ಹಾಸನದಲ್ಲಿನ ನಿವೇಶನದ ಗಲಾಟೆಗೆ ಸಂಬಂಧಪಟ್ಟಂತೆ ಯಶ್ ತಾಯಿ (ಯಶ್ ತಾಯಿ) ಪುಷ್ಪಾ ಅರುಣ್ ಕುಮಾರ್ ಅವರು ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದಾರೆ. ಎಸ್ ಪಿ ಕಚೇರಿ ಹೊರಗೆ ಅವರು ಕಾದು ಕುಳಿತಿದ್ದಾರೆ. ಸೈಟ್ ಗಲಾಟೆಯಲ್ಲಿ ಸರಿಯಾಗಿ ತನಿಖೆ ಆಗಿಲ್ಲ ಎಂದು ದೂರು ನೀಡಲು ಅವರು ಬಂದಿದ್ದಾರೆ. ಕ್ರಯಪತ್ರಗಳ ದಾಖಲೆ ಸಮೇತ ಅವರು ಎಸ್ ಪಿ ಕಚೇರಿಗೆ ಆಗಮಿಸಿದ್ದಾರೆ. ‘ಸೈಟ್ ಗಲಾಟೆಗೆ ತಕ್ಷಣ ದೂರು ನೀಡಿದ್ದೆ. ಹಾಸನ ಬಡಾವಣೆ ಸರಿಯಾಗಿ ತನಿಖೆ ಮಾಡಿಲ್ಲ. ರೌಡಿಸಂ ಮತ್ತು ಭೂ ಮಾಫಿಯಾದವರಿಗೆ ಸಹಕಾರ ನೀಡುತ್ತಿದ್ದಾರೆ. ಅತಿಕ್ರಮ ಪ್ರವೇಶ ಮಾಡಿ ಕಾಂಪೌಂಡ್ ಧ್ವಂಸ ಮಾಡಿದ್ದಾರೆ. ಈ ಬಗ್ಗೆ ಪೊಲೀಸರು ಕ್ರಮ ತೆಗೆದುಕೊಂಡಿಲ್ಲ’ ಎಂದು ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ (ಪುಷ್ಪಾ ಅರುಣ್ ಕುಮಾರ್) ಅವರು ದೂರು ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.