ನವರಾತ್ರಿ ಹಬ್ಬದ ಸಮಯದಲ್ಲಿ ಈ ಕೆಲಸಗಳನ್ನು ಮಾಡ್ಲೇಬೇಡಿ… ದುರ್ಗಾ ದೇವಿ ಮುನಿಸಿಕೊಳ್ಳುತ್ತಾಳೆ!

ನವರಾತ್ರಿ ಹಬ್ಬದ ಸಮಯದಲ್ಲಿ ಈ ಕೆಲಸಗಳನ್ನು ಮಾಡ್ಲೇಬೇಡಿ… ದುರ್ಗಾ ದೇವಿ ಮುನಿಸಿಕೊಳ್ಳುತ್ತಾಳೆ!



ನವರಾತ್ರಿ ಹಬ್ಬದ ಸಮಯದಲ್ಲಿ ಈ ಕೆಲಸಗಳನ್ನು ಮಾಡ್ಲೇಬೇಡಿ… ದುರ್ಗಾ ದೇವಿ ಮುನಿಸಿಕೊಳ್ಳುತ್ತಾಳೆ!
<p>ನವರಾತ್ರಿ ಹಬ್ಬದ ಸಮಯದಲ್ಲಿ, ದುರ್ಗಾ ದೇವಿಯನ್ನು ವಿಧಿವಿಧಾನಗಳೊಂದಿಗೆ ಪೂಜಿಸಲಾಗುತ್ತದೆ. ಆದ್ದರಿಂದ, ಈ ಪೂಜೆಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ನವರಾತ್ರಿ ಸಮಯದಲ್ಲಿ ಯಾವ ಕೆಲಸಗಳನ್ನ ಮಾಡಬಹುದು? ಯಾವ ಕೆಲಸ ಮಾಡಬಾರದು ನೋಡೋಣ.</p><img><p>ಹಿಂದೂ ಧರ್ಮದಲ್ಲಿ, ಶರದಿಯಾ ನವರಾತ್ರಿ ಹಬ್ಬವನ್ನು (navaratri festival) ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ ಮತ್ತು ಈ ಅವಧಿಯಲ್ಲಿ, ಭಕ್ತರು ಒಂಬತ್ತು ದಿನಗಳ ಕಾಲ ದುರ್ಗಾ ದೇವಿಯ ಒಂಬತ್ತು ವಿಭಿನ್ನ ರೂಪಗಳನ್ನು ಪೂಜಿಸುತ್ತಾರೆ. ನವರಾತ್ರಿ ಸೆಪ್ಟೆಂಬರ್ 22, 2025 ರಂದು ಪ್ರಾರಂಭವಾಗಿದೆ ಮತ್ತು ಅಕ್ಟೋಬರ್ 2, 2025 ರಂದು ದಸರಾದಲ್ಲಿ ಮುಕ್ತಾಯಗೊಳ್ಳುತ್ತದೆ.</p><img><p>ನವರಾತ್ರಿಯ ಸಮಯದಲ್ಲಿ ದುರ್ಗಾ ದೇವಿಯು (Goddess Durga) &nbsp;ಪ್ರಸನ್ನಳಾದರೆ, ಅವಳು ತನ್ನ ಭಕ್ತರ ಎಲ್ಲಾ ಆಸೆಗಳನ್ನು ಪೂರೈಸುತ್ತಾಳೆ ಎನ್ನುವ ನಂಬಿಕೆ ಇದೆ. ನೀವು ಸಹ ದುರ್ಗಾ ದೇವಿಯ ಆಶೀರ್ವಾದವನ್ನು ಪಡೆಯಲು ಬಯಸಿದರೆ, ನವರಾತ್ರಿಯ ಸಮಯದಲ್ಲಿ ನೀವು ಕೆಲವು ವಿಷಯಗಳಿಗೆ ವಿಶೇಷ ಗಮನ ನೀಡಬೇಕು. ನವರಾತ್ರಿಯ ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳನ್ನು ತಿಳಿಯೋಣ.</p><img><p>ನೀವು ನವರಾತ್ರಿಯ ಸಮಯದಲ್ಲಿ ಉಪವಾಸ ಮಾಡುತ್ತಿದ್ದರೆ, ಬೆಳಿಗ್ಗೆ ಮತ್ತು ಸಂಜೆ ಎರಡೂ ಸಮಯಗಳಲ್ಲಿ ದುರ್ಗಾ ದೇವಿಯನ್ನು ಪೂರ್ಣ ವಿಧಿವಿಧಾನಗಳೊಂದಿಗೆ ಪೂಜಿಸಲು ಮರೆಯಬೇಡಿ. ಪೂಜೆಯ ನಂತರ, ದುರ್ಗಾ ದೇವಿಯ ಆರತಿಯನ್ನು ಸಹ ಮಾಡಿ.</p><img><p>ಪೂಜೆಯ ಸಮಯದಲ್ಲಿ, ದುರ್ಗಾ ಚಾಲೀಸಾ ಮತ್ತು ದುರ್ಗಾ ಸಪ್ತಶತಿಯನ್ನು ಸಹ ಪಠಿಸೋದು ಉತ್ತಮ. ಆದರೆ ಇವೆರಡನ್ನು ನೀವು ಗುರುಗಳಿಂದ ದೀಕ್ಷೆ ಪಡೆದಿದ್ದರೆ ಉತ್ತಮ.. ಇದು ದುರ್ಗಾ ದೇವಿಯನ್ನು ಮೆಚ್ಚಿಸುತ್ತದೆ ಮತ್ತು ಅವಳು ತನ್ನ ಭಕ್ತರ ಆಸೆಗಳನ್ನು ಪೂರೈಸುತ್ತಾಳೆ.