
ನೆಮ್ಮದಿ ಮತ್ತು ಮೌನದ ಕುರಿತು ಮತ್ತೊಂದು ಸಂದೇಶ!
ತ್ರಿಶಾ ಅವರ ಪೋಸ್ಟ್ಗಳ ಸರಣಿ ಇಲ್ಲಿಗೆ ನಿಂತಿಲ್ಲ. ಅವರು ಶಾಂತಿ ಮತ್ತು ಮೌನದ ಮಹತ್ವದ ಬಗ್ಗೆಯೂ ಮತ್ತೊಂದು ಸಂದೇಶ ಹಂಚಿಕೊಂಡಿದ್ದಾರೆ. “ಯಾರು ಮೂರ್ಖರಾಗಿರಲು ಅಥವಾ ಅಜ್ಞಾನಿಯಾಗಿರಲು ಬಯಸುತ್ತಾರೋ, ಅಂತಹವರನ್ನು ಒಪ್ಪಿಸಲು ನಿಮ್ಮ ಉಸಿರನ್ನು ವ್ಯರ್ಥ ಮಾಡಬೇಡಿ, ಸುಮ್ಮನೆ ಶಾಂತವಾಗಿರಿ” ಎಂಬ ಅರ್ಥದ ಉಲ್ಲೇಖವನ್ನು ಅವರು ಹಂಚಿಕೊಂಡಿದ್ದಾರೆ. ವ್ಯರ್ಥ ವಾದ-ವಿವಾದಗಳಿಗಿಂತ ಮಾನಸಿಕ ಶಾಂತಿ ಮತ್ತು ಮೌನವೇ ಶ್ರೇಷ್ಠ ಎಂಬುದು ಈ ಸಂದೇಶದ ಸಾರವಾಗಿದೆ. ಜೀವನದಲ್ಲಿ ಎದುರಾಗುವ ಅನಗತ್ಯ ಟೀಕೆಗಳಿಗೆ ತ್ರಿಶಾ ಈ ಮೂಲಕ ಪರೋಕ್ಷವಾಗಿ ಉತ್ತರ ನೀಡುತ್ತಿದ್ದಾರೆಯೇ ಎಂಬ ಚರ್ಚೆ ಶುರುವಾಗಿದೆ. ಅಭಿಮಾನಿಗಳು ತ್ರಿಶಾ ಅವರ ಈ ಪ್ರಬುದ್ಧ ಮತ್ತು ತಾಳ್ಮೆಯ ನಿಲುವನ್ನು ಕಂಡು ‘ಪರಿಪಕ್ವ ನಟಿ’ ಎಂದು ಕೊಂಡಾಡುತ್ತಿದ್ದಾರೆ.