ಕೆಲಸದಾಳು ಜೊತೆಗೇ ಯಜಮಾನಿಯ ಕುಚ್​ ಕುಚ್! ಅಮ್ಮನ ಕಳ್ಳಾಟ ಕಣ್ಣಾರೆ ಕಂಡ ಮಗ, 6 ತಿಂಗಳ ಕೊಲೆ ಕೇಸ್ ಈಗ ಬಯಲು!​​ | Vijayapura Mahadevappa Murder Case A Real Life Drishyam Story Shocked Gow

ಕೆಲಸದಾಳು ಜೊತೆಗೇ ಯಜಮಾನಿಯ ಕುಚ್​ ಕುಚ್! ಅಮ್ಮನ ಕಳ್ಳಾಟ ಕಣ್ಣಾರೆ ಕಂಡ ಮಗ, 6 ತಿಂಗಳ ಕೊಲೆ ಕೇಸ್ ಈಗ ಬಯಲು!​​ | Vijayapura Mahadevappa Murder Case A Real Life Drishyam Story Shocked Gow



ಕೆಲಸದಾಳು ಜೊತೆಗೇ ಯಜಮಾನಿಯ ಕುಚ್​ ಕುಚ್! ಅಮ್ಮನ ಕಳ್ಳಾಟ ಕಣ್ಣಾರೆ ಕಂಡ ಮಗ, 6 ತಿಂಗಳ ಕೊಲೆ ಕೇಸ್ ಈಗ ಬಯಲು!​​ | Vijayapura Mahadevappa Murder Case A Real Life Drishyam Story Shocked Gow

ಮನೆಯಲ್ಲಿ ತನ್ನದೆ ನಡೆಯಬೇಕು ಅನ್ನೋ ಹಾಗಿದ್ದ ಮಲ್ಲಮ್ಮಗೌಡ್ತಿಗೆ ಗೆಳೆಯನೊಬ್ಬನಿದ್ದ. ಆತನೇ ತನ್ನದೆ ಜಮೀನಿನಲ್ಲಿ ಕೆಲಸ ಮಾಡೋ ಆಳು ಮಹಾದೇವಪ್ಪ. ಅದ್ಯಾವ ಕಾರಣಕ್ಕೆ ಈ ವಯಸ್ಸಿನಲ್ಲಿ ಇಬ್ಬರ ನಡುವೆ ಆಕರ್ಷಣೆ ಬೆಳೆಯಿತೋ ಗೊತ್ತಿಲ್ಲ. ಆದ್ರೆ ಖಾಯಂ ಆಗಿ ಮಹಾದೇವಪ್ಪ ಕೆಲಸ ಅಂತಾ ಮಾಡ್ತಿದ್ದದ್ದು ಇದೆ ಮಲ್ಲಮ್ಮಗೌಡ್ತಿ ಗದ್ದೆಯಲ್ಲೆ. ಹೀಗಿರೋವಾಗ ಮಲ್ಲಮ್ಮಗೌಡ್ತಿ ಅದೊಂದು ದಿನ ಜಮೀನಿನ ಕೆಲಸದಾಳು ಮಹಾದೇವಪ್ಪನ ಜೊತೆಗೆ ಏಕಾಂತದಲ್ಲಿ ಇರೋವಾಗ ಮಗ ಅಪ್ಪುಗೌಡನ ಕೈಗೆ ಸಿಕ್ಕಿ ಹಾಕಿಕೊಂಡಿದ್ದಳು. ನೋಡಬಾರದನ್ನ ನೋಡಿದ ಮಗ ಅಪ್ಪುಗೌಡ, ಆಗಿದ್ದಾಯ್ತು, ಇದು ಇಲ್ಲಿಗೆ ನಿಲ್ಲಬೇಕು ಅಂತಾ ತಾಕೀತು ಮಾಡಿದ್ದ. ಮತ್ತೊಮ್ಮೆ ಇಬ್ಬರು ಕೂಡಿದನ್ನ ಕಂಡ್ರೆ ಏನ್‌ ಮಾಡ್ತಿನೋ ನನಗೆ ಗೊತ್ತಿಲ್ಲ ಅಂತಾ ತಾಕೀತು ಮಾಡಿದ್ದ.

