
ಸ್ಟಾರ್ ನಟಿ ತ್ರಿಷಾ ಸುತ್ತ ಇದೀಗ ರಾಜಕೀಯದ ವದಂತಿಗಳು ಹರಿದಾಡುತ್ತಿವೆ. ನಟ ವಿಜಯ್ ಮತ್ತು ತ್ರಿಷಾ ನಡುವಿನ ಅಫೇರ್ ಸುದ್ದಿ ಈ ಚರ್ಚೆಗಳಿಗೆ ಕಾರಣವಾಗಿದೆ. ಇದು ಕೇವಲ ಕಾಲಿವುಡ್ಗೆ ಸೀಮಿತವಾಗಿಲ್ಲ, ತಮಿಳುನಾಡು ರಾಜಕೀಯದಲ್ಲೂ ಚರ್ಚೆಯ ವಿಷಯವಾಗಿದೆ. ಈ ವಿಚಾರ ಕೇವಲ ಅಫೇರ್ಗೆ ನಿಲ್ಲದೆ, ರಾಜಕೀಯದಲ್ಲೂ ಸಂಚಲನ ಮೂಡಿಸುತ್ತಿದೆ. ತ್ರಿಷಾ ಏನೋ ದೊಡ್ಡ ಪ್ಲ್ಯಾನ್ ಮಾಡುತ್ತಿರುವಂತಿದೆ. ಇದರ ಹಿಂದೆ ನಟ ವಿಜಯ್ ಕೈವಾಡವಿದೆಯೇ ಎಂಬ ಅನುಮಾನ ಮೂಡಿದೆ. ಇನ್ನೊಂದೆಡೆ, ಪವನ್ ಕಲ್ಯಾಣ್ ಅವರ ತಂತ್ರವನ್ನೇ ಇವರು ಬಳಸುತ್ತಿದ್ದಾರಾ ಎಂಬ ಮಾತು ಕೇಳಿಬರುತ್ತಿದೆ.