Headlines

ಕೋಲಾರ: ಬೈಕ್​​ಗಾಗಿ ಸೆಕ್ಯೂರಿಟಿ ಗಾರ್ಡ್​ನ ಬರ್ಬರವಾಗಿ ಕೊಂದ 19 ವರ್ಷದ ಯುವಕ!

ಕೋಲಾರ: ಬೈಕ್​​ಗಾಗಿ ಸೆಕ್ಯೂರಿಟಿ ಗಾರ್ಡ್​ನ ಬರ್ಬರವಾಗಿ ಕೊಂದ 19 ವರ್ಷದ ಯುವಕ!


ಆರೋಪಿ ಯುವಕ ಮತ್ತು ಮೃತ ಸೆಕ್ಯೂರಿಟಿ ಗಾರ್ಡ್.

ಕೋಲಾರ, ಜನವರಿ 08: ಬೈಕ್ಮೇಲಿನ ಹುಚ್ಚು ಪ್ರೀತಿಗೆ 19 ವರ್ಷದ ಯುವಕನೋರ್ವ ಸೆಕ್ಯೂರಿಟಿ ಗಾರ್ಡ್ನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕೋಲಾರ ತಾಲ್ಲೂಕಿನ ಉದ್ದಪ್ಪನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮುನಿರಾಜು (45) ಕೊಲೆಯಾದ ವ್ಯಕ್ತಿ, ಆತನ ಸ್ನೇಹಿತ ಗಂಗರಾಜುವೇ ಆರೋಪಿ ಎಂಬುದು ಗೊತ್ತಾಗಿದೆ. ನಾಪತ್ತೆಯಾಗಿದ್ದ ಮುನಿರಾಜು ಶವ ಕೆರೆಯೊಂದರಲ್ಲಿ ಇದ್ದಿದ್ದು, ಪ್ರಕರಣದ ತನಿಖೆಗಿಳಿದ ಪೊಲೀಸರೇ ಕೊಲೆಯ ಕಾರಣ ಕಂಡು ಪೊಲೀಸರೇ ದಂಗಾಗಿದ್ದಾರೆ.

ಉದ್ದಪ್ಪನಹಳ್ಳಿ ಗ್ರಾಮದ ನಿವಾಸಿ ಮುನಿರಾಜು ಗ್ರಾಮದ ಬಳಿ ಇರುವ ಲಾಜೆಸ್ಟಿಕ್ ಅನ್ನೋ ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದಾರೆ. ಈ ನಡುವೆ ಹೊಸಕೋಟೆ ತಾಲೂಕಿನ ಮೇಡಿಮಲ್ಲಸಂದ್ರ ಗ್ರಾಮದ ಗಂಗಾರಾಜು ಎಂಬ ಹುಡುಗನ ಪರಿಚಯ ಈತನಿಗಾಗಿತ್ತು. ಇಬ್ಬರ ನಡುವೆ ಸಲುಗೆ ಬೆಳೆದು ಆಗಾಗ ಭೇಟಿ ಕೂಡ ಮಾಡುತ್ತಿದ್ದರು. ಹೀಗಿರುವಾಗ ಡಿಸೆಂಬರ್ 31 ರಂದು ಮನೆಯಲ್ಲಿದ್ದ ಮುನಿರಾಜುವನ್ನು ಗಂಗರಾಜು ಕರೆದುಕೊಂಡು ಹೋಗಿದ್ದ. ಆ ನಂತರ ಮುನಿರಾಜು ನಾಪತ್ತೆ, ಮೊಬೈಲ್ ಕೂಡ ಸ್ವಿಚ್ ಆಫ್ ಆಗುತ್ತಿದೆ. ಹೀಗಾಗಿ ಜನವರಿ 2 ರಂದು ವೇಮಗಲ್ ಪೊಲೀಸ್ ಠಾಣೆಯಲ್ಲಿ ಕುಟುಂಬಸ್ಥರು ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಇದನ್ನೂ ಓದಿ: ಹೆತ್ತ ಮಗನನ್ನೇ ಕೊಂದ ತಂದೆ; ಕೊಲೆ ರಹಸ್ಯ ಭೇದಿಸಿದ್ದು ಮೃತನ ಸ್ನೇಹಿತರು!

