‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ (ಬಿಬಿಕೆ 12) ಈ ವಾರ ಎಲ್ಲರನ್ನೂ ನಾಮಿನೇಟ್ ಮಾಡೋದಾಗಿ ಸುದೀಪ್ ಅವರು ಕಳೆದ ವಾರ ಘೋಷಣೆ ಮಾಡಿದ್ದನ್ನು ನೀವು ನೋಡಬಹುದಿತ್ತು. ಎಲ್ಲರೂ ನಾಮಿನೇಟ್ ಆದರೆ ಅದರ ರೀತಿ ನಡೆಸೋದು ಕಷ್ಟ ಆಗಬಹುದು. ವೋಟ್ ಹಂಚಿ ಹೋಗುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದಲೇ ಬಿಗ್ ಬಾಸ್ ಒಂದು ಅವಕಾಶ. ಈ ವೇಳೆ ಕೆಲವರು ಸೇವ್ ಆಗಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಈ ವಾರ ಪತ್ರದ ಚಟುವಟಿಕೆ ನಡೆಸಲಾಗಿದೆ. ಅಂದರೆ, ಮನೆಯವರಿಂದ ಪತ್ರ ಬರುತ್ತದೆ. ಈ ಪತ್ರ ವಿವಿಧ ಚಟುವಟಿಕೆ ಮೂಲಕ ಒಬ್ಬರಿಗೆ ಸಿಗುವಂತೆ ಮಾಡುತ್ತದೆ. ಈ ವೇಳೆ ಪತ್ರ ಸಿಕ್ಕವರು ನಾಮಿನೇಷನ್ ನಿಂದ ಬಚಾವ್ ಆಗುತ್ತಾರೆ. ಪತ್ರ ಸಿಗದೆ ಇದ್ದವರು ನಾಮಿನೇಟ್ ಆಗುತ್ತಾರೆ.
ಬಿಗ್ ಬಾಸ್ ನಲ್ಲಿ ಮೊದಲು ಅಭಿಷೇಕ್ ಮತ್ತು ಧನುಷ್ ಮನೆಯ ಪತ್ರವನ್ನು ತರಿಸಲಾಯಿತು. ಧನುಷ್ ಕ್ಯಾಪ್ಟನ್ ಆದರೂ ನಾಮಿನೇಟ್ ಆಗಿದ್ದರು. ಅವರು ನಾಮನಿರ್ದೇಶನದಿಂದ ಬಚಾವ್ ಆಗಲು ಪ್ರಯತ್ನಿಸಲಿಲ್ಲ. ಬದಲಿಗೆ ಗೆಳೆಯ ಅಭಿಷೇಕ್ಗೆ ಪತ್ರವನ್ನು ತೋರಿಸಲಾಗಿದೆ. ಇದರಿಂದ ಅಭಿ ಅವರು ನಾಮಿನೇಷನ್ ನಿಂದ ಬಚಾವ್ ಆದರು. ಇತ್ತ ಧನುಷ್ ಅವರು ನಾಮಿನೇಟ್ ಆದರು. ಈಗ ಎಲ್ಲಾ ಪ್ರಕ್ರಿಯೆ ಮುಗಿದಿದೆ.
ಇದರ ಪ್ರಕಾರ ಅಭಿ, ರಿಷಾ, ಮಾಳು, ರಘು, ಕಾವ್ಯ ಹಾಗೂ ಜಾನ್ವಿ ಅವರು ಪತ್ರ ಪಡೆದು ನಾಮನಿರ್ದೇಶನದಿಂದ ಬಚಾವ್ ಆಗಿದ್ದಾರೆ. ಅತ್ತ, ಧನು, ಸೂರಜ್, ಸ್ಪಂದನಾ, ಧ್ರುವ್, ಚಂದ್ರಪ್ರಭ, ಕಾಕ್ರೋಚ್ ಸುಧಿ, ರಕ್ಷಿತಾ, ಗಿಲ್ಲಿ ಹಾಗೂ ಅಶ್ವಿನಿ ಗೌಡ ಪತ್ರ ಸಿಗದೆ ನಾಮಿನೇಟ್ ಆಗಿದ್ದಾರೆ. ಇವರ ಹೊರಗೆ ಯಾರ ಮನೆಯಿಂದ ಹೊರ ಹೋಗುತ್ತಾರೆ ಎಂಬ ಕುತೂಹಲ ಮೂಡಿದೆ. ಚಂದ್ರಪ್ರಭ ಹಾಗೂ ಸ್ಪಂದನಾ ಅವರಿಗೆ ಇನ್ನಷ್ಟು ಎಫರ್ಟ್ ಹಾಕಬೇಕಿದೆ. ಇಲ್ಲವಾದಲ್ಲಿ ಅವರ ಮನೆಯಿಂದ ಹೊರಗೋಗಬೇಕಾದ ಪರಿಸ್ಥಿತಿ ಬರಬಹುದು.
ಇದನ್ನೂ ಓದಿ: ಬಿಗ್ ಬಾಸ್ ನಲ್ಲಿರೋ ಕಾವ್ಯಾ ಶೈವ ಅವರ ಫೇವರಿಟ್ ಹೀರೋ ಯಾರು ಗೊತ್ತಾ?
ಈ ವಾರದ ವೀಕೆಂಡ್ನಲ್ಲಿ ಸಾಕಷ್ಟು ವಿಚಾರಗಳು ಚರ್ಚೆ ಆಗುವ ಸಾಧ್ಯತೆ ಇದೆ. ಗಿಲ್ಲಿ ಮೇಲೆ ಹಲ್ಲೆ ಮಾಡಿದ ರಿಷಾನ ಮನೆಯಿಂದ ಕಲಿಯೋ ಸಾಧ್ಯತೆ ಇದೆ ಎಂದು ಹೇಳಲಾಗದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.