</p><img><p>ಶರದಿಯಾ ನವರಾತ್ರಿಯ ಸಂಪೂರ್ಣ ಒಂಬತ್ತು ದಿನಗಳವರೆಗೆ ಉಪವಾಸ ಮಾಡುವವರು ಹಾಸಿಗೆಯ ಬದಲಿಗೆ ನೆಲದ ಮೇಲೆ ಮಲಗಲು ಮರೆಯಬಾರದು. ಎಷ್ಟು ಸಾಧ್ಯವೋ ಅಷ್ಟು ಸರಳವಾಗಿರೋದು ಉತ್ತಮ.</p><img><p>ನವರಾತ್ರಿಯ ಸಮಯದಲ್ಲಿ ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಬೇಕು. ನೀವು ಉಪವಾಸ ಮಾಡಿದರೆ, ಶುದ್ಧ ಆಲೋಚನೆಗಳು ಮತ್ತು ಒಳ್ಳೆಯ ಕಾರ್ಯಗಳನ್ನು ಮಾತ್ರ ಮಾಡಬೇಕು. ದಾನ ಧರ್ಮಗಳನ್ನು ಮಾಡಲು ಮರೆಯಬೇಡಿ. ಇತರರಿಗೆ ಸಹಾಯ ಆಗುವಂತಹ ಕೆಲಸಗಳನ್ನು ಮಾಡಿ.</p><img><p>ಶರದಿಯಾ ನವರಾತ್ರಿಯಲ್ಲಿ ಮಾಂಸಾಹಾರ ಮತ್ತು ತಾಮಸಿಕ ಆಹಾರಗಳನ್ನು ಸೇವಿಸಬಾರದು ಎಂಬುದನ್ನು ನೆನಪಿನಲ್ಲಿಡಿ. ಮೀನು, ಕೋಳಿ, ಮೊದಲಾದ ಮಾಂಸಾಹಾರ ಬೆಳ್ಳುಳ್ಳಿ ಮತ್ತು ಈರುಳ್ಳಿ ತಾಮಸಿಕ ಆಹಾರಗಳಲ್ಲಿ ಸೇರಿವೆ. ಇವುಗಳನ್ನು ಸಾಧ್ಯವಾದಷ್ಟು ಅವಾಯ್ಡ್ ಮಾಡೋದು ಉತ್ತಮ.</p><img><p>ಶರದಿಯಾ ನವರಾತ್ರಿಯಲ್ಲಿ ಮದ್ಯ, ಪಾನ್ ಮತ್ತು ಗುಟ್ಕಾ ಸೇವನೆಯನ್ನು ಸಹ ನಿಷೇಧಿಸಲಾಗಿದೆ. ಅಷ್ಟೇ ಅಲ್ಲ ನವರಾತ್ರಿಯ ಸಮಯದಲ್ಲಿ ಒಬ್ಬರು ಕ್ಷೌರ ಮಾಡಬಾರದು (hair cutting), ಮೀಸೆ ತೆಗೆಯಬಾರದು ಅಥವಾ ಉಗುರುಗಳನ್ನು ಕತ್ತರಿಸಬಾರದು. ಇದು ಸಹ ನೆಗೆಟಿವ್ ಎನರ್ಜಿಯಾಗಿದೆ.</p><img><p>ಒಂದು ವೇಳೆ ನೀವು ನವರಾತ್ರಿ ಉಪವಾಸವನ್ನು ಆಚರಿಸಿದರೆ, ಈ ಸಮಯದಲ್ಲಿ ನೀವು ಮಿಸ್ ಮಾಡದೇ ಬ್ರಹ್ಮಚರ್ಯದ ನಿಯಮಗಳನ್ನು ಪಾಲಿಸಬೇಕು. ಹಾಗೆ ಮಾಡಲು ವಿಫಲವಾದರೆ ಉಪವಾಸವು ಮುರಿದುಹೋಗಬಹುದು. ಅದಕ್ಕೆ ಸರಿಯಾದ ಫಲ ಸಿಗೋದಿಲ್ಲ.</p><img><p>ನವರಾತ್ರಿಯ ಸಮಯದಲ್ಲಿ ಒಬ್ಬರು ತಪ್ಪು ಅಥವಾ ಕೆಟ್ಟ ಆಲೋಚನೆಗಳು, ಯೋಚನೆಗಳನ್ನು ಹೊಂದಿರಬಾರದು. ಈ ಅವಧಿಯಲ್ಲಿ ಮಹಿಳೆಯನ್ನು ಅವಮಾನಿಸುವುದು ಸಹ ಪಾಪ ಎಂಬುದನ್ನು ನೆನಪಿನಲ್ಲಿಡಿ. ಮಹಿಳೆಯರಿಗೆ ಗೌರವ ನೀಡೋದನ್ನು ಮರಿಬೇಡಿ</p>



Source link

Leave a Reply

Your email address will not be published. Required fields are marked *