
ಪತಿಯಿಯಿಂದಲೇ ಪತ್ನಿಯ ಹತ್ಯೆಗೆ 40 ಲಕ್ಷ ಸುಪಾರಿ ಸುಪಾರಿ. ಹೌದು ಪತ್ನಿ ಲಲಿತಾ(43) ಕೊಲೆಗೆ ಅವರ ಪತಿಯಾದ ಉದಯ ಹತ್ತರಗಿ ಸುಪಾರಿ ನೀಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಲಲಿತಾ ಅವರು ಧಾರವಾಡ ತಾಲೂಕಿನ ಸೋಮಾಪುರ ಗ್ರಾಮದ ಮಹಿಳೆಯಾಗಿದ್ದು, 2000ನೇ ಇಸವಿಯಲ್ಲಿ ಉದಯ್ ಹಾಗೂ ಲಲಿತಾ ಮದುವೆಯಾಗಿತ್ತು.
ಪತಿ ಉದಯ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದವನಾಗಿದ್ದು, ದಂಪತಿ ಮಧ್ಯೆ ಹತ್ತು ವರ್ಷಗಳಿಂದ ಸಂಬಂಧ ಹದಗೆಟ್ಟಿತ್ತು. ಹೀಗಾಗಿ ಲಲಿತಾ ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ನಲ್ಲಿ ವಿಚಾರಣೆ ನಡೆದು ಅಂತಿಮ ಹಂತಕ್ಕೆ ತಲುಪಿತ್ತು. ವಿಚಾರಣೆ ವೇಳೆ ಪರಿಹಾರವಾಗಿ ಲಲಿತಾ ಎರಡು ಎಕರೆ ಜಮೀನು ಕೇಳಿದ್ದು, ಭೂಮಿ ನೀಡುವುದಕ್ಕೆ ಉದಯ್ ನಿರಾಕರಿಸಿದ್ದರು.