Lionel Messi in India: ಮುಖ್ಯ ಸಂಘಟಕ ಸತಾದ್ರು ದತ್ತ ಬಂಧನ; ಅಭಿಮಾನಿಗಳಿಗೆ ಟಿಕೆಟ್ ಹಣ ಮರು ಪಾವತಿ

Lionel Messi in India: ಮುಖ್ಯ ಸಂಘಟಕ ಸತಾದ್ರು ದತ್ತ ಬಂಧನ; ಅಭಿಮಾನಿಗಳಿಗೆ ಟಿಕೆಟ್ ಹಣ ಮರು ಪಾವತಿ


3 ದಿನಗಳ ಪ್ರವಾಸಕ್ಕೆಂದು ಬರೋಬ್ಬರಿ 14 ವರ್ಷಗಳ ಬಳಿಕ ಭಾರತಕ್ಕೆ ಬಂದಿಳಿದಿರುವ ಫುಟ್ಬಾಲ್ ಲೆಜೆಂಡ್ ಲಿಯೋನಲ್ ಮೆಸ್ಸಿಗೆ (Lionel Messi) ಪ್ರವಾಸದ ಮೊದಲ ದಿನವೇ ದುಃಸ್ವಪ್ನವಾಗಿ ಮಾರ್ಪಟ್ಟಿದೆ. ಭಾರತೀಯ ಅಭಿಮಾನಿಗಳನ್ನು ಕಾಣಲು ಸಂತಸದಿಂದಲೇ ಭಾರತಕ್ಕೆ ಬಂದಿರುವ ಮೆಸ್ಸಿಗೆ ಸಂಘಟಕರ ಕಳಪೆ ಸಿದ್ಧತೆಗಳು ಒದಗಿಸಿವೆ. ವಾಸ್ತವವಾಗಿ ಮೆಸ್ಸಿ 3 ದಿನಗಳ ಪ್ರವಾಸದ ಅಂಗವಾಗಿ ಮೊದಲ ದಿನವಾದ ಇಂದು ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣಕ್ಕೆ ( ಕೋಲ್ಕತ್ತಾ ಸಾಲ್ಟ್ ಲೇಕ್ ಸ್ಟೇಡಿಯಂ) ಭೇಟಿ ನೀಡಿದ್ದರು. ಇತ್ತ ಅಭಿಮಾನಿಗಳು ಕೂಡ ಬೆಳಿಗ್ಗೆಯಿಂದಲೇ ಮೆಸ್ಸಿಯನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಆದರೆ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಸಂಘಟಕರ ಕಳಪೆ ವ್ಯವಸ್ಥೆಯಿಂದಾಗಿ ಅಭಿಮಾನಿಗಳ ಆಕ್ರೋಶದ ಕಟ್ಟೆ ಒಡೆಯಿತು. ಇದರಿಂದ ಮೈದಾನದಲ್ಲಿ ಗದ್ದಲ ಸೃಷ್ಟಿಯಾಯ್ತು.

ಮುಖ್ಯ ಸಂಘಟಕರ ಬಂಧನ, ಟಿಕೆಟ್ ಹಣ ವಾಪಸ್

ಇದೀಗ ಈ ಅಹಿತಕರ ಘಟನೆಗೆ ಸಂಘಟಕ ಕಳಪೆ ವ್ಯವಸ್ಥೆಯು ಕಾರಣ ಎನ್ನಲಾಗುತ್ತಿಲ್ಲ, ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಸರಿಯಾದ ವ್ಯವಸ್ಥೆ ಮಾಡಲಾಗಿದೆ ಈ ರೀತಿಯ ಅಹಿತಕರ ಘಟನೆಗೆ ಕಾರಣವಾದ ಮೆಸ್ಸಿ ಅವರ ಇಂಡಿಯಾ ಗೋಟ್ ಟೂರ್ 2025 ರ ಮುಖ್ಯ ಸಂಘಟಕರಾದ ಸತಾದ್ರು ಅವರನ್ನು ಬಂಧಿಸಲಾಗಿದೆ. ಹಾಗೆಯೇ ಮಾರಾಟವಾದ ಎಲ್ಲಾ ಟಿಕೆಟ್‌ಗಳ ಹಣವನ್ನು ಅಭಿಮಾನಿಗಳಿಗೆ ಮರುಪಾವತಿಸಲಾಗುವುದು ಎಂದು ಸಂಘಟಕರು ಲಿಖಿತವಾಗಿ ವರದಿಯಾಗಿದೆ.

14 ವರ್ಷಗಳ ನಂತರ ಮೆಸ್ಸಿ ಭಾರತ ಭೇಟಿ; ಸಚಿನ್, ಕೊಹ್ಲಿ ಜೊತೆ ಕ್ರಿಕೆಟ್ ಆಡಲಿರುವ ಫುಟ್ಬಾಲ್ ಲೆಜೆಂಡ್

ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದದ್ದಾರೂ ಏನು?

