Headlines

ಸುನೇತ್ರಾ ಪವಾರ್ ದಿಢೀರ್ ಪ್ರಮಾಣವಚನ ಹಿಂದಿದೆ 4 ಪ್ರಮುಖ ಕಾರಣ! ಏನವು ಗೊತ್ತಾ?

ಸುನೇತ್ರಾ ಪವಾರ್ ದಿಢೀರ್ ಪ್ರಮಾಣವಚನ ಹಿಂದಿದೆ 4 ಪ್ರಮುಖ ಕಾರಣ! ಏನವು ಗೊತ್ತಾ?



ಸುನೇತ್ರಾ ಪವಾರ್ ದಿಢೀರ್ ಪ್ರಮಾಣವಚನ ಹಿಂದಿದೆ 4 ಪ್ರಮುಖ ಕಾರಣ! ಏನವು ಗೊತ್ತಾ?
<p>ಮುಂಬೈ: ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪವಾರ್ ತೀರಿ ಹೋದ ಮೂರೇ ದಿನಕ್ಕೆ ಸುನೇತ್ರಾ ಪವಾರ್ ಅವರು ಉಪಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ್ದೇಕೆ? ಈ ಬಗ್ಗೆ ಎನ್‌ಸಿಪಿ (ಎಸ್ಪಿ) ಅಧ್ಯಕ್ಷ ಶರದ್ ಪವಾರ್ ಅವರನ್ನೂ ಸಂಪರ್ಕಿಸಿಲ್ಲ ಏಕೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಇಲ್ಲಿವೆ 4 ಕಾರಣ</p><p>&nbsp;</p><img><p>ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ ಅವರ ಅನಿರೀಕ್ಷಿತ ಅಗಲಿಕೆಯಿಂದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನ ತೆರವಾಗಿರುವ ಹಿನ್ನೆಲೆಯಲ್ಲಿ ಅವರ ಪತ್ನಿ ಸುನೇತ್ರಾ ಪವಾರ್‌ (62) ಅವರು ಡಿಸಿಎಂ ಆಗಿ ಶನಿವಾರ ಸಂಜೆ ಪ್ರಮಾಣವಚನ ಸ್ವೀಕರಿಸಿದರು.</p><img><p>ಸುನೇತ್ರಾ ಡಿಸಿಎಂ ಆಗುವ ಈ ನಿರ್ಧಾರವನ್ನು ಎನ್ಸಿಪಿ (ಅಜಿತ್ ಬಣ) ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ್ (ಕಾರ್ಯನಿರ್ವಾಹಕ ಅಧ್ಯಕ್ಷರು) ಮತ್ತು ಪಕ್ಷದ ರಾಜ್ಯಾಧ್ಯಕ್ಷ ಸುನಿಲ್ ತತ್ಕರೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.</p><img><p>ಕಾರಣ-1</p><p>ವಿಲೀನವಾದರೆ ಶರದ್ ಪವಾರ್‌ ಬಣದ ಪ್ರಭಾವ ಹೆಚ್ಚಾಗಬಹುದು. ತಮ್ಮ ಪ್ರಭಾವ ಹೊರಟು ಹೋಗಬಹುದು ಎಂಬ ಆತಂಕ ಅಜಿತ್‌ ಬಣದ ನಾಯಕರಲ್ಲಿತ್ತು. ಹೀಗಾಗಿ ಸುನೇತ್ರಾ ಅವರನ್ನು ಡಿಸಿಎಂ ಮಾಡಲು ಅಜಿತ್‌ ಆಪ್ತರು ಮನವೊಲಿಸಿದರು.</p><img><p>ಶರದ್ ಪವಾರ್ ಇತ್ತೀಚೆಗೆ ಯಾವುದೇ ಸಂದರ್ಭದಲ್ಲೂ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದಿದ್ದರು. ಹೀಗಾಗಿ ಏಕೀಕೃತ ಎನ್‌ಸಿಪಿ, ಸರ್ಕಾರದಿಂದ ಹೊರಬಂದರೆ ತಾವು ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ ಎಂದು ಅಜಿತ್‌ ಆಪ್ತರು ಆತಂಕಗೊಂಡಿದ್ದರು</p><img><p>ಗಮನಾರ್ಹವಾಗಿ, ಮಹಾಯುತಿಗೆ ಸೇರುವ ಮೊದಲು, ಅಜಿತ್‌ ಬಣದ ನಾಯಕರ ಮೇಲೆ ಅನೇಕರು ಸಿಬಿಐ, ಇಡಿ ಮತ್ತು ಭ್ರಷ್ಟಾಚಾರ ನಿಗ್ರಹ ದಳದಂತಹ ಸಂಸ್ಥೆಗಳ ಕೇಸು ಇದ್ದವು. ಸರ್ಕಾರ ಸೇರಿದ ನಂತರ ಇವುಗಳಿಗೆ ಬ್ರೇಕ್‌ ಬಿದ್ದಿದೆ. ಏಕೀಕೃತ ಎನ್‌ಸಿಪಿ ಮಹಾಯುತಿಯಿಂದ ಹೊರಬಂದರೆ, ತಮ್ಮ ಕಾನೂನು ತೊಂದರೆಗಳು ಮತ್ತೆ ಉದ್ಭವಿಸಬಹುದು ಎಂಬ ಭಯ ಅಜಿತ್‌ ಆಪ್ತರಲ್ಲಿದೆ.</p><img><p>ಸುನೇತ್ರಾ ಡಿಸಿಎಂ ಆದರೆ ಸರ್ಕಾರದ ಮೇಲೆ ಅಜಿತ್‌ ಹೊಂದಿದ್ದ ಹಿಡಿತವೇ ಈಗಲೂ ಮುಂದುವರಿಯುತ್ತದೆ. ತಮ್ಮದೇ ಆದ ಪ್ರಾಬಲ್ಯವನ್ನು ಕಾಯ್ದುಕೊಳ್ಳುವುದು ಸುಲಭವಾಗುತ್ತದೆ ಎಂದು ಅಜಿತ್‌ ಬಣದ ನಾಯಕರ ನಂಬಿಕೆ.</p>



Source link

Leave a Reply

Your email address will not be published. Required fields are marked *