ಉಡುಪಿ, ಡಿಸೆಂಬರ್ 04: ಉಡುಪಿ ನಗರ ವ್ಯಾಪ್ತಿಯ ರಸ್ತೆಗಳು ಹಾಳಾಗಿದ್ದು, ದುರಸ್ತಿ ಮಾಡಲೇಬೇಕಾದ ಸ್ಥಿತಿ ಇದೆ. ದಿನ ನಿತ್ಯ ಶಾಲೆಗೆ ಹೋಗುವ ಪುಟಾಣಿಗೂ ಇದು ಅರಿವಿಗೆ ಬಂದಂತಿದೆ. ಹೀಗಾಗಿ ಶಾಲೆಗೆ ಹೋಗುವ ರಸ್ತೆ ಸರಿಯಿಲ್ಲ, ರಿಪೇರಿ ಮಾಡುವಂತೆ ನಗರಸಭೆ ಆಯುಕ್ತ ಮಹಾಂತೇಶ್ ಅವರಿಗೆ ತನ್ಮಯ್ ಕಾಮತ್ ಎಂಬ ಪುಟಾಣಿ ಹುಡುಗ ಮನವಿ ಮಾಡಿದ್ದಾನೆ. ಮುಕುಂದ ಕೃಪ ಶಾಲೆಯಲ್ಲಿ ಓದುತ್ತಿರುವ ತನ್ಮಯ್ ಕಾಮತ್, ಆಯುಕ್ತರನ್ನು ಭೇಟಿ ಮಾಡಿ ರಸ್ತೆ ಹದಗೆಟ್ಟ ಬಗ್ಗೆ ದೂರು ನೀಡಿದ್ದಾನೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.