1 ಕಿ.ಮೀ.ಗೆ 425 ರೂಪಾಯಿ: ಬೆಂಗಳೂರಿನಲ್ಲಿ ಆಟೋ ದರ ನೋಡಿ ದಂಗಾದ ಪ್ರಯಾಣಿಕ! | Bangalore Auto Fare Shock 425 Rupees For 1 Km Ride During Rain Mrq

1 ಕಿ.ಮೀ.ಗೆ 425 ರೂಪಾಯಿ: ಬೆಂಗಳೂರಿನಲ್ಲಿ ಆಟೋ ದರ ನೋಡಿ ದಂಗಾದ ಪ್ರಯಾಣಿಕ! | Bangalore Auto Fare Shock 425 Rupees For 1 Km Ride During Rain Mrq


ಮಳೆ ಬಂದ್ರೆ ಆಟೋ ದರ ಏರಿಕೆ! 1 ಕಿ.ಮೀ.ಗೆ ₹425 ಅಂತ ನೋಡಿ ಶಾಕ್ ಆದ ವ್ಯಕ್ತಿಯೊಬ್ಬರು ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬೆಂಗಳೂರು: ಕೇವಲ ಒಂದು ಕಿಲೋಮೀಟರ್ ದೂರಕ್ಕೆ ಊಬರ್ ಆ್ಯಪ್‌ನಲ್ಲಿ (Uber App) ಆಟೋಗೆ 425 ರೂಪಾಯಿ ತೋರಿಸಿದೆ ಎಂದು ವ್ಯಕ್ತಿಯೊಬ್ಬರು ದೂರಿದ್ದಾರೆ. ಮಳೆ ಬಂದ್ರೆ ಬೆಂಗಳೂರಿನಲ್ಲಿ ಆಟೋ ದರ (Bengaluru Auto Price) ಭಾರಿ ಏರಿಕೆಯಾಗುತ್ತೆ ಅಂತ ಹೇಳಿ ರೆಡ್ಡಿಟ್‌ನಲ್ಲಿ ಹಂಚಿಕೊಂಡ ಪೋಸ್ಟ್ ವೈರಲ್ ಆಗಿದೆ. ಆಟೋಗೆ ₹425 ತೋರಿಸಿದಾಗ ಕಾರಿಗೆ ₹364 ತೋರಿಸಿದೆ ಅಂತ ಸ್ಕ್ರೀನ್‌ಶಾಟ್‌ಗಳ ಸಮೇತ ಹಂಚಿಕೊಂಡಿದ್ದಾರೆ.

“ನಿನ್ನೆ ರಾತ್ರಿ ನನ್ನ ಫ್ರೆಂಡ್ ಊರಿಗೆ ಹೋಗೋಕೆ ಆಟೋ ಬುಕ್ ಮಾಡ್ಬೇಕು ಅಂತ ನೋಡಿದ. ದರ ನೋಡಿ ಶಾಕ್ ಆದ. ಕೂಡಲೇ ಒಂದು ಛತ್ರಿ ತಗೊಂಡು ನಡ್ಕೊಂಡು ಹೋದ” ಅಂತ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಈ ಪೋಸ್ಟ್‌ಗೆ ಸಾಕಷ್ಟು ಜನ ಕಮೆಂಟ್ ಮಾಡಿದ್ದಾರೆ. ಬೆಂಗಳೂರಿನ ಆಟೋ, ಟ್ಯಾಕ್ಸಿ ದರಗಳು ಅಭಿವೃದ್ಧಿ ಹೊಂದಿದ ದೇಶಗಳಿಗೆ ಸಮನಾಗಿವೆ ಅಂತ ಕೆಲವರು ಹೇಳಿದ್ದಾರೆ. 

