Headlines

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ ಗೀತಾಮಣಿ & ಯುಟ್ಯೂಬರ್: ₹1.2 ಲಕ್ಷ ಹಣ ಪಡೆಯುವಾಗ ರೆಡ್‌ ಹ್ಯಾಂಡ್ ಆಗಿ ಅರೆಸ್ಟ್! | Bengaluru Rural Nelamangala Lokayukta Trap Pdo Geethamani Youtuber Gangadhar Arrested For Bribery Sat

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ ಗೀತಾಮಣಿ & ಯುಟ್ಯೂಬರ್: ₹1.2 ಲಕ್ಷ ಹಣ ಪಡೆಯುವಾಗ ರೆಡ್‌ ಹ್ಯಾಂಡ್ ಆಗಿ ಅರೆಸ್ಟ್! | Bengaluru Rural Nelamangala Lokayukta Trap Pdo Geethamani Youtuber Gangadhar Arrested For Bribery Sat



ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ ಗೀತಾಮಣಿ & ಯುಟ್ಯೂಬರ್: ₹1.2 ಲಕ್ಷ ಹಣ ಪಡೆಯುವಾಗ ರೆಡ್‌ ಹ್ಯಾಂಡ್ ಆಗಿ ಅರೆಸ್ಟ್! | Bengaluru Rural Nelamangala Lokayukta Trap Pdo Geethamani Youtuber Gangadhar Arrested For Bribery Sat

ನೆಲಮಂಗಲದಲ್ಲಿ ಖಾತಾ ಬದಲಾವಣೆಗಾಗಿ ಲಕ್ಷಾಂತರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಿಡಿಒ ಅಧಿಕಾರಿಯೊಬ್ಬರು, ಹಣ ಪಡೆಯಲು ಯುಟ್ಯೂಬರ್‌ನನ್ನು ಮಧ್ಯವರ್ತಿಯಾಗಿ ಬಳಸಿಕೊಂಡಿದ್ದರು. ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಲಂಚ ಸ್ವೀಕರಿಸುತ್ತಿದ್ದ ಯುಟ್ಯೂಬರ್ ಹಾಗೂ ಪಿಡಿಒ ಇಬ್ಬರನ್ನೂ ಬಂಧಿಸಿದ್ದಾರೆ.

ಬೆಂಗಳೂರು (ಏ.17): ಸರ್ಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸಬೇಕಾದ ಅಧಿಕಾರಿಯೊಬ್ಬರು ಲಂಚಕ್ಕಾಗಿ ಖಾಸಗಿ ಯುಟ್ಯೂಬರ್‌ನನ್ನು ಮಧ್ಯವರ್ತಿಯನ್ನಾಗಿ ಬಳಸಿಕೊಂಡಿದ್ದ ರೋಚಕ ಪ್ರಕರಣವೊಂದು ಬೆಳಕಿಗೆ ಬಂದಿದೆ. ಖಾತಾ ಬದಲಾವಣೆಗೆ ಲಕ್ಷಾಂತರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಿಡಿಒ ಮತ್ತು ಅವರಿಗೆ ಸಾಥ್ ನೀಡಿದ್ದ ಯುಟ್ಯೂಬರ್ ಈಗ ಲೋಕಾಯುಕ್ತ ಅಧಿಕಾರಿಗಳ ಅತಿಥಿಯಾಗಿದ್ದಾರೆ.

ಘಟನೆಯ ವಿವರ:

ನೆಲಮಂಗಲ ತಾಲೂಕಿನ ಕಳಲುಘಟ್ಟ ಗ್ರಾಮ ಪಂಚಾಯತ್‌ನಲ್ಲಿ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಗೀತಾಮಣಿ ಮತ್ತು ನೆಲಮಂಗಲದ ಸ್ಥಳೀಯ ಯುಟ್ಯೂಬ್ ಚಾನೆಲ್ ನಡೆಸುತ್ತಿದ್ದ ಗಂಗಾಧರ್ ಬಂಧಿತ ಆರೋಪಿಗಳು. ಹೆಗ್ಗೇನಹಳ್ಳಿಯ ನಿವಾಸಿ ಫೈಜುಲ್ಲಾಸಾಬ್ ಎಂಬುವವರು ತಮ್ಮ ಜಮೀನಿನ ಖಾತಾ ಬದಲಾವಣೆಗಾಗಿ ಗ್ರಾಮ ಪಂಚಾಯತ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಕೆಲಸ ಮಾಡಿಕೊಡಲು ಪಿಡಿಒ ಗೀತಾಮಣಿ ಅವರು ಬರೋಬ್ಬರಿ 1.5 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಯುಟ್ಯೂಬರ್ ಮೂಲಕ ಡೀಲ್!

