17

Image Credit : Instagram
ಒಂದಾಗೋ ಕಾಲ
ಅಮೃತಧಾರೆ (Amruthadhaare Serial) ಇನ್ನೇನು ಮುಗಿಯುವ ಹಂತದಲ್ಲಿದೆ. ಬೇರೆ ಬೇರೆಯಾಗಿದ್ದ ಗೌತಮ್ ಮತ್ತು ಭೂಮಿಕಾ ಒಂದಾಗುವ ಕಾಲ ಬಂದೇ ಬಿಟ್ಟಿದೆ. ಲವ್ ಅಜ್ಜಿಯ ಎಂಟ್ರಿ ಆಗಿರೋ ಕಾರಣ, ಇವರಿಬ್ಬರೂ ಒಂದಾಗುವುದರಲ್ಲಿ ಸಂದೇಹವೇ ಇಲ್ಲ.
27
Image Credit : Instagram
ನಾಟಕ ಮಾಡುವಲ್ಲಿ ಎತ್ತಿದ ಕೈ
ಅಷ್ಟಕ್ಕೂ ಇದಾಗಲೇ ಆಕಾಶ್ ಮತ್ತು ಮಿಂಚು ಇಬ್ಬರಿಗೂ ಗೌತಮ್ ಮತ್ತು ಭೂಮಿಕಾ ಸತ್ಯ ಗೊತ್ತಾಗಿದೆ. ಆಕಾಶ್ಗೆ ಗೌತಮ್ನೇ ತನ್ನ ಅಪ್ಪ ಅನ್ನೋದು ತಿಳಿದಿದ್ದರೂ ನಾಟಕ ಮಾಡುವಲ್ಲಿ ಎತ್ತಿದ ಕೈ ಅವನದ್ದು. ತನಗೆ ಸತ್ಯ ಗೊತ್ತು ಎನ್ನೋದನ್ನು ಇದುವರೆಗೆ ಬಾಯಿ ಬಿಟ್ಟಿಲ್ಲ. ಅದೇ ರೀತಿ ಮಿಂಚು ಕೂಡ.
37
Image Credit : zee5
ಭೂಮಿಕಾ ಹುಟ್ಟುಹಬ್ಬ
ಇದೀಗ ಭೂಮಿಕಾಳ ಹುಟ್ಟುಹಬ್ಬದ ಸಂಭ್ರಮ ನಡೆಯುತ್ತಿದೆ. ಇದೇ ವೇಳೆ ಇಬ್ಬರನ್ನೂ ಒಂದು ಮಾಡಲು ಎಲ್ಲರೂ ಪಣ ತೊಟ್ಟಿದ್ದಾರೆ.
47
Image Credit : Instagram
ಅಪ್ಪನಿಂದ ಸತ್ಯ
ಇದೀಗ ಅಮ್ಮನಿಗೆ ಏನು ಇಷ್ಟ ಎನ್ನೋದನ್ನು ಅಪ್ಪನ ಬಾಯಿಯಿಂದ್ಲೇ ಕೇಳಿ ತಿಳಿಯುವ ಹಂಬಲ ಆಕಾಶ್ಗೆ. ಆದರೆ ಗೌತಮ್ ಅಷ್ಟು ಸುಲಭದಲ್ಲಿ ಹೇಳ್ತಾನಾ? ನಿನ್ನ ಮಮ್ಮಿ ನಿನಗೆ ಗೊತ್ತಿರಬೇಕು ಅಂದಿದ್ದಾನೆ..
57
Image Credit : Instagram
ಆಕಾಶ್ ಕಿತಾಪತಿ
ನಿಮ್ಮ ಹೆಂಡ್ತಿ ಆಗಿದ್ರೆ ಗೊತ್ತಿರುತ್ತಿತ್ತಲ್ಲ ಹೇಳಿ ಎಂದೆಲ್ಲಾ ಗೌತಮ್ನ ಬಾಯಿ ಬಿಡಿಸೋಕೆ ಟ್ರೈ ಮಾಡಿದ್ದಾನೆ ಆಕಾಶ್. ಆದ್ರೆ ಗೌತಮ್ ಬಾಯಿ ಬಿಡಲಿಲ್ಲ.
67
Image Credit : zee5
ನಿಜ ಹೇಳಿದ ಗೌತಮ್
ನನ್ನ ಅಮ್ಮನಿಗೆ ಸೀರೆ, ಮಲ್ಲಿಗೆ ಅಂದ್ರೆ ಇಷ್ಟ ಎಂದಿದ್ದಾನೆ. ಕೊನೆಗೆ ಕಾಫಿ ಎಂದಿದ್ದಾನೆ. ಆಗ ಗೌತಮ್ ಸಡನ್ ಆಗಿ ಹೌದು ಕಾಫಿಯ ಜೊತೆ ಪುಸ್ತಕ ಓದೋದು ಅಂದ್ರುನೂ ಇಷ್ಟ ಇರಬೇಕು ನೋಡು ಎಂದಿದ್ದಾನೆ. ಆಗ ಥಟ್ ಅಂತ ಆಕಾಶ್, ನಿಜ ನಿಜ.. ಹಾಗಿದ್ರೆ ಪುಸ್ತಕನೇ ಕೊಡ್ತೇನೆ ಎಂದಿದ್ದಾನೆ.
77
Image Credit : Instagram
ಲವ್ ಅಜ್ಜಿ ಪ್ಲ್ಯಾನ್
ಅದೇ ಇನ್ನೊಂದೆಡೆ, ಗೌತಮ್ ಅಜ್ಜಿ ದಂಪತಿಯನ್ನು ಒಂದು ಮಾಡುವ ನಿಟ್ಟಿನಲ್ಲಿ ಪ್ಲ್ಯಾನ್ ಮಾಡಿದ್ದಾಳೆ. ತನ್ನ ಸ್ಥಿತಿ ಗಂಭೀರವಾಗಿದೆ ಎಂದು ಇಬ್ಬರಿಗೂ ಹೇಳಿ ಬರುವಂತೆ ಮಾಡಿಸಿದ್ದಾಳೆ. ಒಟ್ಟಿನಲ್ಲಿ ಎಲ್ಲವೂ ಶೀಘ್ರದಲ್ಲಿ ಸುಖಾಂತ್ಯವಾಗುವ ಸಾಧ್ಯತೆ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.