ಇದು ಆಟೋ ಖರೀದಿ  ಸಮಯ

ಜರ್ಮನಿಯಲ್ಲಿ ಬೆನ್ಜ್‌ನಲ್ಲಿ ಹೋದ್ರೆ ಇದೇ ದರ ಅಂತ ಒಬ್ಬರು ಕಮೆಂಟ್ ಮಾಡಿದ್ದಾರೆ. ಅಮೆರಿಕದ ಓಲಾ ದರಕ್ಕೆ ಸಮನಾಗಿದೆ ಅಂತ ಇನ್ನೊಬ್ಬರು ಹೇಳಿದ್ದಾರೆ. ಆಟೋನೇ ಕೊಂಡುಕೊಳ್ಳೋ ಟೈಮ್ ಬಂದಿದೆ ಅಂತ ಮತ್ತೊಬ್ಬರು ಹೇಳಿದ್ದಾರೆ. ಇಂದು ಆಟೋದಲ್ಲಿ ಓಡಾಡೋದು ವಿಮಾನದಲ್ಲಿ ಪ್ರಯಾಣದಲ್ಲಿ ಮಾಡಿದಂತಾಗಿದೆ ಎಂದು ಕಮೆಂಟ್ ಮಾಡಿದ್ದಾರೆ. ಈ ದರಗಳನ್ನು ಗಮನಿಸಿದ್ರೆ 9 ಟು 5 ಡೆಸ್ಕ್ ಜಾಬ್ ಮಾಡೋದು ಬಿಟ್ಟು ಬೆಂಗಳೂರಿನಲ್ಲಿ ಆಟೋ ಚಾಲನೆ ಮಾಡೋದು ಲಾಭದಾಯಕ ಎಂದು ಸೂಚಿಸಿದ್ದಾರೆ.

ಆಟೋ  ಬಿಟ್ಟು,  ಸೈಕಲ್ ಓಡಿಸಿ: ಇದು ಜೇಬಿಗೂ, ಆರೋಗ್ಯಕ್ಕೂ ಒಳ್ಳೆಯದು  

ರಸ್ತೆಗಳು ಮತ್ತು ಮೂಲಸೌಕರ್ಯಗಳು ಸರಿಯಿಲ್ಲ, ಆದ್ರೂ ದರ ಮಾತ್ರ ಕಡಿಮೆ ಆಗಿಲ್ಲ ಅಂತ ಕೆಲವರು ಕೋಪದಿಂದ ಹೇಳಿದ್ದಾರೆ. ಕಡಿಮೆ ದೂರಕ್ಕೆ ಆಟೋ, ಟ್ಯಾಕ್ಸಿ ಬುಕ್ ಮಾಡದೆ ನಡೆದುಕೊಂಡು ಹೋಗೋದು ಅಥವಾ ಸೈಕಲ್ ತುಳಿಯೋದು ಒಳ್ಳೆಯದು ಅಂತ ಕೆಲವರು ಹೇಳಿದ್ದಾರೆ. ಅತಿಯಾದ ಕ್ಯಾಬ್ ದರಗಳ ಜೊತೆಗೆ ಬೆಂಗಳೂರಿನ ಟ್ರಾಫಿಕ್ ಜಾಮ್ ಕೂಡ ಕುಖ್ಯಾತವಾಗಿದೆ. ಲಕ್ಷಾಂತರ ವಾಹನಗಳು ರಸ್ತೆಯಲ್ಲಿ ಓಡಾಡುತ್ತಿವೆ. 

ರಸ್ತೆಗಳು ಸರಿ ಇಲ್ಲದಿದ್ರೂ ಆಟೋ ದರ ಹೆಚ್ಚಳ ಏಕೆ?

ಗಂಟೆಗಟ್ಟಲೆ ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿಹಾಕಿಕೊಳ್ಳುವುದು ಸಾಮಾನ್ಯ. ವಾಹನ ದಟ್ಟಣೆಗೆ ತಕ್ಕಂತೆ ಉತ್ತಮ ರಸ್ತೆಗಳಿಲ್ಲದಿರುವುದು ಸಮಸ್ಯೆ ಅಂತ ಜನರು ಹೇಳುತ್ತಾರೆ. ಅದೇ ಸಮಯದಲ್ಲಿ ಸಾಕಷ್ಟು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲದಿರುವುದು ಸಾಮಾನ್ಯ ಜನರ ತೊಂದರೆಗಳನ್ನು ಹೆಚ್ಚಿಸುತ್ತದೆ  ಎಂದು ಬೆಂಗಳೂರಿಗರು ಹೇಳುತ್ತಾರೆ.

 

 



Source link

Leave a Reply

Your email address will not be published. Required fields are marked *