Headlines

ಮದ್ವೆ ಬಳಿಕ ಕೇಳ್ತಿದ್ದ ಆ ಪ್ರಶ್ನೆಗೆ ನಟಿ ವೈಷ್ಣವಿ ಗೌಡ 7 ತಿಂಗಳಿಗೆ ಕೊಟ್ಟರು ಉತ್ತರ! ಫ್ಯಾನ್ಸ್​ ಫುಲ್​ ಖುಷ್​

ಮದ್ವೆ ಬಳಿಕ ಕೇಳ್ತಿದ್ದ ಆ ಪ್ರಶ್ನೆಗೆ ನಟಿ ವೈಷ್ಣವಿ ಗೌಡ 7 ತಿಂಗಳಿಗೆ ಕೊಟ್ಟರು ಉತ್ತರ! ಫ್ಯಾನ್ಸ್​ ಫುಲ್​ ಖುಷ್​



ಮದ್ವೆ ಬಳಿಕ ಕೇಳ್ತಿದ್ದ ಆ ಪ್ರಶ್ನೆಗೆ ನಟಿ ವೈಷ್ಣವಿ ಗೌಡ 7 ತಿಂಗಳಿಗೆ ಕೊಟ್ಟರು ಉತ್ತರ! ಫ್ಯಾನ್ಸ್​ ಫುಲ್​ ಖುಷ್​
‘ಅಗ್ನಿಸಾಕ್ಷಿ’ ಖ್ಯಾತಿಯ ನಟಿ ವೈಷ್ಣವಿ ಗೌಡ, ತಮ್ಮ ಮದುವೆಯಾಗಿ ಏಳು ತಿಂಗಳ ನಂತರ ಲವ್ ಸ್ಟೋರಿ ಬಗ್ಗೆ ಎದ್ದಿದ್ದ ಪ್ರಶ್ನೆಗೆ ಉತ್ತರಿಸಿದ್ದಾರೆ. ಕಾರಿನಲ್ಲಿ ದೇವರು ಹೋಗುತ್ತಿರುವ ಎಐ ಫೋಟೋ ಹಂಚಿಕೊಳ್ಳುವ ಮೂಲಕ, ತಮ್ಮ ಮದುವೆ ದೇವರ ಕೃಪೆಯಿಂದ ನಡೆದಿದೆ ಎಂದು ಅವರು ಸೂಚ್ಯವಾಗಿ ತಿಳಿಸಿದ್ದಾರೆ.<img><p>ಅಗ್ನಿಸಾಕ್ಷಿಯ ಸನ್ನಿಧಿಯಾಗಿ, ಸೀತಾರಾಮದ ಸೀತೆಯಾಗಿ ಮಿಂಚಿರೋ ನಟಿ ವೈಷ್ಣವಿ ಗೌಡ ಅವರು, ಉತ್ತರಾಖಂಡ ಮೂಲದ ಅನುಕೂಲ್‌ ಮಿಶ್ರಾ ಜೊತೆ ಮದುವೆಯಾಗಿ ಜಾಲಿ ಮೂಡ್​ನಲ್ಲಿದ್ದಾರೆ. ಮೆಟ್ರಿಮೋನಿಯಲ್ಲಿ ವೈಷ್ಣವಿ ಗೌಡ ಹಾಗೂ ಅನುಕೂಲ್‌ ಮಿಶ್ರಾ ಪರಿಚಯ ಆಗಿದೆ. ಒಂದು ವರ್ಷದ ಹಿಂದೆಯೇ ಇವರ ಮದುವೆ ಫಿಕ್ಸ್‌ ಆಗಿತ್ತು. ಆದ್ರೆ ಸೀಕ್ರೇಟ್​ ಆಗಿ ಇಟ್ಟಿದ್ದರು. ಕೊನೆಗೆ ರಿವೀಲ್​ ಮಾಡಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು.