
<p>Nandagokula: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ತುಂಬು ಕುಟುಂಬದ ಸುಂದರವಾದ ಸೀರಿಯಲ್ ‘ನಂದಗೋಕುಲ’ದ ಬಗ್ಗೆ ಇದೀಗ ವೀಕ್ಷಕರಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಇಲ್ಲಿವರೆಗೂ ಬೆಸ್ಟ್ ಸೀರಿಯಲ್ ಎನ್ನುತ್ತಿದ್ದವರು ಇದೀಗ ಕಿಡಿ ಕಾರುತ್ತಿದ್ದಾರೆ. ಕಾರಣ ಏನು ಗೊತ್ತಾ?</p><p> </p><img><p>ನಂದಕುಮಾರ್ ಮತ್ತು ಗಿರಿಜಾರ ಮುದ್ದಿನ ಸಂಸಾರದ ಕಥೆಯನ್ನು ಹೊತ್ತು ಸಾಗಿದ ನಂದಗೋಕುಲ ಧಾರಾವಾಹಿಯನ್ನು ವೀಕ್ಷಕರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. ನಂದನ ಮೂವರು ಗಂಡು ಮಕ್ಕಳು ಮತ್ತು ಅವರ ಪ್ರೀತಿಯ ಕಥೆ ಎಲ್ಲವೂ ತುಂಬಾನೆ ಸುಂದರವಾಗಿ ಮೂಡಿ ಬರುತ್ತಿತ್ತು.</p><img><p>ನಂದಕುಮಾರನ ಇಬ್ಬರು ಕಿರಿಯ ಮಕ್ಕಳು ಅಪ್ಪನ ಇಚ್ಚೆಗೆ ವಿರುದ್ಧವಾಗಿ ಲವ್ ಮ್ಯಾರೇಜ್ ಮಾಡಿಕೊಂಡು ಬಂದಿದ್ದರು. ಆದರೆ ಇಬ್ಬರೂ ಕೂಡ ಮುದ್ದಿನ ಸೊಸೆಯರು, ತಮ್ಮ ಮನೆಗೆ, ಮನೆಯವರಿಗೆ ಯಾವುದೇ ರೀತಿಯಲ್ಲಿ ಕೆಟ್ಟದಾಗಲು ಬಿಡದಂತಹ ಸೊಸೆಯರು. ಆದರೆ ಈಗ ಎಲ್ಲಾ ಬದಲಾಗಿದೆ.</p><img><p>ಇದೀಗ ನಂದಕುಮಾರ್ ತಾನೇ ಹುಡುಕಿ ಮಾಡಿದಂತಹ ಹಿರಿಯ ಮಗ ಮಾಧವನ ಮದುವೆ ಮಾಡಿಸಿದ್ದು, ಇದೀಗ ಅದೇ ಸೊಸೆ ಮನೆಗೆ ವಿಲನ್ ಆದಂತಿದೆ. ಯಾಕಂದ್ರೆ ಆಕೆ ತನ್ನ ಹಿಡಿತದಲ್ಲೇ ಮನೆಯ ಎಲ್ಲಾ ಸದಸ್ಯರು ಇರಬೇಕು ಎನ್ನುತ್ತಾ, ಅತ್ತೆ ಮಾವನನ್ನುಇಂಪ್ರೆಸ್ ಮಾಡಲು ಹೊರಟಿದ್ದಾಳೆ ಪ್ರಿಯಾ.</p><img><p>ಇಲ್ಲಿವರೆಗೆ ಮನೆಯ ಒಳಗೆ ಯಾವುದೇ ವಿಲನ್ ಇಲ್ಲದೇ, ಸುಂದರವಾಗಿ ಸಾಗುತ್ತಿದ್ದ ಕತೆಯಲ್ಲಿ ಇದೀಗ ಮನೆಗೆ ಬಂದಿರುವ ಸೊಸೆಯೇ ವಿಲನ್ ಆಗಿರುವುದನ್ನು ನೋಡಿ, ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಇಷ್ಟೊಳ್ಳೆ ಕಥೆಯನ್ನು ಹಾಳು ಮಾಡುತ್ತಿರುವುದು ಯಾಕೆ ಎಂದು ಪ್ರಶ್ನಿಸುತ್ತಿದ್ದಾರೆ.</p><img><p>ನಂದಗೋಕುಲ ಸಹ ಇದೀಗ ಇತರ ಸೀರಿಯಲ್ ಗಳಂತೆ ವಿಲನ್ ಗಳನ್ನು ಒಳಗೊಂಡಿದ್ದು, ಹೊಸತನ ಏನೂ ಈಲ್ಲ. ತುಂಬಾ ಚೆನ್ನಾಗಿದ್ದ ಧಾರಾವಾಹಿಯನ್ನು ಈ ರೀತಿ ಕೆಡಿಸಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಹಾಗಿದ್ರೆ ಈ ಟ್ವಿಸ್ಟ್ ಕೊಟ್ಟು ತಪ್ಪು ಮಾಡಿದ್ರಾ ನಿರ್ದೇಶಕರು.</p><img><ul> <li>ಇನ್ನ ಮುಂದೆ ಇದು ನಂದಗೋಕುಲ ಸೀರಿಯಲ್ ಆಗಲ್ಲ . ಎಲ್ಲ ಸೀರಿಯಲ್ ತರ ಇದು ಡಬ್ಬನೆ</li> <li>ಚನ್ನಾಗಿ ಬರ್ತಿದ್ದ ಸೀರಿಯಲ್ ನು ಹೇಗೆ ಕೆಡಿಸಬೇಕು ಅಂತ ಡೈರೆಕ್ಟರ್ ನೋಡ್ತಾನೆ</li> <li>ಮೀನಾ ಇವಳಿಗೆ ಸರಿಯಾಗಿ ತಿರುಗೇಟು ಕೊಡ್ಬೇಕು . ತೀರ ಓವರ್ ಆಯ್ತು ಈ ಪ್ರಿಯದು</li> <li>ಇವರಿಂದಾಗಿ ಮನೆ ಎಲ್ಲಿ ಒಡೆದ್ದು ಹೋಗುತೋ ಥು ಪ್ರಿಯ ದು ಓವರ್ ಅಯ್ತು</li></ul>
Source link
Nandagokula Serial ಬಗ್ಗೆ ವೀಕ್ಷಕರ ಅಸಮಾಧಾನ… ಟ್ವಿಸ್ಟ್ ಕೊಟ್ಟು ತಪ್ಪು ಮಾಡಿದ್ರ ಡೈರೆಕ್ಟರ್!