
<p>ಭ್ರಷ್ಟಾಚಾರದ ಆರೋಪದ ಮೇಲೆ ಕುತಂತ್ರದಿಂದ ಜೈಲುಪಾಲಾಗಿರುವ ಕರ್ಣನನ್ನು ರಕ್ಷಿಸಲು ವಿವಿಧ ಸೀರಿಯಲ್ಗಳ ನಾಯಕಿಯರು ಒಂದಾಗಿದ್ದಾರೆ. ವಿಲನ್ಗಳಿಂದ ಅಪಹರಣಕ್ಕೊಳಗಾಗಿದ್ದ ಪ್ರಮುಖ ಸಾಕ್ಷಿಗಳನ್ನು ರಕ್ಷಿಸಿರುವ ಈ ನಾಯಕಿಯರು, ನ್ಯಾಯಾಲಯಕ್ಕೆ ಅವರನ್ನು ಹಾಜರುಪಡಿಸಲು ಹರಸಾಹಸ ಪಡುತ್ತಿದ್ದಾರೆ.</p><img><p>ಕರ್ಣ ಸೀರಿಯಲ್ನಲ್ಲಿ (Karna Serial) ಸದ್ಯ ನಯನತಾರಾ, ರಮೇಶ್ ಕುತಂತ್ರದಿಂದ ಜೊತೆಗೆ, ಸೀರಿಯಲ್ ಆರೋಗ್ಯ ಸಚಿವನ ಭ್ರಷ್ಟಾಚಾರದಿಂದ ಕರ್ಣ ಜೈಲುಪಾಲಾಗಿದ್ದಾನೆ. ಆತನ ವಿರುದ್ಧವೇ ಎಲ್ಲಾ ಸಾಕ್ಷ್ಯಾಧಾರಗಳನ್ನು ಕಲೆ ಹಾಕಲಾಗಿದೆ.</p><img><p>ಇದೀಗ ಕರ್ಣನನ್ನು ಕಾಪಾಡಲು ವಿವಿಧ ಸೀರಿಯಲ್ ನಾಯಕಿಯರು ಬಂದಿದ್ದಾರೆ. ಬ್ರಹ್ಮಗಂಟು ದೀಪಾ, ಅಮೃತಧಾರೆ ಮಲ್ಲಿ, ಶ್ರಾವಣಿ ಸುಬ್ರಹ್ಯಣ್ಯ ಶ್ರಾವಣಿ, ಅಣ್ಣಯ್ಯ ದೇವಿ ಎಲ್ಲರೂ ಬಂದಿದ್ದಾರೆ. ಇದಾಗಲೇ ಈ ಎಲ್ಲಾ ನಟಿಯರು ರೌಡಿಗಳನ್ನು ಸದೆ ಬಡಿದಿದ್ದಾರೆ.</p><img><p>ಆಸ್ಪತ್ರೆಯಲ್ಲಿ ಕೆಲವರನ್ನು ಸತ್ತವರಂತೆ ನಟಿಸಲು ವಿಲನ್ಗಳು ಹೇಳಿದ್ದರು. ಅವರಿಗೆ ದುಡ್ಡನ್ನು ನೀಡಲಾಗಿತ್ತು. ಆದರೆ ಇದೀಗ ಅವರಿಗೆ ತಾವು ಮಾಡಿದ್ದು ಅನ್ಯಾಯ ಎಂದು ತಿಳಿದಿದೆ. ಕರ್ಣನಂಥ ದೇವರನ್ನು ಜೈಲಿಗೆ ಕಳುಹಿಸಿ ಮಹಾಪಾಪ ಮಾಡಿರುವುದಾಗಿ ತಿಳಿದಿದೆ.</p><img><p>ಅವರು ಸಾಕ್ಷಿ ನುಡಿಯುತ್ತಾರೆ ಎಂದು ಅವರನ್ನು ಕಿಡ್ನ್ಯಾಪ್ ಮಾಡಲಾಗಿತ್ತು. ಈ ನಟಿಯರೇ ಹೋಗಿ ಅವರನ್ನು ಬಿಡಿಸಿಕೊಂಡು ಬಂದಿದ್ದಾರೆ.</p><img><p>ಅವರೆಲ್ಲಾ ಸಾಕ್ಷಿ ಹೇಳಲು ತಯಾರಿದ್ದಾರೆ. ಕೋರ್ಟ್ ತೀರ್ಪು ನೀಡುವ ಮೊದಲೇ ಇವರೆಲ್ಲರೂ ಕೋರ್ಟ್ಗೆ ಹೋಗುವಂತೆ ಮಾಡಲು ನಟಿಯರು ಸಾಹಸ ಪಡುತ್ತಿದ್ದಾರೆ.</p><img><p>ಆದರೆ, ಇದು ಸಾಧ್ಯವಾಗತ್ತಾ? ಒಂದೇ ವೇಳೆ ಇವರು ಸಾಕ್ಷಿ ನುಡಿದರೆ ವಿಲನ್ಗಳು ಜೈಲುಪಾಲಾಗ್ತಾರೆ. ಹೀಗೆ ಆದರೆ ಸೀರಿಯಲ್ ಅಲ್ಲಿಗೆ ಸುಮಾರು ಮುಗಿದಂತೆ. ಆದ್ದರಿಂದ ಸುಲಭದಲ್ಲಿ ಇಷ್ಟು ಬೇಗೆ ವಿಲನ್ಗಳು ಸಿಕ್ಕಿಹಾಕಿಕೊಳ್ತಾರಾ ಎನ್ನುವುದು ಕೂಡ ಪ್ರಶ್ನೆ ಕಾಡ್ತಿದೆ.</p>
Source link
Karna Serial: ನಟಿಯರಿಗೆ ಸಿಕ್ತು ಬಲವಾದ ಸಾಕ್ಷಿ- ಶಿಕ್ಷೆ ಆಗೋದ್ರೊಳಗೇ ಕರ್ಣನ ಕಾಪಾಡ್ತಾರಾ ಈ ನಾರಿಯರು?