Headlines

Karna Serial: ನಿಧಿ ಮರ್ಯಾದೆ ತೆಗೆದ ಸಂಜಯ್‌; ಸಿಡಿದೆದ್ದ ಕರ್ಣ ಧರ್ಮದೇಟು ಕೊಡೋದನ್ನು ಯಾರಿಂದನೂ ತಡೆಯೋಕಾಗಲ್ಲ | Karna Kannada Serial Written Update Karna Slams Fight With Sanjay For Nidhi

Karna Serial: ನಿಧಿ ಮರ್ಯಾದೆ ತೆಗೆದ ಸಂಜಯ್‌; ಸಿಡಿದೆದ್ದ ಕರ್ಣ ಧರ್ಮದೇಟು ಕೊಡೋದನ್ನು ಯಾರಿಂದನೂ ತಡೆಯೋಕಾಗಲ್ಲ | Karna Kannada Serial Written Update Karna Slams Fight With Sanjay For Nidhi


15

ನಿಧಿ ಪಾರ್ಟ್‌ ಟೈಮ್‌ ಜಾಬ್‌

Image Credit : zee5

ನಿಧಿ ಪಾರ್ಟ್‌ ಟೈಮ್‌ ಜಾಬ್‌

ನಿಧಿ ಮನೆ ಸುಟ್ಟು ಹೋಗಿದೆ. ಹೀಗಾಗಿ ಅವಳು ಕರ್ಣನ ಮನೆಯಲ್ಲಿದ್ದಾಳೆ. ಕರ್ಣನ ಮನೆಯವರು ಅಜ್ಜಿಗೆ ಹಾಗೂ ನಿಧಿಗೆ ಮನಸ್ಸಿಗೆ ಬಂದಂತೆ ಅವಮಾನ ಮಾಡುತ್ತಿದ್ದಾರೆ. ಈಗ ನಿಧಿ ಪಾರ್ಟ್‌ ಟೈಮ್‌ ಜಾಬ್‌ ಎನ್ನೋ ಥರ ಮೋಟರ್‌ಸೈಕಲ್‌ ಟ್ಯಾಕ್ಸಿ ಓಡಿಸಲು ಯೋಚನೆ ಮಾಡಿದಳು. ಇದನ್ನೇ ಸಂಜಯ್‌ ಪ್ರಯೋಜನ ಪಡೆದುಕೊಂಡನು.

25

 ಪೊಲೀಸರ ಎಂಟ್ರಿ ಆಯ್ತು

Image Credit : zee5

ಪೊಲೀಸರ ಎಂಟ್ರಿ ಆಯ್ತು

ಕಣ್ಣಿಲ್ಲದ ಹುಡುಗಿಯೊಬ್ಬಳು ನಿಧಿ ಬಳಿ ಬಂದು ಡ್ರಾಪ್‌ ಮಾಡಲು ಹೇಳಿದಳು. ನಿಧಿ ಅವಳನ್ನು ಸರಿಯಾದ ಅಡ್ರೆಸ್‌ಗೆ ಡ್ರಾಪ್‌ ಮಾಡಿದಳು. ಆದರೆ ಆ ಹುಡುಗಿ ನಿಧಿಯನ್ನು ಮನೆಯೊಳಗಡೆ ಕರೆದುಕೊಂಡು ಹೋಗಲು ನೋಡಿದಳು. ಅಲ್ಲಿ ಪೊಲೀಸರ ಎಂಟ್ರಿ ಆಯ್ತು, ಆ ಹುಡುಗಿಗೆ ಕಣ್ಣಿದೆ, ಇದೆಲ್ಲ ನಾಟಕ ಎನ್ನೋದು ಗೊತ್ತಾಯ್ತು.

