ವಿಜಯಪುರ, ನವೆಂಬರ್ 21: ಯಾವುದೇ ಅಪರಾಧ ಕೃತ್ಯ ಮಾಡಿದ ಆರೋಪಿ ಎಷ್ಟು ಚಾಲಾಕಿ ಆದರೂ ಪೊಲೀಸ್ ತನಿಖೆಯಲ್ಲಿ ಪಾರಾಗೋಕೆ ಸಾಧ್ಯವೇ ಇಲ್ಲ. ಇದಕ್ಕೊಂದು ನಿದರ್ಶನದಂತೆ ಜಟಿಲವಾದ ಕೊಲೆ ಪ್ರಕರಣ ವಿಜಯಪುರ ಜಿಲ್ಲಾ ಭೇದಿಸಿದ್ದಾರೆ. ಕಾಣೆಯಾಗಿರುವ ವ್ಯಕ್ತಿ ಹೆಣವಾಗಿ ಕಾಣಿಸಿಕೊಂಡ ಪ್ರಕರಣವನ್ನು ಬೆನ್ನುಬಿದ್ದ ಖಾಕಿ ಇದೊಂದು ಕೊಲೆ ಎಂದರಿತು ಹಂತಕರ ಹೆಡೆಮುರಿ ಕಟ್ಟುವಲ್ಲಿ ಸಕ್ಸಸ್ ಆಗಿದೆ. ಘಟನೆ ನಡೆದುಸುಮಾರು 6 ತಿಂಗಳ ಬಳಿಕ ಕೊಲೆಗಾರರನ್ನು ಜೈಲಿಗಟ್ಟಿದೆ.
ಸಿಂದಗಿ ತಾಲೂಕಿನ ಬನ್ನಿಹಟ್ಟಿ ಪಿಎ ಗ್ರಾಮದ ನಿವಾಸಿ ಮಹಾದೇವಪ್ಪ ಹರಿಜನ (55) ಇದೇ ಮೇ 31ರಂದು ಕೂಲಿ ಕೆಲಸಕ್ಕೆ ಹೋದವ ನಾಪತ್ತೆಯಾಗಿದ್ದರು. ಅದೇ ಗ್ರಾಮದ ಸಿದ್ದನಗೌಡ ಗಂಗರೆಡ್ಡಿ ಎಂಬವರ ಜಮೀನಿಗೆ ಕೆಲಸಕ್ಕೆ ಹೋದವರು ವಾಪಸ್ ಬರದ ಕಾರಣ ಮನೆಯವರು ಅವರಿಗಾಗಿ ಹುಡುಕಾಡಿದ್ದರು. ಬಳಿಕ ಅದೇ ಗಂಗರೆಡ್ಡಿ ಅವರ ಜಮೀನಿನ ಅನತಿ ದೂರದಲ್ಲಿ ಮಾದೇವಪ್ಪ ಹರಿಜನನ ಅವರ ಶವ ಕೊಳೆತ ಸ್ಥಿತಿಯಲ್ಲಿ ಜೂನ್ 3 ರಂದು ಇತ್ತು. ಮರಣೋತ್ತರ ಪರೀಕ್ಷೆಯಲ್ಲಿ ಮಾದೇವಪ್ಪ ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಹಾಗೂ ರಿಬ್ಸ್ಗೆ ಏಟಾದ ಪರಿಣಾಮ ಅವರು ಪ್ರಕಟಿಸಿದ್ದಾರೆ ಎಂಬುದು ಗೊತ್ತಾಗಿತ್ತು. ಶವ ಕಂಡುಬಂದ ಸ್ಥಳದಲ್ಲಿ ಶೋಧ ನಡೆಸಿದ ಸಾಕ್ಷಿ ಪೊಲೀಸರಿಗೆ ಘಟನೆಯ ಬಗ್ಗೆ ಯಾವುದೇ ಸಿಕ್ಕಿರಲಿಲ್ಲ.
ಇದನ್ನೂ ಓದಿ: ಲಿವಿನ್ ರಿಲೇಷನ್ ಶಿಪ್ ನಲ್ಲಿದ್ದ ಮಹಿಳೆಯಿಂದಲೇ ಪ್ರಿಯಕರನ ಹತ್ಯೆ: ಕಾರಣವೇನು?