ವಾಸ್ತವವಾಗಿ ಮೆಸ್ಸಿಯನ್ನು ಕಾಣಲು ದುಬಾರಿ ಹಣ ನೀಡಿ ಕ್ರೀಡಾಂಗಣಕ್ಕೆ ಬಂದಿದ್ದ ಅಭಿಮಾನಿಗಳಿಗೆ ನಿರಾಸೆ ಎದುರಾಗಿದೆ. ಇದಕ್ಕೆ ಕೆಲವು ಕಾರಣ ಮೆಸ್ಸಿ ಕೆಲವೇ ನಿಮಿಷಗಳಲ್ಲಿ ಕಾಲ ಮೈದಾನದಲ್ಲಿದ್ದು, ಅಲ್ಲಿಂದ ತೆರಳಿರುವುದು. ಜೊತೆಗೆ ಕ್ರೀಡಾಂಗಣಕ್ಕೆ ಮೆಸ್ಸಿ ಆಗಮನಿಸಿದಾಗ ಅವರ ಸುತ್ತ ಮುತ್ತ ಭಾರಿ ಜನಸಮೂಹ ಇದ್ದ ಗ್ಯಾಲರಿಯಲ್ಲಿ ಕುಳಿತಿದ್ದ ಅಭಿಮಾನಿಗಳಿಗೆ ಮೆಸ್ಸಿಯನ್ನು ನೋಡಲು ಸಾಧ್ಯವಾಗಿಲ್ಲ. ಹೀಗಾಗಿ ತಾಳ್ಮೆ ಕಳೆದುಕೊಂಡ ಅಭಿಮಾನಿಗಳು ಮೈದಾನದತ್ತ ತಾವು ತಂದಿದ್ದ ನೀರಿನ ಬಾಟಲ್‌ಗಳು ಹಾಗೂ ಗ್ಯಾಲರಿಯಲ್ಲಿ ಅಳವಡಿಸಿದ್ದ ಚೇರ್‌ಗಳನ್ನು ತೂರಿದ್ದಾರೆ. ಈ ಗೇಟ್‌ಗಳನ್ನು ಮುರಿದು ಅಭಿಮಾನಿಗಳು ಮೈದಾನದತ್ತ ಓಡಿದ್ದಾರೆ. ಇತ್ತ ಪರಿಸ್ಥಿತಿಮೀರಿರುವ ಸಂಘಟಕರು ಅಲ್ಲಿಂದ ಕಾಲ್ಕಿತ್ತಿದ್ದು, ಪೊಲೀಸರು ಅಭಿಮಾನಿಗಳನ್ನು ನಿಯಂತ್ರಿಸಲು ಹರಸಾಹಸಪಟ್ಟಿದ್ದಾರೆ.

ತನಿಖಾ ಸಮಿತಿ ರಚನೆ; ಮಮತಾ ಬ್ಯಾನರ್ಜಿ

ಇನ್ನು ಈ ಅಹಿತಕರ ಘಟನೆಯ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ‘ಇಂದು ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಘಟನೆಯಿಂದ ನಾನು ತೀವ್ರವಾಗಿ ಮುಖ್ಯಮಂತ್ರಿಯಾಗಿ ಕಾಣಿಸಿಕೊಂಡಿದ್ದೇನೆ. ಈ ದುರದೃಷ್ಟಕರ ಘಟನೆಗಾಗಿ ಲಿಯೋನೆಲ್ ಮೆಸ್ಸಿ, ಎಲ್ಲಾ ಕ್ರೀಡಾ ಪ್ರೇಮಿಗಳು ಮತ್ತು ಅವರ ಅಭಿಮಾನಿಗಳಿಗೆ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ಹಾಗೆಯೇ ನಿವೃತ್ತ ಕಲ್ಕತ್ತಾ ನ್ಯಾಯಾಧೀಶ ನ್ಯಾಯಮೂರ್ತಿ ಆಶಿಮ್ ಕುಮಾರ್ ರೇ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇರಲಿದ್ದಾರೆ. ವಿವರವಾದ ತನಿಖೆ ನಡೆಸುವುದು, ಜವಾಬ್ದಾರಿಯನ್ನು ವಹಿಸುವುದು ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟಲು ಸರಿಪಡಿಸುವ ಕ್ರಮಗಳನ್ನು ಸೂಚಿಸುವ ಕಾರ್ಯವನ್ನು ಈ ಸಮಿತಿಗೆ ವಹಿಸಲಾಗಿದೆ.

ಹೆಚ್ಚಿನ ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 3:44 pm, ಶನಿ, 13 ಡಿಸೆಂಬರ್ 25





Source link

Leave a Reply

Your email address will not be published. Required fields are marked *