
ತುಮಕೂರು, ಮಾರ್ಚ್ 15: ಜಿಲ್ಲೆಯ ಕೊರಟಗೆರೆ ತಾಲೂಕಿನ ವಡ್ಡೇರಹಳ್ಳಿ ಗ್ರಾಮದ ಬಳಿ ಎತ್ತಿನಹೊಳೆ ಯೋಜನೆ ಭಾಗವಾಗಿ ಬಫರ್ ಡ್ಯಾಮ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಸುಮಾರು 1.2 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿರುವ ಈ ಡ್ಯಾಮ್ ನಿರ್ಮಾಣಕ್ಕೆ ಬಜೆಟ್ನಲ್ಲಿಯೂ ಅನುಮೋದನೆ ಸಿಕ್ಕಿದೆ. ಆದರೆ ವಡ್ಡೇರಹಳ್ಳಿ ಬಳಿ ಹಾದುಹೋಗುವ ಎತ್ತಿನಹೊಳೆ ನಾಲೆಯ ಬಳಿ 817.50 ಮೀಟರ್ ಎತ್ತರ ಮತ್ತು ಸುಮಾರು 1,440 ಮೀಟರ್ ಉದ್ದದ ಬಫರ್ ಡ್ಯಾಮ್ ನಿರ್ಮಿಸುವ ಈ ಹಳ್ಳಿಗಳನ್ನೇ ಮುಳುಗಿಸಬಹುದೆಂಬ ಆತಂಕವು ಸರ್ಕಾರದ ನಿರ್ಧಾರಕ್ಕೆ ಸ್ಥಳೀಯ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ನೀರು ಸಾಗಿಸಲು ಈ ಡ್ಯಾಮ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಸರ್ಕಾರವೇನೋ ಹೇಳಿದೆ. ಆದರೆ ನಿರ್ಧರಿಸಿದ್ದ ಬಫರ್ ಡ್ಯಾಮ್ ಯೋಜನೆ ಮೂಲ ಸ್ಥಳದಲ್ಲಿ ಬದಲಾಗಿ ವಡೇರಹಳ್ಳಿಯಲ್ಲಿ ಅಣೆಕಟ್ಟು ನಿರ್ಮಾಣದ ಚಿಂತನೆಗೆ ಗ್ರಾಮಸ್ಥರು ಅಸಮಾಧಾನಗೊಂಡಿದ್ದಾರೆ. ಈ ಡ್ಯಾಮ್ ನಿರ್ಮಾಣ ವಿಚಾರ ವಡ್ಡೇರಹಳ್ಳಿ ಸೇರಿದಂತೆ ಕಾಟೇನಹಳ್ಳಿ, ಅಂಕೋನಹಳ್ಳಿ, ನಾಯಕರಪಾಳ್ಯ, ಚೆಣಚೆಹಟ್ಟಿ, ನರಸಾಪುರ ಹಾಗೂ ಗಾಣದಹಟ್ಟಿ ಸೇರಿದಂತೆ ಏಳೆಂಟು ಗ್ರಾಮಗಳ ರೈತರ ಆತಂಕಕ್ಕೆ ಕಾರಣವಾಗಿದೆ. ಭೂಮಿ ಮತ್ತು ಮನೆಗಳು ಮುಳುಗುವ ಭೀತಿಯಿಂದ ರೈತರು ಯೋಜನೆಗೆ ಒಳಗಾಗಿದ್ದರೆ, ಪ್ರಾಣ ಬಿಟ್ಟೇವೇ ಡ್ಯಾಮ್ ನಿರ್ಮಾಣಕ್ಕೆ ಜಾಗ ನೀಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ವರ್ಷಗಳಿಂದ ಅಭಿವೃದ್ಧಿ ಕಾಣದೆ ಉಳಿದ ಬಾಲಕಿಯರ ವಸತಿ ನಿಲಯ; ಮೌಢ್ಯವನ್ನೇ ನೆಪ ಮಾಡಿಕೊಂಡಿತಾ ಸರ್ಕಾರ?
ಮತ್ತೊಂಡೆ ಸ್ಥಳೀಯ ಗ್ರಾಮಸ್ಥರ ವಿರೋಧದ ಬಗ್ಗೆ ಗೃಹ ಸಚಿವ ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ರೈತರನ್ನು ಕೂರಿಸಿಕೊಂಡು ಮಾತನಾಡುವ ಮುಖಾಂತರ ಸಮಸ್ಯೆ ಕುರಿತು ವಿವರಿಸಿದ್ದಾರೆ. ಈ ಹಿಂದೆ ಬಫರ್ ಡ್ಯಾಂ ಬೈರಗೊಂಡನಹಳ್ಳಿಯಲ್ಲಿ ನಿರ್ಮಿಸುವ ಚಿಂತನೆ ನಡೆದಿತ್ತು. ಕೆಲ ಬೆಳವಣಿಗೆ ಬಳಿಕ ದೊಡ್ಡಬಳ್ಳಾಪುರದ ಚರ್ಚೆಯಾಯ್ತು. ನಂತರ ಮತ್ತೆ ಬೈರಗೊಂಡ್ಲುವಿನಲ್ಲಿ ಮಾಡುವ ಬಗ್ಗೆ ಚರ್ಚೆಯಾದಾಗ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಆರೇಳು ಬಾರಿ ಮಾಡಿದರೂ ಗ್ರಾಮಸ್ಥರು ಬೇಡ ಎಂದರು ಸಭೆ. ಹೀಗಾಗಿ ವಡೇರಹಳ್ಳಿಯಲ್ಲಿ ನಿರ್ಮಾಣ ನಿರ್ಧಾರ ಕೈಗೊಳ್ಳಲಾಗಿದೆ. ಸ್ಥಳೀರನ್ನು ಯಾವುದಾದರೂ ಮಾಡಿ ಮನವೊಲಿಸುವ ಮುಖಾಂತರ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಸಮಸ್ಯೆ ಬಗೆ ಹರಿಸಲಾಗುವುದು. ಹೀಗಿದ್ದರೂ ಸದ್ಯ ಸರ್ಕಾರದ ನಿರ್ಧಾರದ ವಿರುದ್ಧ ಆಕ್ರೋಶಗೊಂಡ ಗ್ರಾಮಸ್ಥರು ಕಾನೂನು ಹೋರಾಟಕ್ಕೆ ಮುಂದಾಗಿದ್ದು, ಬಫರ್ ಡ್ಯಾಮ್ ನಿರ್ಮಾಣ ವಿಚಾರ ಸರ್ಕಾರ ಹಾಗೂ ಗ್ರಾಮಸ್ಥರ ನಡುವಿನ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಇದು ಎಲ್ಲಿಗೆ ಹೋಗಿ ನಿಲ್ಲುತ್ತೆ ಕಾದುನೋಡಬೇಕಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.