ಬೆಂಗಳೂರು, ಎ. 21: ಪ್ರತಿದಿನ ಬೆಂಗಳೂರು ರಸ್ತೆಯಲ್ಲೇ ದೂರು, (ಬೆಂಗಳೂರು ಗುಂಡಿಗಳು) ಸೋಶಿಯಲ್ ಮೀಡಿಯಾದಲ್ಲಿ ಬೆಂಗಳೂರು ರಸ್ತೆ ಸಮಸ್ಯೆಯ ಬಗ್ಗೆ ಪೋಸ್ಟ್ ಮಾಡುವುದೇ ಒಂದು ಕೆಲಸ. ಜನ ಏನೇ ಮಾಡಿದ್ರು, ಈ ಪೋಸ್ಟ್, ಕೂಗು, ಅಧಿಕಾರಿಗಳು, ರಾಜಕಾರಣಿಗಳ ಕಿವಿ ಬೀಳುವುದಿಲ್ಲ. ಏಕೆಂದರೆ ಅವರಿಗೆ ಇದನ್ನು ಕೇಳಿ ಕೇಳಿ ಸಾಕಿದೆ. ಅದಕ್ಕೆ ಗಾಂಧೀಜಿಯ ಕೋತಿಗಳಂತೆ ರಸ್ತೆ ಸಮಸ್ಯೆ ಕೇಳುವುದಿಲ್ಲ, ನೋಡುವುದಿಲ್ಲ, ಅದರ ಬಗ್ಗೆ ಮಾತನಾಡುವುದಿಲ್ಲ. ಇದು ನಮ್ಮ ಅಧಿಕಾರಿಗಳು ಹಾಗೂ ರಾಜಕೀಯ ನಾಯಕರ ಪರಿಸ್ಥಿತಿ. ಇದೀಗ ಬೆಂಗಳೂರು ಮತ್ತೊಂದು ರಸ್ತೆಯ ಬಗ್ಗೆ ವಿಡಿಯೋವೊಂದು ವೈರಲ್ ಆಗಿದೆ. ಇದು ಸ್ವಲ್ಪ ವಿಭಿನ್ನವಾಗಿದೆ. ಶಾಲಾ ಮಕ್ಕಳು ಮತ್ತು ಪ್ರಯಾಣಿಕರು ಪ್ರತಿದಿನ ಈ ರಸ್ತೆಯಲ್ಲಿ ಎಂಟು ವರ್ಷಗಳ ಕಾಲ ಹೆಚ್ಚು ಕಾಲ ಶೋಚನೀಯ ಸ್ಥಿತಿಯಲ್ಲಿದ್ದಾರೆ ಎಂದು ನಿವಾಸಿಯೊಬ್ಬರು ಹತಾಶೆಯಿಂದ ಈ ಪೋಸ್ಟ್ನಲ್ಲಿ ಹೇಳಿದ್ದಾರೆ. ಈ ವಿಡಿಯೋವನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.
ಈ ರಸ್ತೆಗಾಗಿ ಪ್ರತಿಭಟನೆ, ಮನವಿ ಎಲ್ಲವೂ ಆಗಿದೆ. ಆದರೆ ಸರ್ಕಾರ ಈ ಯಾವುದಕ್ಕೂ ತಲೆಬಿಸಿ ಮಾಡಿಕೊಂಡಿಲ್ಲ ಇವರ ಬೇಸರ. ನಮ್ಮ ಮಕ್ಕಳು ಪ್ರತಿದಿನ ಈ ಗುಂಡಿ ಬಿದ್ದ ರಸ್ತೆಯಲ್ಲೇ ಹೋಗುತ್ತಾರೆ. 8 ವರ್ಷದ ಆಡಳಿತ ಬೇರೆಯಾಗಿದೆ. ಬೇರೆ ಬೇರೆ ಸರ್ಕಾರಗಳು ಬಂತು, ಅದ್ರೂ ಈ ರಸ್ತೆಯಲ್ಲಿ ಯಾವ ಬದಲಾವಣೆ ಆಗಿಲ್ಲ. ಈ ರಸ್ತೆ ದುರುಸ್ಥಿತಿ ಮಾಡುವಂತೆ ಅನೇಕ ಭಾರೀ ಜನನಾಯಕರನ್ನು ಕೇಳಿದೆವು ಯಾವುದಕ್ಕೂ ಉತ್ತರವಿಲ್ಲ. ಇದು ಒಂದು ರೀತಿಯಲ್ಲಿ ನಾಗರಿಕರ ಮನವಿಯನ್ನು ನಿರ್ಲಕ್ಷ್ಯ ಮಾಡಿದಂತೆ ಕಾಣುತ್ತದೆ. ಕಳಪೆ ಮೂಲಸೌಕರ್ಯ, ಅಧಿಕಾರಿಗಳು ಅಸಡ್ಡೆ ಇದಕ್ಕೆ ಕಾರಣ. ಬಂದಾಗ ಮಾತ್ರ ರಾಜಕಾರಣಿಗಳು, ಅಧಿಕಾರಿಗಳು ಮನೆಗೆ ಬಂದು ಭರವಸೆ ಇದೆ. ಗೆದ್ದ ನಂತರ ನಮ್ಮ ಸಮಸ್ಯೆಯನ್ನು ಹೇಳಿದ್ರೆ ನಿರ್ಲಕ್ಷ್ಯ ಮಾಡುತ್ತಾರೆ.