ಸಾಕ್ಷ್ಯಾಧಾರಗಳ ಕೊರತೆಯಿಂದ ಇನ್ನೇನು ಕೇಸ್ ಕ್ಲೋಸ್ ಆಗಿಯೇ ಹೋಯ್ತು ಎನ್ನುವ ವೇಳೆ ಪೊಲೀಸರಿಗೆ ಸಿಕ್ಕ ಕೆಲ ಮಾಹಿತ ಪ್ರಕರಣದ ದಿಕ್ಕನ್ನೇ ಬದಲಾಯಿಸಲಾಗಿದೆ. ಜಮೀನು ಮಾಲಕ ಸಿದ್ದನಗೌಡ ಗಂಗರೆಡ್ಡಿ ಪತ್ನಿ ಮಲ್ಲಮ್ಮ ಜೊತೆಗೆ ಮಾದೇವಪ್ಪ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಎಂಬ ಸುಳಿವು ಸಿಕ್ಕಿತ್ತು. ಆ ಗಂಗಾರೆಡ್ಡಿ ಮತ್ತು ಆತನ ಪುತ್ರ ಅಪ್ಪಾಸಾಹೇಬಗೌಡ ಹಾಗೂ ಮಲ್ಲಮ್ಮರ ಮೊಬೈಲ್ ಲೊಕೇಶನ್ ಪರೀಕ್ಷಿಸಿದರೂ ಸಾಕ್ಷಿ ಸಿಕ್ಕಿರಲಿಲ್ಲ. ಜಮೀನು ಮಾಲಕನೇ ಯಾಕೆ ಮಾದೇವಪ್ಪ ಕೊಲೆ ಮಾಡಬಾರದು ಎಂಬ ಸಂಶಯ ಪೊಲೀಸರಿಗೆ ಬಂದರೂ ಅವರ ವಿರುದ್ಧ ಸಾಕ್ಷಿಗಳು ಇಲ್ಲದ ಕಾರಣ ಅವರನ್ನು ಬಂಧಿಸಲು ಸಾಧ್ಯವಾಗಿರಲಿಲ್ಲ.
ಪ್ರಕರಣ ಸಂಬಂಧ ಸದ್ಯ ನ್ಯಾಯಾಲಯದ ಅನುಮತಿ ಪಡೆದು ಆರೋಪಿ ಸಿದ್ದನಗೌಡ ಗಂಗರೆಡ್ಡಿ ಮತ್ತು ಆತನ ಪುತ್ರ ಅಪ್ಪಾಸಾಹೇಬಗೌಡ ಹಾಗೂ ಮಲ್ಲಮ್ಮರ ಬ್ರೇನ್ ಮ್ಯಾಪಿಂಗ್ ಮಾಡಿದ್ದಾರೆ. ಈ ವೇಳೆ ಮಾದೇವಪ್ಪ ಕೊಲೆ ರಹಸ್ಯ ಬಟಾಬಯಲಾಗಿದೆ. ಕೊಲೆ ಮಾಡಿರೋದು ಸಿದ್ದನಗೌಡ ಗಂಗರೆಡ್ಡಿ ಮತ್ತು ಆತನ ಪುತ್ರ ಅಪ್ಪಾಸಾಹೇಬಗೌಡ ಎಂಬುದು ಗೊತ್ತಾಗಿದೆ. ಮೇ 31ರಂದು ಬೆಂಗಳೂರಿನಿಂದ ಸಿಂದಗಿಗೆ ಬಂದಿದ್ದ ಅಪ್ಪಾಸಾಹೇಬಗೌಡ ಮೊಬೈಲ್ ಬಿಟ್ಟು ತನ್ನ ಜಮೀನಿಗೆ ಬಂದಿದ್ದ. ಆಗ ಜಮೀನಿನ ಶೆಡ್ ನಲ್ಲಿ ತನ್ನ ತಾಯಿ ಮಲ್ಲಮ್ಮ ಹಾಗೂ ಕೂಲಿಯಾಳು ಮಾದೇವಪ್ಪ ಏಕಾಂತದಲ್ಲಿರೋದು ಕಣ್ಣಿಗೆ ಬಿದ್ದಿದೆ. ಈ ವೇಳೆ ಸಿಟ್ಟಿಗೆದ್ದ ಆತ ಶೆಡ್ನ ಪೈಪ್ ಹಾಕಲಾಗಿದ್ದ ಕಟ್ಟಿಗೆ ತೆಗೆದು ಮಾದೇವಪ್ಪ ತಲೆಗೆ ಹೊಡೆದಿದ್ದಾನೆ. ಇದೇ ವೇಳೆ ಜಮೀನಿನ ಆಚೆಯಿದ್ದ ಸಿದ್ದನಗೌಡ ಸಹ ಸ್ಥಳಕ್ಕೆ ಬಂದಿದ್ದು, ಆತನೂ ಹಲ್ಲೆ ನಡೆಸಿದ್ದಾನೆ. ಈ ವೇಳೆ ಮಾದೇವಪ್ಪ ಪ್ರಾಣ ಬಿಟ್ಟಿದ್ದು, ಶವವನ್ನು ಆರೋಪಿಗಳು ಪಕ್ಕದ ಜಮೀನಿನತ್ತ ಎಸೆದು ಹೋಗಿದ್ದರು ಎಂಬುದು ತನಿಖೆ ವೇಳೆ ಬಯಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.