಯೋ ಇಲ್ಲಿದೆ ನೋಡಿ
ಇದನ್ನೂ ಓದಿ:ಗ್ರೀಕ್ ಪ್ರತಿಮೆ ಸ್ನಾಯುಗಳ ತೋರ್ಪಡಿಕೆ ಭಾರತೀಯ ಶಿಲ್ಪಗಳಲ್ಲಿ ಯಾಕಿಲ್ಲ; ಚರ್ಚೆಗೆ ಕಾರಣವಾಯ್ತು ಪೋಸ್ಟ್
ಈ ವಿಡಿಯೋ ಇದುವರೆಗೆ ಹದಿನೈದು ಸಾವಿರಕ್ಕೂ ಅಧಿಕ ವೀಕ್ಷಣೆಗಳು ಇವೆ. ಒಬ್ಬ ಬಳಕೆದಾರ, ಈ ವಿಗ್ರಹಗಳನ್ನು ಕೆತ್ತಿದ ಶಿಲ್ಪಿಗಳಿಗೆ ನನ್ನದೊಂದು ನಮನಗಳು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಗುರುಗಳೇ ನೀವು ಹೇಳುವ ಇತಿಹಾಸ ಕೇಳ್ತಾ ಇದ್ರೆ ನಾವೇ ಆ ಕಾಲಘಟ್ಟದಲ್ಲಿ ಜೀವಿಸ್ತಾ ಇದ್ರಿ ಅನ್ಸುತ್ತೆ ಎಂದು ಹೇಳಿದ್ದಾರೆ. ನಮ್ಮ ಭಾರತೀಯ ಪರಂಪರೆಯ ತರಹ ಪ್ರಪಂಚದ ಯಾವ ಮೂಲೆಯಲ್ಲೂ ಇಲ್ಲ.. ಕಲ್ಲಿನಿಂದ ಕೆತ್ತಲಾದ ಈ ವಿಗ್ರಹಗಳು. ಪ್ರಪಂಚದ ಯಾವ ಭಾಗದಲ್ಲಿ ಈ ರೀತಿ ಕೆತ್ತನೆ ನೋಡೋಕೆ ಸಿಗುತ್ತೆ.. ನಮ್ಮ ಅನಾದಿ ಕಾಲದ ಶಿಲ್ಪಾ ಕಾಲರು ಎಂತ ನಿಪುಣರು ಅನ್ನೋದು ಇದನೆಲ್ಲ ನೋಡಿದಾಗ ಗೊತ್ತಾಗುತ್ತೆ ಎಂದು ಅದರ ಬಳಕೆದಾರ ಕಾಮೆಂಟ್ ನಲ್ಲಿ ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