ಈದಾಗಿ ಎರಡು ದಿನಗಳ ಬಳಿಕ ಅಂದರೆ ಜ. 4ರಂದು ನರಸಾಪುರ ಕೆರೆಯಲ್ಲಿ ಮುನಿರಾಜು ಶವ ಸೇರಿದೆ. ಮೃತ ದೇಹದ ಮೇಲೆ ಗಾಯದ ಗುರುತುಗಳು, ಕಾಲಿಗೆ ವೈಯರ್ ಕಟ್ಟಿದ್ದ ಹಿನ್ನೆಲೆ ಅನುಮಾನಗೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ತಾಂತ್ರಿಕವಾಗಿ ಸಾಕ್ಷಿಗಳನ್ನು ಕಲೆ ಹಾಕಿದಾಗ ಕೊಲೆಯಾದ ಮುನಿರಾಜುವಿನ ಬೈಕ್ ಮತ್ತು ಮೊಬೈಲ್ ಗಂಗರಾಜು ಬಳಸುತ್ತಿರೋದು ಗೊತ್ತಾಗಿದೆ. ಹೀಗಾಗಿ ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.

ಆರೋಪಿ ಗಂಗರಾಜುಗೆ ಬೈಕ್ ಅಂದರೆ ಹುಚ್ಚು. ಆದರೆ ಬೈಕ್ ಕೊಡಿಸಿಲ್ಲ ಎಂದು ಆತ ಮನೆಯನ್ನೇ ಬಿಟ್ಟು ಬಂದಿದ್ದ. ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ. ಆದರೂ ಬೈಕ್ ತೆಗೆದುಕೊಳ್ಳಬೇಕೆಂಬ ಅವನ ಆಸೆ ಇರಲಿಲ್ಲ. ಹೀಗಿರುವಾಗಲೇ ತನಗೆ ಪರಿಚಯವಿದ್ದ ಸೆಕ್ಯೂರಿಟಿ ಗಾರ್ಡ್ ಮುನಿರಾಜು ಹೊಸದಾಗಿ ಹೀರೋ ಹೋಂಡಾ ಸ್ಪ್ಲೆಂಡರ್ ಬೈಕ್ ಖರೀದಿಸಿದ್ದ. ಈ ವಿಚಾರ ಗಂಗರಾಜು ಹೊಟ್ಟೆ ಉರಿಸಿತ್ತು. ಹೇಗಾದರೂ ಮಾಡಿ ಆ ಬೈಕ್ ತಾನು ಪಡೆದುಕೊಳ್ಳಬೇಕು ಎಂದು ನಿರ್ಧರಿಸಿ ಡಿಸೆಂಬರ್ 31 ರಂದು ಕುಡಿಯಲು ಹೋಗೋಣ ಬಾ ಎಂದು ಮುನಿರಾಜು ಅವರನ್ನು ಕರೆದಿದ್ದಾರೆ. 3 ದಿನಗಳ ಹಿಂದೆ ಕಾಣಿಸಿಕೊಂಡಿದ್ದ ತಾಯಿ ಹಾಲುತುಪ್ಪ ಕಾರ್ಯ ಮಾಡಿ ಮನೆಗೆ ಬಂದಿದ್ದ ಮುನಿರಾಜು ಕೂಡ ಗಂಗರಾಜು ಜೊತೆ ತೆರಳಿದ್ದ. ಇಬ್ಬರೂ ಬಾರೊಂದರಲ್ಲಿ ಚೆನ್ನಾಗಿ ಮದ್ಯವನ್ನೂ ಸೇವಿಸಿದ್ದರು.

ಬಾರ್‌ನಿಂದ ನಮಗೆ ಹಿಂದುರುಗುವ ವೇಳೆ ಮತ್ತೆ ಕುಡಿಯೋಣ ಎಂದು ಹೇಳಿ ನರಸಾಪುರ ಕೆರೆಯ ಬಳಿ ಮುನಿರಾಜುವನ್ನು ಗಂಗರಾಜು ಕರೆದೊಯ್ದಿದ್ದ. ಅಲ್ಲಿ ಆತನಿಗೆ ಚೆನ್ನಾಗಿ ಕುಡಿಸಿ ಬಳಿಕ ಕಲ್ಲಿನಿಂದ ದಾಳಿ ನಡೆಸಿದ್ದಲ್ಲದೆ, ತಲೆಗೆ ಕಾಲಿನಿಂದ ಒದ್ದಿದ್ದ. ಜೊತೆಗೆ ಆತನ ಬೈಕ್ ನಲ್ಲಿದ್ದ ವೈರ್ ಕಾಲು ಕಟ್ಟಿ ಮುನಿರಾಜುವನ್ನು ಕೆರೆಗೆ ತಳ್ಳಿದ್ದ. ಬೈಕ್ ಮತ್ತು ಮೊಬೈಲ್ ಬಳಿಕ ಹೋಗಿದ್ದ ಎಂಬ ಸತ್ಯ ತನಿಖೆ ವೇಳೆ ಬಯಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 7:27 pm, ಗುರುವಾರ, 8 ಜನವರಿ 26



Source link

Leave a Reply

Your email address will not be published. Required fields are marked *