35

ಊರೂರು ತಿರುಗಿದ ಕರ್ಣ

Image Credit : zee5

ಊರೂರು ತಿರುಗಿದ ಕರ್ಣ

ವೇಶ್ಯಾವಾಟಿಕೆ ಎಂದು ನಿಧಿಯನ್ನು ಪೊಲೀಸರು ಕರೆದುಕೊಂಡು ಹೋದರು. ನಿಧಿ ಮನೆಗೆ ಬಂದಿಲ್ಲ ಎಂದು ಕರ್ಣ ಇಡೀ ಊರು ತಿರುಗಾಡಿದ್ದಾನೆ, ಪೊಲೀಸ್‌ ಸ್ಟೇಶನ್‌ಗೆ ಬಂದು ಕಂಪ್ಲೆಂಟ್‌ ಕೊಡೋಕೆ ನೋಡಿದರೂ ಕೂಡ ಪ್ರಯೋಜನ ಆಗಿಲ್ಲ. ಬೆಳಗ್ಗೆ ನಿಧಿಯನ್ನು ಪೊಲೀಸರು ಮನೆಗೆ ಕಳಿಸಿದ್ದಾರೆ.

45

ನಿಧಿಯನ್ನು ಟಾರ್ಗೆಟ್‌ ಮಾಡಿರೋ ಸಂಜಯ್

Image Credit : zee5

ನಿಧಿಯನ್ನು ಟಾರ್ಗೆಟ್‌ ಮಾಡಿರೋ ಸಂಜಯ್

ನನ್ನ ಬಗ್ಗೆ ತಪ್ಪು ತಿಳಿದುಕೊಂಡು, ಈ ರೀತಿ ಅವಮಾನ ಮಾಡಿದ್ದಾರೆ ಎಂದು ನಿಧಿ ಬೇಸರ ಮಾಡಿಕೊಂಡಿದ್ದಳು. ಈ ಬಗ್ಗೆ ಏನೂ ತಿಳಿಯದ ಕರ್ಣ ಕೂಡ ಅಲ್ಲಿಗೆ ಬಂದನು. ಆಮೇಲೆ ಕರ್ಣನನ್ನು ನೋಡಿ ತಬ್ಬಿಕೊಂಡು ಅತ್ತ ನಿಧಿ, ಎಲ್ಲ ವಿಷಯವನ್ನು ಹೇಳಿದ್ದಾಳೆ. ಸಂಜಯ್‌ ಮೊದಲ ಬಾರಿಗೆ ಈ ರೀತಿ ಮಾಡಿಲ್ಲ, ಈ ಹಿಂದೆಯೂ ತಪ್ಪಾಗಿ ಇಂಜೆಕ್ಷನ್‌ ಕೊಟ್ಟು, ಅದನ್ನು ನಿಧಿ ತಲೆಗೆ ಹಾಕಿ ಕಾಲೇಜಿನಿಂದ ಸಸ್ಪೆಂಡ್‌ ಆಗೋ ಥರ ಮಾಡಿದ್ದನು.

55

ಸಂಜಯ್‌ಗೆ ಬಿತ್ತು ಧರ್ಮದೇಟು

Image Credit : zee5

ಸಂಜಯ್‌ಗೆ ಬಿತ್ತು ಧರ್ಮದೇಟು

ಈ ಬಾರಿ ಸಂಜಯ್‌ ಮಾಡಿರೋ ಕೆಲಸ ಎಂದು ಗೊತ್ತಾದ ಬಳಿಕ ಕರ್ಣ, ಈಗ ಅವನಿಗೆ ಬಾಕ್ಸಿಂಗ್‌ ಗ್ಲೋಸ್‌ ಹಾಕಿಕೊಂಡು ಹೊಡೆದಿದ್ದಾನೆ. ಸಂಜಯ್‌ ಪುನಃ ಕರ್ಣನಿಗೆ ಹೊಡೆದರೂ ಪ್ರಯೋಜವಿಲ್ಲದಂತಾಗಿದೆ. ಈಗ ನನ್ನ ಜೊತೆ ಕರ್ಣ ಇದ್ದಾನೆ ಎಂದು ನಿಧಿ, ಸಂಜಯ್‌ ಮುಖಕ್ಕೆ ಹೊಡೆದಂತೆ ಮಾತನಾಡಿದ್ದಾಳೆ. ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

Padmashree Bhat

ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.



Source link

Leave a Reply

Your email address will not be published. Required fields are marked *