
ನಟ ಯಶ್ ಅವರ ಗೆಳೆಯ ಅಶೋಕ್ ಅವರು ಇತ್ತೀಚೆಗೆ ಕಿರುತೆರೆಯಲ್ಲಿ ಬ್ಯೂಸಿ ಆಗಿದ್ದಾರೆ. ‘ಆದಿ ಲಕ್ಷ್ಮೀ ಪುರಾಣ’ ಧಾರಾವಾಹಿಯಲ್ಲಿ ಅವರು ನಟಿಸುತ್ತಿದ್ದಾರೆ. ಡಿಸೆಂಬರ್ 8 ರಿಂದ ಧಾರಾವಾಹಿ ಪ್ರಸಾರ ಆರಂಭವಾಗಿದೆ. ಅವರು ಧಾರಾವಾಹಿಯಲ್ಲಿ ಬ್ಯೂಸಿ ಆಗಲು ಕಾರಣ ಹೇಳಿದ್ದಾರೆ. ‘ಮಿಸ್ಟರ್ ಆಯಂಡ್ ಮಿಸಸ್ ರಾಮಾಚಾರಿ ರಿಲೀಸ್ ಆಗಿ 10 ವರ್ಷ ಆಯ್ತು. ಯಶ್ ಗೆಳೆಯನ ಪಾತ್ರ ಮಾಡಿದ್ದೇನೆ. ಸಿನಿಮಾ ಅವಧಿ ಮಿತಿ. ಹೀಗಾಗಿ ಪಾತ್ರವನ್ನು ಹೆಚ್ಚು ಅನ್ವೇಷಿಸೋಕೆ ಆಗಲ್ಲ. ಸೀತಾ ರಾಮದಲ್ಲಿ ನಾನು ರಾಮ್ನ ಗೆಳೆಯನ ಪಾತ್ರ ಮಾಡಿದೆ. ಗೆಳೆಯ ಇದ್ರೆ ಹೀಗೆ ಇರಬೇಕು ಎಂದು ಹೇಳುತ್ತಾರೆ. ಅಲ್ಲಿ ಅನ್ವೇಷಿಸಲು ಹೆಚ್ಚು ಅವಕಾಶ ಇರುತ್ತದೆ’ ಅಶೋಕ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.