ಲಂಚದ ಹಣವನ್ನು ನೇರವಾಗಿ ಪಡೆಯಲು ಹಿಂಜರಿದ ಪಿಡಿಒ ಗೀತಾಮಣಿ, ಒಂದು ಉಪಾಯ ಹೂಡಿದ್ದರು. ತನಗೆ ಬರಬೇಕಾದ ಹಣವನ್ನು ಸ್ಥಳೀಯವಾಗಿ ಯುಟ್ಯೂಬ್ ವಾಹಿನಿ ನಡೆಸುತ್ತಿದ್ದ ಗಂಗಾಧರ್ ಎಂಬುವವನಿಗೆ ನೀಡುವಂತೆ ಫೈಜುಲ್ಲಾಸಾಬ್‌ಗೆ ಸೂಚಿಸಿದ್ದರು. ಈ ಮೂಲಕ ತಾವು ಸುರಕ್ಷಿತವಾಗಿರಬಹುದು ಎಂಬುದು ಪಿಡಿಒ ಅವರ ಆಲೋಚನೆಯಾಗಿತ್ತು. ಆದರೆ, ಭ್ರಷ್ಟ ಅಧಿಕಾರಿಗೆ ಪಾಠ ಕಲಿಸಲು ನಿರ್ಧರಿಸಿದ ಫೈಜುಲ್ಲಾಸಾಬ್ ಕೂಡಲೇ ಲೋಕಾಯುಕ್ತ ಅಧಿಕಾರಿಗಳನ್ನು ಸಂಪರ್ಕಿಸಿ ದೂರು ನೀಡಿದ್ದರು.

ಲೋಕಾಯುಕ್ತ ದಾಳಿ ಮತ್ತು ಬಂಧನ:

ಲೋಕಾಯುಕ್ತ ಅಧಿಕಾರಿಗಳು ಹಾಕಿದ ಪ್ಲಾನ್‌ನಂತೆ, ಫೈಜುಲ್ಲಾಸಾಬ್ ಅವರು ಲಂಚದ ಮೊತ್ತದಲ್ಲಿ ಮೊದಲ ಕಂತಾಗಿ 1.2 ಲಕ್ಷ ರೂಪಾಯಿ ಹಣವನ್ನು ಗಂಗಾಧರ್ ಬಳಿ ನೀಡಲು ಹೋದರು. ನೆಲಮಂಗಲದ ಬಳಿ ಗಂಗಾಧರ್ ಲಂಚದ ಹಣವನ್ನು ಕೈಗೆ ಪಡೆಯುತ್ತಿದ್ದಂತೆಯೇ ಹಠಾತ್ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಗಂಗಾಧರ್ ನೀಡಿದ ಮಾಹಿತಿಯ ಆಧಾರದ ಮೇಲೆ ಪಿಡಿಒ ಗೀತಾಮಣಿ ಅವರನ್ನೂ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ದಾಳಿಯ ವೇಳೆ ಲಂಚದ 1.2 ಲಕ್ಷ ರೂಪಾಯಿ ಹಣವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಈ ಕಾರ್ಯಾಚರಣೆಯು ಭ್ರಷ್ಟಾಚಾರಕ್ಕೆ ಸಾಥ್ ನೀಡುವವರಿಗೆ ಮತ್ತು ಮಧ್ಯವರ್ತಿಗಳಾಗಿ ಕೆಲಸ ಮಾಡುವವರಿಗೆ ದೊಡ್ಡ ಎಚ್ಚರಿಕೆಯಾಗಿದೆ. ಕೇವಲ ಸರ್ಕಾರಿ ಅಧಿಕಾರಿಗಳು ಮಾತ್ರವಲ್ಲದೆ, ಅವರ ಪರವಾಗಿ ಲಂಚ ಸಂಗ್ರಹಿಸುವ ಖಾಸಗಿ ವ್ಯಕ್ತಿಗಳೂ ಕೂಡ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಈ ಪ್ರಕರಣದಿಂದ ಸಾಬೀತಾಗಿದೆ. ಸದ್ಯ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಲೋಕಾಯುಕ್ತ ತನಿಖೆ ಮುಂದುವರಿದಿದೆ.



Source link

Leave a Reply

Your email address will not be published. Required fields are marked *