
<p>ವೈಸಿಪಿ ಸರ್ಕಾರದ ಅವಧಿಯಲ್ಲಿ ವೈಎಸ್ ಜಗನ್ ಮತ್ತು ಟಾಲಿವುಡ್ ನಡುವೆ ನಡೆದ ಘಟನೆಗಳ ಬಗ್ಗೆ ಬಾಲಕೃಷ್ಣ ಎಪಿ ಅಸೆಂಬ್ಲಿಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಬಾಲಯ್ಯ ಹೇಳಿಕೆಗೆ ಚಿರಂಜೀವಿ ಖಡಕ್ ಆಗಿ ಪ್ರತಿಕ್ರಿಯಿಸಿದ್ದರು.</p><img><p>ಹಿಂದಿನ ವೈಸಿಪಿ ಸರ್ಕಾರದ ಅವಧಿಯಲ್ಲಿ ಟಿಕೆಟ್ ದರಗಳ ಬಗ್ಗೆ ಚರ್ಚೆ ನಡೆದಿತ್ತು. ಚಿರಂಜೀವಿ ಮನವಿಗೆ ಜಗನ್ ಒಪ್ಪಿದ್ದರು. ಆದರೆ ಅಸೆಂಬ್ಲಿಯಲ್ಲಿ ಬಾಲಕೃಷ್ಣ ಇದನ್ನು ಅಲ್ಲಗಳೆದಿದ್ದು, ಚಿರಂಜೀವಿ ತಿರುಗೇಟು ನೀಡಿದ್ದರು.</p><img><p>ಸೆ. 25ರ ಅಸೆಂಬ್ಲಿ ಅಧಿವೇಶನದಲ್ಲಿ ಕಾಮಿನೇನಿ ಶ್ರೀನಿವಾಸ್ ಹೇಳಿಕೆಗೆ ಪ್ರತಿಕ್ರಿಯಿಸಿದ ಬಾಲಕೃಷ್ಣ, ಚಿರಂಜೀವಿ ಗಟ್ಟಿಯಾಗಿ ಕೇಳಿದ್ದಕ್ಕೆ ಜಗನ್ ಒಪ್ಪಿದ್ದು ಸುಳ್ಳು ಎಂದು ವ್ಯಂಗ್ಯವಾಡಿದ್ದನ್ನು ಟಿವಿಯಲ್ಲಿ ನೋಡಿದ್ದಾಗಿ ಚಿರಂಜೀವಿ ಹೇಳಿದ್ದರು.</p><img><p>ಚಿತ್ರರಂಗದ ನಿರ್ಮಾಪಕರು, ನಿರ್ದೇಶಕರು ನನ್ನ ಬಳಿ ಬಂದು ಟಿಕೆಟ್ ದರ ಏರಿಕೆ ಬಗ್ಗೆ ಸರ್ಕಾರದೊಂದಿಗೆ ಮಾತನಾಡಲು ಕೇಳಿಕೊಂಡರು. ರಾಜಮೌಳಿ, ಮಹೇಶ್, ಎನ್ಟಿಆರ್ ಸೇರಿದಂತೆ ಹಲವರು ನನ್ನನ್ನು ಭೇಟಿಯಾಗಿದ್ದರು ಎಂದು ಚಿರಂಜೀವಿ ವಿವರಿಸಿದ್ದಾರೆ.</p><img><p>ನಾನು ಅಂದಿನ ಸಚಿವ ಪೇರ್ನಿ ನಾನಿ ಜೊತೆ ಮಾತನಾಡಿದೆ. ಸಿಎಂ ಭೇಟಿಗೆ ದಿನಾಂಕ ನಿಗದಿಯಾದಾಗ ಬಾಲಕೃಷ್ಣ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದೆ, ಆದರೆ ಅವರು ಸಿಗಲಿಲ್ಲ. ನಂತರ ಕೆಲವರೊಂದಿಗೆ ನಾನೇ ಹೋಗಿ ಸಿಎಂ ಭೇಟಿಯಾದೆ.</p><img><p>ನಾನು ಮುತುವರ್ಜಿ ವಹಿಸಿದ್ದರಿಂದಲೇ ಸರ್ಕಾರ ಟಿಕೆಟ್ ದರ ಏರಿಕೆಗೆ ಒಪ್ಪಿತು. ಆ ನಿರ್ಧಾರದಿಂದ ನಿಮ್ಮ ‘ವೀರಸಿಂಹ ರೆಡ್ಡಿ’ ಹಾಗೂ ನನ್ನ ‘ವಾಲ್ತೇರು ವೀರಯ್ಯ’ ಚಿತ್ರಗಳಿಗೆ ಲಾಭವಾಯಿತು ಎಂದು ಚಿರಂಜೀವಿ ಸ್ಪಷ್ಟಪಡಿಸಿದ್ದಾರೆ.</p>
Source link
ನಿಮ್ಮ ವೀರಸಿಂಹ ರೆಡ್ಡಿ ಯಶಸ್ಸಿಗೂ ನಾನೇ ಕಾರಣ.. ಅಸೆಂಬ್ಲಿಯಲ್ಲಿ ಬಾಲಯ್ಯಗೆ ಚಿರಂಜೀವಿ ಮಾಸ್ ಕೌಂಟರ್