
<p>Vatal Nagaraj News: ಸಾಮಾಜಿಕ ಹೋರಾಟಗಾರ ವಾಟಾಳ್ ನಾಗರಾಜ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಾಮಾಜಿಕ ಹೋರಾಟಗಾರ ವಾಟಾಳ್ ನಾಗರಾಜ್ ಅವರ ಮೊಮ್ಮಗನ ಆರತಕ್ಷತೆ ಕಾರ್ಯಕ್ರಮ ನಡೆದಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. </p><p> </p><img><p>ವಾಟಾಳ್ ನಾಗರಾಜ್ ಅವರಿಗೆ ಇಬ್ಬರು ಮಕ್ಕಳು. ಒಂದು ಗಂಡು, ಒಂದು ಹೆಣ್ಣು. ಇವರ ಮಗಳ ಹೆಸರು ಅನುಪಮಾ. ಮಹದೇವ್ ಪ್ರಸಾದ್ ಅವರ ಮಗನ ಹೆಸರು.</p><img><p>ವಾಟಾಳ್ ನಾಗರಾಜ್ ಪುತ್ರಿ ಎಂದು ಹೇಳಿಕೊಳ್ಳಲು ಪುಣ್ಯ ಮಾಡಿದ್ದೇನೆ, ತಂದೆ ಜೀವನದಲ್ಲಿ ಒಂದು ಕಪ್ಪುಚುಕ್ಕೆ ಕೂಡ ಇಲ್ಲ ಎಂದು ಅನುಪಮಾ ಹೇಳಿದ್ದರು.</p><img><p>ಅನುಪಮಾ ಹಾಗೂ ಸಿದ್ದೇಶ್ವರ ಕುಮಾರ್ ಅವರ ಪುತ್ರ ಚಂದನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದ್ದೂರಿಯಾಗಿ ಹಳದಿ ಶಾಸ್ತ್ರ ಕೂಡ ನಡೆದಿದೆ. ಅರಮನೆ ಮೈದಾನದಲ್ಲಿ ಆರತಕ್ಷತೆ ನಡೆದಿದೆ.</p><img><p>ಚಂದನ್ ಅವರು ಪ್ರೇರಣ ರೈ ಎನ್ನುವವರನ್ನು ಮದುವೆಯಾಗಿದ್ದಾರೆ. ಅರಮನೆ ಮೈದಾನದಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆದಿದೆ.</p><img><p>ಅಶ್ವಿನಿ ಪುನೀತ್ ರಾಜ್ಕುಮಾರ್, ಸಿಎಂ ಸಿದ್ದರಾಮಯ್ಯ, ಬಸವರಾಜ ಬೊಮ್ಮಾಯಿ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ.</p>
Source link
ವಾಟಾಳ್ ನಾಗರಾಜ್ ಮೊಮ್ಮಗನ ಮದುವೆ; ಕುದುರಿ ಏರಿ, ಅದ್ದೂರಿಯಾಗಿ ಬಂದ ವಧು-ವರ! PHOTOS