</p><img><p>ಕಳೆದ ಜೂನ್​ 4ರಂದು ಮದುವೆಯಾಗಿದ್ದ ನಟಿ, ಈಗ ಮದುವೆಯಾಗಿ ಏಳು ತಿಂಗಳು ಕಳೆದಿದೆ. ಮದುವೆಗೂ ಮುನ್ನ ಮದ್ವೆ ಯಾವಾಗ, ಮದ್ವೆ ಯಾವಾಗ ಎಂದು ನಟಿಯನ್ನು ಹೋಗಲ್ಲಿ, ಬಂದಲ್ಲಿ ಪ್ರಶ್ನಿಸಲಾಗುತ್ತಿತ್ತು. ಅದಾದ ಬಳಿಕ ಗುಡ್​ ನ್ಯೂಸ್​​ ಯಾವಾಗ ಎಂದು ಪ್ರಶ್ನೆ ಮಾಮೂಲಾಗಿದೆ. ಆದರೆ ಮದುವೆಯಾದಾಗಿನಿಂದಲೂ ನಟಿಗೆ ಹಲವಾರು ಮಂದಿ ಕೇಳುತ್ತಿದ್ದ ಪ್ರಶ್ನೆಯೊಂದಕ್ಕೆ ಮದುವೆಯಾಗಿ ಏಳು ತಿಂಗಳ ಬಳಿಕ ಇದೀಗ ನಟಿ ಕುತೂಹಲದ ವಿಡಿಯೋ ಮೂಲಕ ಉತ್ತರ ಕೊಟ್ಟಿದ್ದಾರೆ.</p><img><p>ನಿಮ್ಮ ಲವ್​ ಸ್ಟೋರಿ ಹೇಳಿ, ಮೊದಲ ಪರಿಚಯವಾದದ್ದು ಎಲ್ಲಿ ಎನ್ನುವ ಪ್ರಶ್ನೆಗಳನ್ನೆಲ್ಲಾ ಕೇಳಲಾಗ್ತಿತ್ತು. ಇದೀ ನಟಿ ವೈಷ್ಣವಿ ಗೌಡ, ಕಾರಿನಲ್ಲಿ ದೇವರು ಹೋಗ್ತಿರೋ ಒಂದು ಎಐ ಫೋಟೋ ಹಾಕುವ ಮೂಲಕ ತಮ್ಮ ಮದುವೆಯಾಗಿದ್ದು, ದೇವರ ಕೃಪೆಯಿಂದ ಎನ್ನುವುದಾಗಿ ಸೂಚ್ಯವಾಗಿ ಹೇಳಿದ್ದಾರೆ. ಇದು ದೈವಾನುಗ್ರಹ ಎನ್ನುವುದಾಗಿ ಅವರು ತಿಳಿಸಿದ್ದಾರೆ.</p><img><p>ಅನುಕೂಲ್‌ ಮಿಶ್ರಾ ಅವರು ಇಂಡಿಯನ್‌ ಆರ್ಮಿಯಲ್ಲಿ ಲೆಫ್ಟಿನೆಂಟ್‌ ಆಗಿ ಕೆಲಸ ಮಾಡುತ್ತಿದ್ದಾರೆ. ವೈಷ್ಣವಿ ಗೌಡ ನಟಿಯಾದರೆ, ಅನುಕೂಲ್‌ ಅವರು ಆರ್ಮಿಯಲ್ಲಿದ್ದಾರೆ. ಅನುಕೂಲ್‌ ಮಿಶ್ರಾ ಅವರು ಬೆಂಗಳೂರಿನಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ವೈಷ್ಣವಿ ಗೌಡ ಕೂಡ ಇಲ್ಲಿಯೇ ಇರಲಿದ್ದಾರೆ. ಅಂದಹಾಗೆ ಮದುವೆ ಬಳಿಕವೂ ವೈಷ್ಣವಿ ಗೌಡ ಅವರು ನಟಿಸಲಿದ್ದು, ಒಳ್ಳೆಯ ಪಾತ್ರದ ನಿರೀಕ್ಷೆಯಲ್ಲಿದ್ದಾರೆ.</p><img><p>ಇನ್ನು ವೈಷ್ಣವಿ ಗೌಡ ಕುರಿತು ಹೇಳುವುದಾದರೆ, ಕನ್ನಡದ ಪ್ರೇಕ್ಷಕರಿಗೆ ಸನ್ನಿಧಿಯಂತಲೇ ಇವರು ಪರಿಚಯವಿದ್ದರು. ಅಗ್ನಿಸಾಕ್ಷಿ ಸೀರಿಯಲ್​ನ ಸನ್ನಿಧಿ ಮೂಲಕ ಸಕತ್​ ಫೇಮಸ್​ ಆಗಿದ್ದ ನಟಿ ಈಗ ಸೀತಾರಾಮದ ಸೀತೆಯಾಗಿ ಮನೆ ಮಾತಾಗಿದ್ದಾರೆ. ವೈಷ್ಣವಿ ಕನ್ನಡ ಕಿರುತೆರೆಲೋಕದ ಜನಪ್ರಿಯ ನಟಿ. ಅಷ್ಟೇ ಅಲ್ಲದೇ, ಹಲವು ಉತ್ಪನ್ನಗಳ ರಾಯಭಾರಿಯೂ ಹೌದು.