
ಹಿಂದೂ ಸನಾತನ ಸಂಪ್ರದಾಯಗಳಲ್ಲಿ ಅನೇಕ ವಿಧಿ ವಿಧಾನಗಳಿವೆ. ಅವುಗಳ ಸಾಮಾಜಿಕ, ಆಧ್ಯಾತ್ಮಿಕ ಮತ್ತು ಆಧಾರವಾಗಿರುವ ಹಿನ್ನೆಲೆಯನ್ನು ಅರಿತಾಗ ಅವುಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತದೆ. ವಿವಾಹದ ಸಂದರ್ಭದಲ್ಲಿ ವಧು ವರರ ತಲೆಯ ಮೇಲೆ ಜೀರಿಗೆ ಬೆಲ್ಲ ಇಡುವ ವಿಧಿ ಅಂತಹ ಒಂದು ವಿಶಿಷ್ಟ ಆಚರಣೆಯಾಗಿದೆ. ಈ ಆಚರಣೆಯ ವೈಶಿಷ್ಟ್ಯಗಳು, ತಲೆಯ ಮೇಲಿರುವ ಸಹಸ್ರಾರ ಚಕ್ರವನ್ನು ಜಾಗೃತಿಗೊಳಿಸುವುದು. ಮದುವೆಯ ನಂತರ ಜೀವನದಲ್ಲಿ ಜವಾಬ್ದಾರಿಗಳು ಹೆಚ್ಚಾಗುವುದರಿಂದ, ಈ ವಿಧಿಯು ನಾನು ಮದುವೆಯಾಗುತ್ತಿದ್ದೇನೆ, ನನಗೆ ಜವಾಬ್ದಾರಿಗಳು ಬರುತ್ತಿವೆ ಎಂಬ ಅಂಶವನ್ನು ಮೂಡಿಸುತ್ತದೆ. ಇದರಿಂದ ಸಂಪಾದನೆ, ಆದಾಯ, ಖರ್ಚುಗಳನ್ನು ನಿಭಾಯಿಸುವ ಅರಿವು ಮೂಡುತ್ತದೆ. ದೇಹದಲ್ಲಿ ಧನಾತ್ಮಕ ಶಕ್ತಿಗಳು ಜಾಗೃತಗೊಳ್ಳುತ್ತವೆ.
ಜೀರಿಗೆಯು ದೇಹದಲ್ಲಿರುವ ಋಣಾತ್ಮಕ ಶಕ್ತಿಗಳನ್ನು ಹೊರಹಾಕುತ್ತದೆ ಎಂದು ನಂಬಲಾಗಿದೆ. ಬೆಲ್ಲವು ತಾಪಮಾನವನ್ನು ಉತ್ತೇಜಿಸುತ್ತದೆ. ಆದರೆ ಇಲ್ಲಿ ಜೀರಿಗೆ ಬೆಲ್ಲವನ್ನು ಸೇವಿಸಲು ನೀಡುವುದಿಲ್ಲ, ಬದಲಿಗೆ ತಲೆಯ ಮೇಲೆ ಇಡದಿದ್ದರೆ. ಇದು ದಂಪತಿಗಳಲ್ಲಿ ಅನ್ಯೋನ್ಯತೆಯನ್ನು ಹೆಚ್ಚಿಸಿ, ಮನಸ್ಸಿನ ಭಾವನೆಗಳಿಗೆ ವಿಶೇಷ ಶಕ್ತಿಯನ್ನು ನೀಡುತ್ತದೆ. ಮಾನಸಿಕವಾಗಿ ಪರಿವರ್ತನೆ ಮಾಡುವಂತಹ ಈ ವಿಧಿಯು ಪ್ರಾಚೀನ ಸಂಪ್ರದಾಯಗಳ ಸಕಾರಾತ್ಮಕ ಪ್ರಭಾವಕ್ಕೆ ಸಾಕ್ಷಿ ಎಂಬುದು ಡಾ. ಬಸವರಾಜ ಗುರೂಜಿ ಅವರ ಅಭಿಪ್ರಾಯ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.