ಇದನ್ನೂ ಓದಿ: ಬೆಂಗಳೂರಿನ ವ್ಯಕ್ತಿಗೆ 14 ದಿನ ಡಿಜಿಟಲ್ ಅರೆಸ್ಟ್, ₹1.62 ಕೋಟಿ ವಂಚನೆ
ಇಲ್ಲಿದೆ ನೋಡಿ ವೈರಲ್ ಪೋಸ್ಟ್:
ಬೆಂಗಳೂರಿನಲ್ಲಿ ವಾಸಿಸುವ ಜನರ ಹತಾಶೆ ದಿನದಿಂದ ದಿನಕ್ಕೆ ಕುದಿಯುತ್ತಿದೆ. ತಮ್ಮ ದುಃಖವನ್ನು ವ್ಯಕ್ತಪಡಿಸಿದ ನಿವಾಸಿಯೊಬ್ಬರು, ತಮ್ಮ ಮಕ್ಕಳು ಪ್ರತಿ ದಿನವೂ ಅದೇ ಹದಗೆಟ್ಟ ರಸ್ತೆಯಲ್ಲಿ ಶಾಲೆಗೆ ಹೋಗುತ್ತಾರೆ, ಇದು ಎಂಟಕ್ಕೂ ಹೆಚ್ಚು ಕಾಲ ದಯನೀಯ ಸ್ಥಿತಿಯಲ್ಲಿದೆ. pic.twitter.com/fEgxjUb6yY
— ಕರ್ನಾಟಕ ಪೋರ್ಟ್ಫೋಲಿಯೋ (@karnatakaportf) ಅಕ್ಟೋಬರ್ 18, 2025
ನಾವು ಮಾಡುವ ಪ್ರತಿಭಟನೆ, ಮನವಿ, ಕೂಗು ಅವರಿಗೆ ಕೇಳುತ್ತಿಲ್ಲ. ಇದೊಂದು ರಸ್ತೆ ಸಮಸ್ಯೆಯಲ್ಲ ಜನ ಧ್ವನಿಗೆ ಬೆಲೆ ನೀಡದೇ ಕಣ್ಣು ಮುಚ್ಚಿಕೊಂಡು ಕೂತಿರುವ ಅಧಿಕಾರ ವರ್ಗಗಳು. ನಂತರ ಹೋಗಿ ಈ ರಾಜಕೀಯ ನಾಯಕರು, ಭಾಷಣ, ರಿಬನ್ ಕಟ್ ಮಾಡುವುದು, ಇದೇ ಕೆಲಸ ಮಾಡುತ್ತಾರೆ. ಆದರೆ ಅಭಿವೃದ್ದಿ ಬಗ್ಗೆ ಅಥವಾ ಇಂತಹ ಸಮಸ್ಯೆಗಳ ಬಗ್ಗೆ ಯೋಚನೆ ಚೆನ್ನಾಗಿದೆ. ಇದು ನಮ್ಮ ಸಮಸ್ಯೆ ಅನೇಕ ಕಡೆ ಇಂತಹ ಸಮಸ್ಯೆಗಳು ಇವೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