
ಖ್ಯಾತ ಗಾಯಕಿ ಆಶಾ ಭೋಸ್ಲೆ (ಆಶಾ ಭೋಂಸ್ಲೆ) ಅವರನ್ನು ಕಳೆದುಕೊಂಡು ಭಾರತದ ಸಂಗೀತ ಲೋಕ ಬಡವಾಗಿದೆ. ಅವರ ಅಗಲಿಕೆಯಿಂದ ತುಂಬಲಾರದ ನಷ್ಟವಾಗಿದೆ. ಸಾವಿರಾರು ಗೀತೆಗಳ ಮೂಲಕ ಆಶಾ ಭೋಸ್ಲೆ ಅವರು ಜನಮನ ಗೆದ್ದಿದ್ದರು. ಕನ್ನಡದಲ್ಲಿ ಅವರು ಧ್ವನಿ ನೀಡಿದ್ದು 4 ಹಾಡುಗಳಿಗೆ ಮಾತ್ರ. ಆ ಕೊನೆಯ ಹಾಡು, ಅಂದರೆ ನಾಲ್ಕನೇ ಹಾಡು ಬಿಡುಗಡೆ ಆಗಿಲ್ಲ. ಆ ಗೀತೆಗೆ ವೀರ್ ಸಮರ್ಥ್ ಅವರು ಸಂಗೀತ ನಿರ್ದೇಶನ ಮಾಡಿದ್ದರು. ಕಡಿಮೆ ಸಂಭಾವನೆ ಕೊಟ್ಟರೂ ಕೂಡ ಆಶಾ ಭೋಸ್ಲೆ ಅವರು ಆ ಗೀತೆಯನ್ನು ಹಾಡಲು ಒಪ್ಪಿಕೊಂಡರು. ಆ ಘಟನೆಯನ್ನು ಈಗ ವೀರ್ ಸಮರ್ಥ್ (ವೀರ್ ಸಮರ್ಥ್) ಅವರು ಮೆಲುಕು ಹಾಕಿದ್ದಾರೆ. ಸಂಗೀತದ ಬಗ್ಗೆ ಆಶಾ ಭೋಸ್ಲೆ ಅವರಿಗೆ ಇದ್ದ ಪ್ರೀತಿ ಎಂಥದ್ದು ಎಂದು ಅವರು ವಿವರಿಸಿದ್ದಾರೆ. ‘ಟಿವಿ9’ ಜೊತೆ ವೀರ್ ಸಮರ್ಥ್ ಮಾತನಾಡಿದ ವಿಡಿಯೋ ಇಲ್ಲಿದೆ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.