ಆದ್ರೆ ತನ್ನ ತಾಯಿ ಮಲ್ಲಮ್ಮನ ಈ ಸ್ವಭಾವ ಇಲ್ಲಿಗೆ ನಿಲ್ಲೋದಲ್ಲ ಅಂತಾ ಮೊದಲೇ ಮಗ ಅಪ್ಪುಗೌಡನಿಗೆ ಗೊತ್ತಿತ್ತು ಅಂತಾ ಕಾಣಿಸುತ್ತೆ. ಮತ್ತೆ ಮೇ 31 ರಂದು ಅಪ್ಪುಗೌಡ ಜಮೀನಿಗೆ ಸಪ್ರೈಸ್‌ ವಿಜಿಟ್‌ ಕೊಟ್ಟಿದ್ದ. ಅಪ್ಪುಗೌಡನ ಅಚಾನಕ್‌ ಭೇಟಿ ವೇಳೆ ಮಲ್ಲಮ್ಮಗೌಡ್ತಿ ಮತ್ತದೆ ಸ್ಥಿತಿಯಲ್ಲಿ ಮಹಾದೇವಪ್ಪನ ಜೊತೆಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಳು. ಇದನ್ನ ಸಹಿಸದ ಅಪ್ಪುಗೌಡ ಅಲ್ಲೆ ಇದ್ದ ಕಟ್ಟಿಗೆಯಿಂದ ಮಹಾದೇವಪ್ಪನ ತಲೆಗೆ ಹೊಡೆದು ಬಿಟ್ಟಿದ್ದ. ಸಿಟ್ಟಿನಲ್ಲಿ ಅಪ್ಪುಗೌಡ ಕೊಟ್ಟ ಏಟು ಸ್ಥಳದಲ್ಲೆ ಮಹಾದೇವಪ್ಪನ್ನ ಉಸಿರು ನಿಲ್ಲಿಸಿತ್ತು.

ಅದ್ಯಾವಾಗ ತನ್ನದೇ ಕೈಯಿಂದ ತಮ್ಮದೇ ಜಮೀನು ಆಳಿನ ಹೆಣ ಬಿದ್ದಿದೆ ಅಂತಾ ಸ್ಮೃತಿಪಟಲಕ್ಕೆ ಬಂತೋ ಅಪ್ಪುಗೌಡ ತನ್ನ ಜೀವಮಾನದ ವಿದ್ಯೆ, ಬುದ್ಧಿ, ಚಾನಾಕ್ಷತನವನ್ನ ಆಚೆ ಹಾಕೋಕೆ ರೆಡಿಯಾಗಿ ಬಿಟ್ಟಿದ್ದ. ಆತ ಮೊದಲಿಗೆ ಮಾಡಿದ್ದೆ ಮಹಾದೇವಪ್ಪನ ಹೆಣವನ್ನ ತಮ್ಮ ಜಮೀನಿನಿಂದ ಹೊರ ಹಾಕೋದು. ಹಾಗೇ ಈ ಮಾಹಿತಿಯನ್ನ ತನ್ನ ತಂದೆ ಸಿದ್ದನಗೌಡನಿಗೂ ಹೇಳಿ ಹೆಣವನ್ನ ಪಕ್ಕದ ಜಮೀನು ಅಂದ್ರೆ ಇದೆ ಮಹಾದೇವಪ್ಪನ ಮಕ್ಕಳು ಮಾಡಿಕೊಂಡಿದ್ದ ಜಮೀನಿನ ಮುಳ್ಳುಕಂಟಿಯಲ್ಲಿ ತಂದು ಬಿಸಾಕಿ ಬಿಟ್ಟಿದ್ದ.



Source link

Leave a Reply

Your email address will not be published. Required fields are marked *