</p><img><p>ಜೀ ಕನ್ನಡದ `ದೇವಿ’ ಸೀರಿಯಲ್‌ನಿಂದ ಇವರ ಕಿರುತೆರೆ ಪಯಣ ಆರಂಭವಾಯಿತು.ನಂತರ `ಪುನರ್‌ವಿವಾಹ’ದಲ್ಲಿ ನಟಿಸಿ `ಅಗ್ನಿಸಾಕ್ಷಿ’ ಸೀರಿಯಲ್‌ನ ಸನ್ನಿಧಿಯಾಗಿ ಆಯ್ಕೆಗೊಂಡರು. ಈ ಪಾತ್ರದ ಮೂಲಕ ಅಪಾರ ಜನಮನ್ನಣೆ ಪಡೆದಿದ್ದಾರೆ. `ಗಿರಿಗಿಟ್ಲೆ’ ಚಿತ್ರದ ಮೂಲಕ ನಾಯಕಿಯಾಗಿದ್ದಾರೆ. `ಭರ್ಜರಿ ಕಾಮಿಡಿ’ ಎಂಬ ರಿಯಾಲಿಟಿ ಷೋ ನಿರೂಪಣೆ ಕೂಡ ಮಾಡಿದ್ದಾರೆ. `ಕುಣಿಯೋಣ ಬಾರ’ ಡ್ಯಾನ್ಸ್ ರಿಯಾಲಿಟಿ ಷೋ ಆಗೂ ಬಿಗ್​ಬಾಸ್​ ಸೀಸನ್​ 8ನಲ್ಲಿ ಭಾಗವಹಿಸಿದ್ದಾರೆ.</p><img><p>ಈ ಹಿಂದೆ ಅವರು ಬಾಲಿವುಡ್​ನಲ್ಲಿ ನಟಿಸುವ ಬಗ್ಗೆ ಅನಿಸಿಕೆ ಹಂಚಿಕೊಂಡಿದ್ದರು. ಕಿರುತೆರೆಯಲ್ಲಿ ಮಿಂಚುತ್ತಿರುವ ಹಲವು ನಟಿಯರು ಇದಾಗಲೇ ಬೆಳ್ಳಿ ಪರದೆಯ ಮೇಲೂ ಕಾಣಿಸಿಕೊಂಡಿದ್ದಾರೆ. ಆಯಾ ಭಾಷೆಗಳ ಚಿತ್ರಗಳ ಜೊತೆಗೆ ಪರ ಭಾಷೆಗಳಲ್ಲಿಯೂ ನಟಿಸುವ ಅವಕಾಶ ಕೆಲವರಿಗೆ ಸಿಕ್ಕಿದ್ದೂ ಇದೆ. ಆದರೆ ಹಲವು ನಟಿಯರ ಕನಸು ಬಾಲಿವುಡ್‌ಗೆ ಎಂಟ್ರಿ ಕೊಡಬೇಕು ಎನ್ನುವುದೇ ಆಗಿರುತ್ತದೆ. ಬಾಲಿವುಡ್‌ ಎಂಬ ಸಮುದ್ರದಲ್ಲಿ ಈಜುವ ಬಯಕೆ ಅವರದ್ದಾಗಿರುತ್ತದೆ. ಆದರೆ ಈ ಅದೃಷ್ಟ ಸಿಗುವುದು ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ.</p>



Source link

Leave a Reply

Your email address will not be published. Required fields are marked *